Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ರಾಜ್‌ ಠಾಕ್ರೆಯ ‘ಮನಸೇ’ ಅವಸಾನದತ್ತ?

ರಾಜ್‌ ಠಾಕ್ರೆಯ ‘ಮನಸೇ’ ಅವಸಾನದತ್ತ?

ಶ್ರೀನಿವಾಸ್ ಜೋಕಟ್ಟೆಶ್ರೀನಿವಾಸ್ ಜೋಕಟ್ಟೆ17 Oct 2017 12:25 AM IST
share
ರಾಜ್‌ ಠಾಕ್ರೆಯ ‘ಮನಸೇ’ ಅವಸಾನದತ್ತ?

ಶಿವಸೇನೆಯ ಮಾತೋಶ್ರೀ ನಿವಾಸದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಏಳರಲ್ಲಿ ಆರು ಕಾರ್ಪೊರೇಟರ್‌ಗಳು ಶಿವಸೇನೆ ಪಕ್ಷಕ್ಕೆ ಮರಳಿ ಬಂದರು. ಈ ಪಕ್ಷಾಂತರ ದೃಶ್ಯ ಇದೀಗ ಮುಂಬೈ ರಾಜಕೀಯ ರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ‘ಮನಸೇ’ಗೆ ಈ ಬಾರಿಯ ದೀಪಾವಳಿ ‘ಕಹಿ’ ಆಗಲಿದೆ. ಶಿವಸೇನೆ ತ್ಯಜಿಸಿ ಹೊರಬಂದ ರಾಜ್‌ಠಾಕ್ರೆ 9 ಮಾರ್ಚ್ 2006ರಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಸ್ಥಾಪನೆ ಮಾಡಿದ್ದರು. ಕಳೆದ ಹನ್ನೊಂದು ವರ್ಷಗಳಲ್ಲಿ ಅನೇಕ ಏಳುಬೀಳುಗಳನ್ನು ಕಂಡ ‘ಮನಸೇ’ ಇದೀಗ ಅವಸಾನದ ಅಂಚಿನಲ್ಲಿದೆ. ಕೆಲ ವರ್ಷಗಳ ಹಿಂದೆ ಉತ್ತರ ಭಾರತೀಯರನ್ನು ಹೊಡೆದು ಬಡಿದು ಭಯ ಹುಟ್ಟಿಸಿ ಜನಪ್ರಿಯತೆ ಪಡೆಯಲು ಹೊರಟಿದ್ದ ರಾಜ್ ಠಾಕ್ರೆಯ ‘ಮನಸೇ’ ಅನಂತರ ಎದ್ದು ನಿಲ್ಲುವುದಕ್ಕೆ ಪರದಾಡುತ್ತಲೇ ಬಂದಿದೆ. ಆದರೆ ಇಂದು ಆ ಪಕ್ಷಕ್ಕೆ ಇಂತಹ ಹೀನಾಯ ಸ್ಥಿತಿ ಬರಬಹುದು ಎಂದು ಯಾರೂ ಊಹಿಸುವುದಕ್ಕೆ ಅಂದು ಸಾಧ್ಯವೇ ಇರಲಿಲ್ಲ!

2007ರಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯು ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿತ್ತು. ಆಗ ‘ಮನಸೇ’ ಏಳು ನಗರ ಸೇವಕರನ್ನು ಮನಪಾಕ್ಕೆ ಕಳುಹಿಸಿಕೊಟ್ಟಿತು. ಆನಂತರ 2008ರಲ್ಲಿ ಪಕ್ಷ ಇನ್ನಷ್ಟು ಸುದ್ದಿಯಾಯಿತು. ಆ ಸಮಯ ನಡೆದ ಲೋಕಸಭಾ ಚುನಾವಣೆಯಲ್ಲಿ ‘ಮನಸೇ’ ಒಬ್ಬ ಸಂಸದನನ್ನೂ ಗೆಲ್ಲಿಸಲಿಲ್ಲ. ಆದರೆ ಇದರ ಅಭ್ಯರ್ಥಿಗಳು ಲಕ್ಷಗಟ್ಟಲೆ ಮತಗಳನ್ನು ಪಡೆದಿದ್ದರು ಹಾಗೂ ಇತರ ಪಕ್ಷಗಳಿಗೆ ಬಿಸಿ ಮುಟ್ಟಿಸಿದ್ದರು. ಆ ವರ್ಷ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಈ ಪಕ್ಷದಿಂದ 13 ಶಾಸಕರು ಆಯ್ಕೆಗೊಂಡಿದ್ದರು. ನಂತರ ಪಕ್ಷವು ನಾಸಿಕ್ ಮತ್ತು ಪುಣೆಯಲ್ಲೂ ಇತಿಹಾಸ ರಚಿಸಿತು. ನಾಸಿಕ್ ಮಹಾನಗರ ಪಾಲಿಕೆಯ 2012ರ ಚುನಾವಣೆಯಲ್ಲಿ ಪಕ್ಷಕ್ಕೆ ಅಪೂರ್ವ ಯಶಸ್ಸು ಸಿಕ್ಕಿತ್ತು ಹಾಗೂ ಅದರ 40 ನಗರ ಸೇವಕರು ಆಯ್ಕೆಗೊಂಡಿದ್ದರು. ಎನ್.ಸಿ.ಪಿ.ಯ ಬೆಂಬಲದಿಂದ ಪಕ್ಷವು ಅಲ್ಲಿ ಐದು ವರ್ಷ ಆಡಳಿತ ನಡೆಸಿತು. ಆದರೆ ಆನಂತರ ಅಲ್ಲೂ ಪಕ್ಷಕ್ಕೆ ತನ್ನ ಕಾರ್ಪೊರೇಟರ್‌ಗಳನ್ನು ಉಳಿಸಿಕೊಳ್ಳಲಾಗಲಿಲ್ಲ. ಬಳಿಕ 40 ನಗರ ಸೇವಕರಲ್ಲಿ ಚುನಾವಣೆಗೆ ಮೊದಲು 25 ಜನ ಪಕ್ಷ ತ್ಯಜಿಸಿದರು. ಹೀಗಾಗಿ ಮುಂದಿನ ಚುನಾವಣೆಯಲ್ಲಿ ನಾಸಿಕ್‌ನಲ್ಲಿ ‘ಮನಸೇ’ ಕೇವಲ ಐದು ನಗರ ಸೇವಕರನ್ನು ಮಾತ್ರ ಗೆಲ್ಲಿಸಿತು.

