ಬೈಕಂಪಾಡಿ: ಹೆದ್ದಾರಿ ಹೊಂಡಗಳನ್ನು ಮುಚ್ಚಿ ಮೆಚ್ಚುಗೆ ಪಾತ್ರರಾದ ಶಾಲಾ ವಿದ್ಯಾರ್ಥಿಗಳು
ಸುರತ್ಕಲ್, ಅ.14: ಬೈಕಂಪಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಹೊಂಡಗಳನ್ನು ಇಲ್ಲಿನ ಬರ್ಟ್ರ್ಯಾಂಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಮುಚ್ಚುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಕಳೆದ 4 ತಿಂಗಳಿನಿಂದ ಹದಗೆಟ್ಟಿರುವ ಈ ಹೆದ್ದಾರಿ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಕಷ್ಟವಾಗಿದೆ. ಈ ಬಗ್ಗೆ ರಾಷ್ಟ್ರಿಯ ಹೆದ್ದಾರಿ ಅಧಿಕಾರಿಗಳಿಗೂ ಮನವಿ ನೀಡಿ ಗಮನ ಸೆಳೆದಿದ್ದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ರಸ್ತೆಗಿಳಿದ ಬರ್ಟ್ರ್ಯಾಂಡ್ ವಿದ್ಯಾರ್ಥಿಗಳು ಶಿಕ್ಷಕರ ನೆರವಿನಿಂದ ರಸ್ತೆ ಹೊಂಡಗಳನ್ನು ಮುಚ್ಚಿದರು. ಹೊಂಡಗಳನ್ನು ಕೆಂಪುಗಳನ್ನು ಹಾಸಿ ಸಮತಟ್ಟುಗೊಳಿಸಿದರು.
ಈ ಸಂದರ್ಭ ವಾಹನಗಳನ್ನು ನಿಯಂತ್ರಿಸಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಅವರು ವಿದ್ಯಾರ್ಥಿಗಳ ಶ್ರಮದಾನಕ್ಕೆ ಸಹಕರಿಸಿದರು.
ಶಾಲಾ ಸಂಚಾಲಕಿ ನಿಶಾ ಕಿರಣ್ ಹಾಗೂ ಶಾಲಾಧ್ಯಕ್ಷ ಅಬೂಬಕರ್ ಎನ್.ಎಂ.ಪಿ.ಟಿ . ಉಪಸ್ಥಿತರಿದ್ದರು.
Next Story