ತೂಮಿನಾಡು ಸಿರಾಜುಲ್ ಇಸ್ಲಾಂ ಮದ್ರಸದಲ್ಲಿ ಮೊಹಲ್ಲಿಮ್ ಡೇ
ಮಂಜೇಶ್ವರ, ಅ. 15: ಸಮಸ್ತ ಕೇರಳ ಜಮೀಯತ್ತುಲ್ ಮುಹಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಇದರ ನಿರ್ದೇಶ ಪ್ರಕಾರ ತೂಮಿನಾಡು ಸಿರಾಜುಲ್ ಇಸ್ಲಾಂ ಮದ್ರಸದ ಸಭಾಂಗಣದಲ್ಲಿ ಎ ಅರ್ ಅಬ್ದುಲ್ ರಹ್ಮಾನ್ ಅವರ ಅಧ್ಯಕ್ಷತೆಯಲ್ಲಿ ರವಿವಾರ ಬೆಳಗ್ಗೆ ಮೊಹಲ್ಲಿಮ್ ದಿನಾಚರಣೆ ನಡೆಯಿತು.
ಕಾರ್ಯಕ್ರಮವನ್ನು ಸೈಫುಲ್ಲ ತಂಙಲ್ ಉದ್ಯಾವರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳನ್ನು ಧಾರ್ಮಿಕ ಚೌಕಟ್ಟಿನಲ್ಲಿ ಬದುಕಿ-ಬಾಳುವಂತಹ ಭದ್ರ ಅಡಿಪಾಯವನ್ನು ಹಾಕಿಕೊಡುವಂತಹ ಮಹತ್ತರವಾದ ಜವಾಬ್ದಾರಿಯನ್ನು ಮದ್ರಸ ಅಧ್ಯಾಪಕರುಗಳು ನಿರ್ವಹಿಸುತಿದ್ದಾರೆ ಎಂದು ಹೇಳಿದರು.
ಮುಫತ್ತಿಶ್ ಎಸ್ ಕೆ ಐ ಎಂ ವಿ ಬೋರ್ಡ್ ನ ಹಂಝ ಮುಸ್ಲಿಯಾರ್ ಮುಖ್ಯ ಪ್ರಭಾಷಣ ನಡೆಸಿದರು. ಮುಖ್ಯ ಅತಿಥಿಗಳಾಗಿ ಮಹ್ಮೂದ್ ಮುಸ್ಲಿಯಾರ್, ಎನ್ ಕೆ ಅಬ್ದುಲ್ಲ ಮುಸ್ಲಿಯಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥರಿದ್ದರು.
ವೇದಿಕೆಯಲ್ಲಿ ಮಸೀದಿ ಹಾಗೂ ಮದ್ರಸ ಸಮಿತಿಯ ಹಿರಿಯರನ್ನು ಗೌರವಿಸಲಾಯಿತು. ಅಬ್ದುಲ್ ರಹ್ಮಾನ್ ಅರ್ಶದಿ ಸ್ವಾಗತಿಸಿ, ಇಬ್ರಾಹಿಂ ಖಲೀಲ್ ಹನೀಫಿ ವಂದಿಸಿದರು.
Next Story