Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಬುದ್ಧನ ಕುರಿತು ಇನ್ನಷ್ಟು...

ಬುದ್ಧನ ಕುರಿತು ಇನ್ನಷ್ಟು...

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ13 Oct 2017 11:55 PM IST
share
ಬುದ್ಧನ ಕುರಿತು ಇನ್ನಷ್ಟು...

 ಇತ್ತೀಚಿನ ದಿನಗಳಲ್ಲಿ ಬರಹಗಾರರಿಗೆ ಬುದ್ಧ ಪದೇ ಪದೇ ವಸ್ತುವಾಗುತ್ತಾನೆ. ವರ್ತಮಾನದ ದುರಂತಗಳನ್ನು ಬಿಡಿಸಿಡುವ ಸಂದರ್ಭದಲ್ಲಿ ಬುದ್ಧ ನಮಗೆ ಕೈಮರವಾಗುತ್ತಾನೆ. ಇದೇ ಸಂದರ್ಭದಲ್ಲಿ ಜಾಗೃತ ದಲಿತ ಸಮುದಾಯವಂತೂ ಬುದ್ಧನಲ್ಲೇ ನಮ್ಮ ಬಿಡುಗಡೆ ಇದೆ ಎಂದು ನಂಬಿದೆ. ಈ ಹಿನ್ನೆಲೆಯಲ್ಲಿ ಬುದ್ಧ ಚಿಂತನೆ ಬೇರೆ ಬೇರೆ ರೂಪಗಳಲ್ಲಿ ಜನರ ನಡುವೆ ಸಂವಾದಿಸುತ್ತಿದೆ. ಇದೇ ಹೊತ್ತಿನಲ್ಲಿ ಬುದ್ಧನನ್ನು ಅವನ ತತ್ವವನ್ನು ಸರಳವಾಗಿ ಶ್ರೀಸಾಮಾನ್ಯನಿಗೆ ಹೇಗೆ ತಲುಪಿಸಬಹುದು ಎನ್ನುವುದು ಕೂಡ ಲೇಖಕರ ಪಾಲಿನ ಒಂದು ಸವಾಲೇ ಆಗಿದೆ. ಅಕ್ಷರದಿಂದ ತುಂಬಾ ದೂರದಲ್ಲಿರುವ, ಶೋಷಿತ ಜನಸಮುದಾಯಕ್ಕೆ ಬುದ್ಧನ ಜಟಿಲ ಚಿಂತನೆಯನ್ನು ಸರಳ ರೂಪಕ್ಕಿಳಿಸುವುದು ಇಂದಿನ ಅಗತ್ಯ. ಆದುದರಿಂದ ಲೇಖಕರು ಸರಳ ಬುದ್ಧನನ್ನು ಜನ ಸಾಮಾನ್ಯರ ನಡುವೆ ಕಟ್ಟಿಕೊಡುವುದಕ್ಕೆ ಪ್ರಯತ್ನಿಸುತ್ತಲೇ ಇದ್ದಾರೆ.

