ರಾಂಚಿಯಲ್ಲಿ ಭಾರತಕ್ಕೆ ಜಯ
ಮೊದಲ ಟ್ವೆಂಟಿ-20 ಪಂದ್ಯ

ರಾಂಚಿ,ಅ.7: ಇಲ್ಲಿನ ಜೆಎಸ್ ಸಿಎ ಇಂಟರ್ ನ್ಯಾಶನಲ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಜಯ ಗಳಿಸಿದೆ.
ಮಳೆ ಬಾಧಿತ ಪಂದ್ಯದಲ್ಲಿ ಡಕ್ ವರ್ಥ್ ಲೂವಿಸ್ ನಿಯಮದಂತೆ ಗೆಲುವಿಗೆ 6 ಓವರ್ ಗಳಲ್ಲಿ 48 ರನ್ ಗಳಿಸಬೇಕಾದ ಭಾರತ ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ 1 ವಿಕೆಟ್ ನಷ್ಟದಲ್ಲಿ 49 ರನ್ ಗಳಿಸಿತು.
ಭಾರತದ ನಾಯಕ ವಿರಾಟ್ ಕೊಹ್ಲಿ ಔಟಾಗದೆ 22 ರನ್, ಶಿಖರ್ ಧವನ್ ಔಟಾಗದೆ 15ರನ್ ಮತ್ತು ರೋಹಿತ್ ಶರ್ಮ 11 ರನ್ ಗಳಿಸಿ ಔಟಾದರು.
Next Story





