ಕೇರಳದಲ್ಲಿ ಬಿಜೆಪಿ ಅಸ್ಥಿತ್ವ ಅಸಾಧ್ಯ : ವೀರಪ್ಪ ಮೊಯ್ಲಿ
ಪುತ್ತೂರು,ಅ.10:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳದಲ್ಲಿ ರಥಯಾತ್ರೆ ನಡೆಸಿ ಬಿಜೆಪಿ ಶಕ್ತಿಪ್ರದರ್ಶನ ನಡೆಸಿದ್ದಾರೆ. ಕಾರ್ಯಕರ್ತರನ್ನು ಎಷ್ಟೇ ಒಗ್ಗೂಡಿಸಿದ್ದರೂ ಕೇರಳದಲ್ಲಿ ಸಿಪಿಐಎಂ ಹಾಗೂ ಕಾಂಗ್ರೆಸ್ನ್ನು ಎದುರಿಸಿ ಬಿಜೆಪಿ ಬಿಜೆಪಿ ಅಸ್ಥಿತ್ವ ಪಡೆಯಲು ಅಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹೇಳಿದರು.
ಪುತ್ತೂರಿನ ಡಾ. ಶಿವರಾಮ ಕಾರಂತರ ನವೀಕೃತ ನಿವಾಸ ಲೋಕಾರ್ಪಣಾ ಕಾರ್ಯಕ್ರಮದ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಪುರಾಣಪ್ರಸಿದ್ದ ಅವಳಿವೀರರಾದ ಕೋಟಿಚೆನ್ನಯರ ತಾಯಿ ದೇಯಿ ಬೈದೇತಿಯ ಪರಮ ಪವಿತ್ರ ಕ್ಷೇತ್ರ ಪಡುಮಲೆಯಲ್ಲಿ ತಾಯಿ ದೇಯಿ ಬೈದೇತಿಯ ಮೂರ್ತಿಗೆ ಅಪಮಾನಗೈದ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಇರಲಿಲ್ಲ. ಇಂದು ಬಿಜೆಪಿ ಪಾದಯಾತ್ರೆ ಬಗ್ಗೆ ಮಾಹಿತಿ ಪಡೆದಾಗ ಈ ವಿಚಾರ ತಿಳಿಯಿತು. ತಾಯಿ ದೇಯಿ ಬೈದೇತಿಗೆ ಅಪಮಾನ ಎಲ್ಲರೂ ಒಟ್ಟಾಗಿ ಖಂಡಿಸುವಂತದ್ದು. ಈಬಗ್ಗೆ ಯಾವುದೇ ರಾಜಕೀಯ ನಡೆಸುವುದು ಸರಿಯಲ್ಲ. ಬಿಜೆಪಿ ಜಾಥ, ರಥಯಾತ್ರೆ ನಡೆಸಿ ಜನರಲ್ಲಿ ತಪ್ಪುಭಾವನೆ ಮೂಡಿಸುತ್ತಿದೆ. ಈ ಬಗ್ಗೆ ಕಾಂಗ್ರೆಸ್ನಿಂದ ಸೂಕ್ತ ಉತ್ತರ ನೀಡಲಾಗುವುದು ಎಂದು ತಿಳಿಸಿದರು.