ಪ್ರೊ. ಎಚ್. ಲಿಂಗಪ್ಪನವರು ಬುದ್ಧನನ್ನು, ಅವನು ಬೋಧಿಸಿದ ಧಮ್ಮ ಮಾರ್ಗವನ್ನು ಅಂತರಂಗದಿಂದ ಧ್ಯಾನಿಸಿದವರು. ‘ಓಘ ತರುಣ ಬುದ್ಧ’ ಈ ಕಾರಣದಿಂದ ಕುತೂಹಲಕರವಾಗಿದೆ. ಬುದ್ಧನ ಬಾಲ್ಯದ ವಿವರಗಳಲ್ಲಿ ನಮ್ಮ ಅರಿವಿಗೆ ಬಾರದ ಅನೇಕ ಗಹನ ಸಂಗತಿಗಳನ್ನೂ ಇಲ್ಲಿ ಮಂಡಿಸಿದ್ದಾರೆ. ಗೌತಮನ ಸಾಧನೆಯ ಹಾದಿ, ತಿಳಿವಿನ ಮಾರ್ಗದಲ್ಲಿ ಅವನಿಗಾದ ಅನುಭವ ಸಾಮಾನ್ಯನಂತೆಯೇ ಇದ್ದ ಸಿದ್ಧಾರ್ಥ ಹೊಸ ಆಲೋಚನೆಗಳನ್ನು ರೂಢಿಸಿಕೊಳ್ಳುತ್ತಾ ಎಡವುತ್ತಾ, ಬೀಳುತ್ತಾ, ಏಳುತ್ತಾ ನಡೆದು ಕಂಡುಕೊಂಡ ಧ್ಯಾನ, ವಿಪಸ್ಯನ, ಆ ಮೂಲಕ ಪಡೆದ ಜ್ಞಾನೋದಯದ ವಿನ್ಯಾಸವನ್ನು, ಅವನ ತರ್ಕವಿಧಾನ, ಸಂಸ್ಕಾರ ಕ್ರಮ, ಆರ್ಯಸತ್ಯ, ಶೀಲ ಮುಂತಾದವುಗಳ ತಾಂತ್ರಿಕ ವಿವರಗಳನ್ನು ಅವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

 ಇಲ್ಲಿ ಒಟ್ಟು ಎಂಟು ಅಧ್ಯಾಯಗಳಿವೆ. ಆರಂಭದ ಅಧ್ಯಾಯಗಳಲ್ಲಿ ಗೌತಮನ ಬದುಕಿನ ಓಘ, ಅವನ ಅಲೆದಾಟಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಬುದ್ಧ ಜ್ಞಾನೋದಯದೆಡೆಗೆ ಸಾಗಿದ ಹಾದಿಯನ್ನು ಅರಿಯಲು ಇದು ಬಹಳ ಅಗತ್ಯವಾಗಿದೆ. ಬುದ್ಧ ತನ್ನ ಅರಿವಿಗೆ ತಂದುಕೊಂಡ ವಿವಿಧ ಸತ್ಯಗಳು, ಮಾರ್ಗಗಳ ಪರಿಚಯವನ್ನು ವಿವರವಾಗಿ ನಾಲ್ಕನೆಯ ಅಧ್ಯಾಯದಲ್ಲಿ ಮಾಡಲಾಗಿದೆ. ಬುದ್ಧನ ಕಾಲದ ಸ್ತ್ರೀ ಮತ್ತು ದಲಿತ ಭಿಕ್ಕುಗಳ ಕುರಿತ ಕುತೂಹಲಕಾರಿ ಮಾಹಿತಿ ಆರನೆ ಅಧ್ಯಾಯದಲ್ಲಿದೆ. ಆತನ ಅನುಯಾಯಿಗಳ ಜೊತೆಗಿರುವ ಸಂಬಂಧದ ಜೊತೆ ಜೊತೆಗೇ ಬುದ್ಧ ಚಿಂತನೆಯನ್ನು ಏಳನೆ ಅಧ್ಯಾಯದಲ್ಲಿ ಮಾಡುತ್ತಾರೆ. ಕೊನೆಯ ಅಧ್ಯಾಯದಲ್ಲಿ ಆತನ ಮಹಾಪರಿನಿಬ್ಬಾಣದ ಕುರಿತ ವಿವರಗಳಿವೆ. ರಶ್ಮಿ ಪ್ರಕಾಶನ ಚಿತ್ರದುರ್ಗ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 136. ಮುಖಬೆಲೆ 100 ರೂಪಾಯಿ. ಆಸಕ್ತರು99459 98099 ದೂರವಾಣಿಯನ್ನು ಸಂಪರ್ಕಿಸಬಹುದು..
 

share
-ಕಾರುಣ್ಯಾ
-ಕಾರುಣ್ಯಾ
Next Story
X