ಚಿಕಿತ್ಸೆಗೆ ದಾನಿಗಳ ಸಹಾಯ ಯಾಚನೆ
ಪುತ್ತೂರು, ಅ. 9: ಹಲವಾರು ಮಸೀದಿಗಳಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದ ಪುತ್ತೂರು ತಾಲೂಕಿನ ಮುಕ್ರಂಪಾಡಿ ಸಮೀಪದ ಆನಂದಾಶ್ರಮ ಬಳಿಯಲ್ಲಿನ ನಿವಾಸಿ ಅಬೂಬಕ್ಕರ್ ಅಶ್ರಫಿ ಮುಸ್ಲಿಯಾರ್ ಅವರು ಕಳೆದ ಹಲವು ವರ್ಷಗಳಿಂದ ರೋಗ ಪೀಡಿತರಾಗಿ ಇದೀಗ ಕಣ್ಣು ಮತ್ತು ಕಿಡ್ನಿಯನ್ನು ಕಳೆದುಕೊಂಡು ಸಂಕಷ್ಟದ ಬದುಕು ಸಾಗಿಸುತ್ತಿದ್ದು ತನ್ನ ಚಿಕಿತ್ಸೆಗಾಗಿ ದಾನಿಗಳ ನೆರವು ಯಾಚಿಸುತ್ತಿದ್ದಾರೆ.
ಕೇರಳದ ಹಲವು ಭಾಗಗಳಲ್ಲಿನ ಮಸೀದಿಗಳಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಅಬೂಬಕ್ಕರ್ ಮುಸ್ಲಿಯಾರ್ ಅವರು ಧಾರ್ಮಿಕ ಶಿಕ್ಷಣವನ್ನು ನೀಡುತ್ತಾ ಬದುಕಿದವರು. ಸ್ವಂತಕ್ಕಾಗಿ ಏನನ್ನೂ ಮಾಡಿಕೊಳ್ಳದೆ ಸೇವಾ ಮನೋಭಾವದಿಂದಲೇ ಬದುಕಿದ ಅವರು ಸಣ್ಣದೊಂದು ಮನೆಯಲ್ಲಿ ಪತ್ನಿ ಮೈಮುನಾ ಮತ್ತು ಓರ್ವ ಪುತ್ರಿಯೊಂದಿಗೆ ವಾಸವಾಗಿದ್ದಾರೆ. ರೋಗದ ತೀವ್ರತೆಯಿಂದ 47ರ ಹರೆಯದ ಇವರು 70ರ ವೃದ್ದರಂತಾಗಿದ್ದಾರೆ. ಸಣ್ಣ ಪ್ರಾಯದಲ್ಲಿಯೇ ಇವರಿಗೆ ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆ ಅಂಟಿಕೊಂಡಿತ್ತು. ಇದರಿಂದಾಗಿ ತನ್ನ ಎರಡು ಕಣ್ಣುಗಳು ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಹಾಗೂ ಎರಡೂ ಕಿಡ್ನಿ ವೈಫಲ್ಯಕ್ಕೀಡಾಗಿದ್ದಾರೆ. ತನ್ನ ಎಲ್ಲಾ ಕೆಲಸ ಕಾರ್ಯಗಳಿಗೆ ಪತ್ನಿ ಮತ್ತು ಮಗಳನ್ನು ಅವಲಂಬಿಸಬೇಕಾಗಿದೆ.
ಅಬೂಬಕ್ಕರ್ ಮುಸ್ಲಿಯಾರ್ ಅವರ ಪತ್ನಿ ಮೈಮೂನಾ ಅವರು ಈಗ ಕುಟುಂಬದ ಹೊರೆಯನ್ನು ಹೊತ್ತುಕೊಂಡಿದ್ದಾರೆ. ಪುತ್ರಿ ಪುತ್ತೂರಿನ ಖಾಸಗಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
ಚಿಕಿತ್ಸೆಗೆ ತಿಂಗಳಿಗೆ 30 ಸಾವಿರ ಖರ್ಚು
ಅಬೂಬಕ್ಕರ್ ಮುಸ್ಲಿಯಾರ್ ಅವರ ಚಿಕಿತ್ಸೆಗಾಗಿ ತಿಂಗಳಿಗೆ ಸುಮಾರು 30 ಸಾವಿರ ಖರ್ಚು ಇದೆ. ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಡಯಾಲಿಸಿಸ್ಗೆ ಹಣ ಹೊಂದಾಣಿಕೆ ಮಾಡಲು ಪತ್ನಿ ಮ್ಯಮೂನಾ ಪಡಬಾರದ ಸಂಕಷ್ವನ್ನು ಪಡುತ್ತಿದ್ದಾರೆ. ತನ್ನ ಪತಿಯನ್ನು ಉಳಿಸಬೇಕು, ತನ್ನ ಮಗಳು ಅನಾಥಳಾಗಬಾರದು ಎಂಬ ಉದ್ದೇಶದಿಂದ ತನ್ನ ಪತಿಯ ಚಿಕಿತ್ಸೆಗಾಗಿ ನಿತ್ಯವೂ ಹೆಣಗಾಡಬೇಕಾದ ಅನಿವಾರ್ಯತೆ ಮ್ಯಮೂನಾ ಅವರದ್ದಾಗಿದೆ. ಅವರಿವರಿಂದ ಕಾಡಿ ಬೇಡಿ ತನ್ನ ಕುಟುಂಬ ನಿರ್ವಹಣೆ ಮತ್ತು ಪತಿಯ ಚಿಕಿತ್ಸೆಯನ್ನು ಭರಿಸುತ್ತಿದ್ದಾರೆ.
ಇದೀಗ ಅಸಹಾಯಕರಾಗಿರುವ ಅಬೂಬಕ್ಕರ್ ಮುಸ್ಲಿಯಾರ್ ಕುಟುಂಬವು ಸಹೃದಯಿ ಬಂಧುಗಳಿಂದ ನೆರವು ಯಾಚಿಸಿದೆ. ಸಹೃದಯಿ ದಾನಿಗಳು ಈ ಕುಟುಂಬಕ್ಕೆ ಬೆಳಕು ನೀಡಬೇಕಾಗಿದೆ. ಸಹಾಯ ಮಾಡಲಿಚ್ಚಿಸುವವರು ಅಬೂಬಕ್ಕರ್ ಅವರ ಪತ್ನಿ ಪತ್ನಿ ಮೈಮೂನಾ ಅವರ ಪುತ್ತೂರಿನ ವಿಜಯಾ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ: 117701011004396, ಐಎಫ್ಸಿ ಕೋಡ್ -ವಿಐಜೆಬಿ0001177 ಅಥವಾ ಮೊಬೈಲ್: 9449487234 ಇದನ್ನು ಸಂಪರ್ಕಿಸಬಹುದು.