ಶಂಬೂರು: ವಿಜ್ಞಾಪನಾ ಪತ್ರ ಅನಾವರಣ
ಬಂಟ್ವಾಳ, ಅ. 12: ತಾಲೂಕು ಶಂಬೂರು ಗ್ರಾಮದ ಕೊಪ್ಪಲ ಕೊದಂಟಿಯಡ್ಕ ಶಿವ ಸಾನಿಧ್ಯ ಧೂಮಾವತಿ ಬಂಟ ಸಹ ಪರಿವಾರ ದೈವಗಳ ದೈವಸ್ಥಾನ ನಿರ್ಮಾಣ ವಿಜ್ಞಾಪನಾ ಪತ್ರವನ್ನು ಮಾಣಿಲ ಮೋಹನ್ದಾಸ್ ಸ್ವಾಮೀಜಿಯವರು ಇತ್ತೀಚೆಗೆ ಅನಾವರಣಗೊಳಿಸಿದರು.
ಬಿಜೆಪಿ ನೇತಾರ ರಾಜೇಶ್ ನಾಯ್ಕ ಉಳಿಪಾಡಿಗುತ್ತು ಮುಖ್ಯ ಅತಿಥಿಯಾಗಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಮ್ದಾಸ್ ಬಂಟ್ವಾಳ, ಗುತ್ತಿನ ಮನೆಯವರಾದ ವಿಶ್ವನಾಥ ಪೂಜಾರಿ ಇರಂತಬೆಟ್ಟು, ಮೋನಪ್ಪ ಸಪಲ್ಯ ಬರ್ಕೆ, ಗಣೇಶ್ ಕೊಲ್ಲೂರು, ಜಗನ್ನಾಥ ಪೂಜಾರಿ ಅಡೆಪಿಲ, ಬೋಗನಾಥ ಪೂಜಾರಿ ಏಲಬೆ ಹಾಗೂ ಗ್ರಾಮದ ಹಿರಿಯರು, ಜೀರ್ಣೋದ್ಧಾರ ಸಮಿತಿ ಪದಾಧಿ ಕಾರಿಗಳು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಆನಂದ ಎ. ಶಂಭೂರು ಸ್ವಾಗತಿಸಿ, ಪ್ರಸ್ತಾವಿಸಿದರು. ಕಾರ್ಯದರ್ಶಿ ಕೇಶವ ಬರ್ಕೆ ವಂದಿಸಿ, ಜಗದೀಶ ಕೊಪ್ಪಲ ಕಾರ್ಯ ಕ್ರಮ ನಿರ್ವಹಿಸಿದರು.
Next Story