Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಮಾರಾಟಕ್ಕಿಟ್ಟಿರುವ ವರ್ತಮಾನದಲ್ಲಿ ಕಮಲಾ...

ಮಾರಾಟಕ್ಕಿಟ್ಟಿರುವ ವರ್ತಮಾನದಲ್ಲಿ ಕಮಲಾ ಕವಿತೆಗಳು....

-ಕಾರುಣ್ಯಾ-ಕಾರುಣ್ಯಾ15 Oct 2017 12:07 AM IST
share
ಮಾರಾಟಕ್ಕಿಟ್ಟಿರುವ ವರ್ತಮಾನದಲ್ಲಿ ಕಮಲಾ ಕವಿತೆಗಳು....

ಕನ್ನಡ ಕಾವ್ಯ ಲೋಕದಲ್ಲಿ ಎಂ. ಆರ್. ಕಮಲಾ ಅವರ ಹೆಸರು ಚಿರಪರಿಚಿತ. ‘ಶಕುಂತಲೋಪಾಖ್ಯಾನ’ ಕವನ ಸಂಕಲನದ ಮೂಲಕ ಸಹೃದಯರ ಗಮನ ಸೆಳೆದ ಕಮಲಾ ಅವರ ‘ಕತ್ತಲ ಹೂವಿನ ಹಾಡು’ ಅನುವಾದ ಅವರನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸುವಂತೆ ಮಾಡಿತು. ಅರಬ್ ಮಹಿಳಾ ಕಾವ್ಯಗಳನ್ನು ಕನ್ನಡಕ್ಕೆ ತಂದ ಹೆಗ್ಗಳಿಕೆಯೂ ಅವರದು. ಇದೀಗ ಅವರ ‘ಮಾರಿಬಿಡಿ-ಈ ಕಾಲದ ತಲ್ಲಣಗಳು’ ಕವನ ಸಂಕಲನ ಸುದ್ದಿಯಲ್ಲಿದೆ.

ಒಟ್ಟು 41 ಕವಿತೆಗಳಿರುವ ಈ ಸಂಕಲನ ಅವರೇ ಹೇಳಿಕೊಳ್ಳುವಂತೆ ಈ ಕಾಲದ ತಲ್ಲಣಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆೆ. ‘ಮಾರಾಟ’ವೆನ್ನುವುದು ವರ್ತಮಾನದ ಮುಖೇಡಿ ಅಭಿವೃದ್ಧಿಯ ಬೆಳವಣಿಗೆಯಾಗಿದೆ. ಎಲ್ಲ ವಸ್ತುಗಳ ವೌಲ್ಯಗಳನ್ನು ಹಣದ ಥೈಲಿಯ ಜೊತೆಗಿಟ್ಟು ಮಾರುವುದಕ್ಕೆ ಹೊರಟಿರುವ, ವಿಲಾಸದ ಬದುಕಿನ ತೆಕ್ಕೆಯಲ್ಲಿ ತೇಲುತ್ತಿರುವ ವರ್ತಮಾನವನ್ನು ವ್ಯಂಗ್ಯಮಾಡುವಂತಹ ಕವಿತೆ ‘ಹಾಗಾದರೆ ಮಾರಿಬಿಡಿ’.

ಅಮ್ಮನ ಸವೆದ ಒಂದು ಜೊತೆ ಬಂಗಾರದ ಬಳೆ, ಸೋರುತ್ತಿರುವ ಹಳೆಮನೆ ಇವೆಲ್ಲವೂ ಅಂತಿಮವಾಗಿ ಹರಾಜುಗಟ್ಟೆಯಲ್ಲಿ ನಿಂತಿರುವ ಚಂದ್ರಮತಿ ಎನ್ನುವ ಮಹಿಳೆಯವರೆಗೆ ತಲುಪುತ್ತದೆ. ‘‘...ಆದರೂ ಮಾರಬಹುದೇ ನೀವು ಅವಳ ಘನತೆಯನ್ನು/ ಕಟ್ಟುಪಾಡಿಲ್ಲದೇ ಕಟ್ಟಿ ಹಿಡಿವ ತಾಯ್ತನದ ಮಮತೆಯನ್ನು....’’ ಎಂಬ ಪ್ರಶ್ನೆ ಪ್ರತೀ ವಸ್ತುವಿಗೂ ಅನ್ವಯಿಸುವಂತಹದು. ಇಂತಹ ಮಾರಾಟ ಹಲವು ಕವಿತೆಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಮತ್ತೆ ಮತ್ತೆ ನಮ್ಮನ್ನು ಕಾಡುತ್ತದೆ. ಬೆನ್ನುಡಿಯಲ್ಲಿ ಹೇಳುವಂತೆ ‘‘ಸಿದ್ಧ ಮಾದರಿ, ಮಂದಿ ಮೆಚ್ಚುವ ಶೈಲಿ, ಧ್ರುವೀಕರಣದ ಅಬ್ಬರದಲ್ಲಿ ಸ್ವಂತಿಕೆ ಕಳೆದುಕೊಂಡು ತಬ್ಬಿಬ್ಬಾದ ಲೋಕದಲ್ಲಿ ಕಮಲಾ ಅವರ ಕವಿತೆಗಳು ಭಿನ್ನವಾಗಿ ನಿಲ್ಲುವುದಕ್ಕೆ ಕಾರಣ ಅವರು ಭ್ರಮಾಲೋಕದಿಂದ ಮುಕ್ತವಾಗಿರುವುದು ಹಾಗೂ ಪರಿಮಿತಿಗಳನ್ನು ಮೀರಲು ಇರುವ ಏಕೈಕ ದಾರಿ ಸಹಜತೆ ಮತ್ತು ಸರಳತೆಗಳೇ ಆಗಿವೆ ಎಂದು ಅರಿತಿರುವುದು...’’ ಎನ್ನುವುದಕ್ಕೆ ಇಲ್ಲಿರುವ ಪ್ರತೀ ಕವಿತೆಗಳೂ ತಲೆದೂಗುತ್ತವೆ.

ಹಣೆಪಟ್ಟಿ, ಹುಸಿ ಸೋಗಿನ ಸಿದ್ಧಾಂತಗಳಿಂದ ದೂರವಾಗಿರುವ ಮತ್ತು ಜೀವನ ಸಿದ್ಧಾಂತವನ್ನೇ ತಮ್ಮ ಅನನ್ಯತೆಯನ್ನಾಗಿರಿಕೊಂಡಿರುವ ಈ ಕವಿತೆಗಳು ಸಹಜ ಚೆಲುವಿನಿಂದ ಓದುಗನನ್ನು ಮಂತ್ರಮುಗ್ಧನನ್ನಾಗಿಸುತ್ತವೆ. ಕಥನ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 125 ರೂಪಾಯಿ. ಆಸಕ್ತರು 9448334622 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X