ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರು ಕೈ ಜೋಡಿಸಿ: ಶಕುಂತಳಾ ಶೆಟ್ಟಿ
ಪುತ್ತೂರು, ಅ. 14: ಯಾವುದೇ ರಸ್ತೆ ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರು ಕಾಮಗಾರಿ ನಡೆಸುವವರ ಜೊತೆ ಕೈ ಜೋಡಿಸಬೇಕು, ಸಣ್ಣ ವಿಚಾರ ದಲ್ಲಿ ತಗಾದೆ ನಡೆದರೂ ಕಾಮಗಾರಿಯಲ್ಲಿ ವಿಳಂಬವಾಗುತ್ತದೆ ಪರಸ್ಪರ ಸಹಕಾರ ನೀಡುವ ಮೂಲಕ ಊರಿನ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಒಳಮೊಗ್ರು ಗ್ರಾಮದ ಶೇಕಮಲೆಯಿಂದ ದರ್ಬೆತ್ತಡ್ಕ - ಉಪ್ಪಳಿಗೆ ರಸ್ತೆ ಡಾಮರೀಕರಣಕ್ಕೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಶೇಕಮಲೆಯಿಂದ ಉಪ್ಪಳಿಗೆಗೆ ತೆರಳುವ ರಸ್ತೆ ಹೀನಾಯ ಸ್ಥಿತಿಯಲ್ಲಿರುವ ಕುರಿತು ಗ್ರಾಮಸ್ಥರು ಕಳೆದ ವರ್ಷ ಮನವಿ ಮಾಡಿದ್ದರು. ಇದಕ್ಕಾಗಿ ತಾನು ರೂ. 2 ಕೋಟಿ ಅನುದಾನವನ್ನು ರಸ್ತೆಗೆ ಮೀಸಲಿಟ್ಟಿದ್ದೇನೆ. ರಸ್ತೆ ಅಗಲೀಕರಣ ನಡೆಯುತ್ತದೆ ಆ ವೇಳೆ ರಸ್ತೆಯ ಎರಡೂ ಬದಿಗಳಲ್ಲಿರುವ ಕೆಲವರು ಸ್ವಲ್ಪ ಜಾಗವನ್ನು ಬಿಟ್ಟು ಕೊಟ್ಟು ಸಹಕರಿಸಬೇಕು, ರಸ್ತೆ ಅಭಿವೃದ್ದಿಯಾದರೆ ಊರು ಅಭಿವೃದ್ದಿಯಾಗುತ್ತದೆ. ಮುಂದಿ ದಿನಗಳಲ್ಲಿ ಉಳಿದ ಕಾಮಗಾರಿಯನ್ನು ನಡೆಸ ಲಾಗುವುದು ಎಂದು ಹೇಳಿದರು.
ಒಳಮೊಗ್ರು ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಕುಂಬ್ರ ಬಾಲಕೃಷ್ಣ ಪಟ್ಲೇರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಾಸಕಿಯವರು ಗ್ರಾಮದ ಅಭಿವೃದ್ದಿಗೆ ಸಹಕಾರ ನೀಡಿದ್ದಾರೆ ಅವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ತಾಪಂ ಸದಸ್ಯ ಹರೀಶ್ ಬಿಜತ್ರೆ, ಒಳಮೊಗ್ರು ಗ್ರಾಪಂ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ, ಒಳಮೊಗ್ರು ಕಾಂಗ್ರೆಸ್ ಗ್ರಾಮಸಮಿತಿ ಅಧ್ಯಕ್ಷ ವಿನೋದ್ಕುಮಾರ್ ಶೆಟ್ಟಿ ಮುಡಾಲ, ಮುಖಂಡರಾದ ಕುಂಬ್ರ ದುರ್ಗಾಪ್ರಸಾದ್ ರೈ, ಪುರಂದರ್ ರೈ ಕುಯ್ಯಿರು, ಗ್ರಾಪಂ ಸದಸ್ಯ ಶೀನ ನಾಯ್ಕ, ರವಿಕಿರಣ್ ಶೆಟ್ಟಿ ಕೈಕಾರ, ಶಿವರಾಮ ಮಣಿಯಾಣಿ ಪಾಪೆಮಜಲು, ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಇಬ್ರಾಹಿಂ ಹಾಜಿ ಬೊಳ್ಳಾಡಿ , ಯುವ ಕಾಂಗ್ರೆಸ್ ಮುಖಂಡ ರಕ್ಷಿತ್ ರೈ ಮುಗೇರು, ಮಹಮ್ಮದ್ ಬೊಳ್ಳಾಡಿ ಉಪಸ್ಥಿತರಿದ್ದರು.