ಪುಣೆ ಮಹಾನಗರ ಪಾಲಿಕೆಯಲ್ಲಿ ‘ಮನಸೇ’ 29 ನಗರ ಸೇವಕರನ್ನು ಹೊಂದಿತ್ತು. ಪಕ್ಕದ ಪಿಂಪ್ರಿ, ಚಿಂಚ್ವಾಡ್ ಮಹಾನಗರ ಪಾಲಿಕೆಯಲ್ಲಿ ನಾಲ್ವರು ನಗರ ಸೇವಕರನ್ನು ಹೊಂದಿತ್ತು. ಆದರೆ ಈಗಿನ ಸ್ಥಿತಿ ಏನೆಂದರೆ ಪುಣೆಯಲ್ಲಿ ಮೂರು ಮತ್ತು ಪಿಂಪ್ರಿ ಚಿಂಚ್ವಾಡ್‌ನಲ್ಲಿ ಪಕ್ಷದ ಒಬ್ಬ ನಗರಸೇವಕ ಮಾತ್ರ ಇದ್ದಾರೆ.

2014ರ ಲೋಕಸಭಾ ಚುನಾವಣೆಯ ಮೋದಿ ಅಲೆಯಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಹೆಸರಿಲ್ಲದಂತೆ ಅದು ಹೀನಾಯ ಸೋಲುಂಡಿತ್ತು. ಅದೇ ವರ್ಷ ನಡೆದ ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಯಲ್ಲಿ ಹಿಂದೆ 13 ಶಾಸಕರಿದ್ದ ‘ಮನಸೇ’ಗೆ ಈ ಬಾರಿ ಒಂದು ಸೀಟು ಮಾತ್ರ ದೊರಕಿತ್ತು. ಜುನ್ನರ್ (ಪುಣೆ)ನ ಶರದ್ ಸೋನವಣೆ ಪಕ್ಷದ ಏಕಮಾತ್ರ ಶಾಸಕ ಆಗಿದ್ದರು. ಇದೀಗ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದಿದ್ದ ಏಳು ಸದಸ್ಯರಲ್ಲಿ ‘ಮನಸೇ’ ಬಳಿ ಕೇವಲ ಒಬ್ಬ ಸದಸ್ಯ, ಸಂಜಯ್ ತುರ್ಡೆ (ಕಲೀನಾ) ಮಾತ್ರ ಉಳಿದುಕೊಂಡಿದ್ದಾರೆ.

‘ಮನಸೇ’ಯ ಆರು ನಗರಸೇವಕರು ಇದೀಗ ಶಿವಸೇನೆಗೆ ಬಂದ ನಂತರ ಶಿವಸೇನೆಯ ಉದ್ಧವ್ ಠಾಕ್ರೆ ಪತ್ರಿಕಾಗೋಷ್ಠಿ ನಡೆಸಿ ‘‘ಇದು ರಾಜಕೀಯ ಖರೀದಿ ಪ್ರಕರಣ ಅಲ್ಲ. ಈ ನಗರ ಸೇವಕರು ಮೂಲತ: ಶಿವಸೈನಿಕರೇ ಆಗಿದ್ದಾರೆ. ಇದೀಗ ಅವರು ಮರಳಿ ಬಂದಿದ್ದಾರೆ ಅಷ್ಟೇ’’ ಎಂದರು. ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರು ‘‘‘ಮನಸೇ’ ನಗರ ಸೇವಕರಿಗೆ 3 ಕೋಟಿ ರೂಪಾಯಿ ನೀಡಿ ಶಿವಸೇನೆ ಖರೀದಿಸಿದೆ. ಭಾಂಡುಪ್ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಒಬ್ಬ ನಗರ ಸೇವಕರನ್ನು ಹೆಚ್ಚಿಸಿಕೊಂಡದ್ದು ಶಿವಸೇನೆಗೆ ಭಯವಾಗಿದೆ’’ ಎಂದಿದ್ದ ಮಾತನ್ನು ಉಲ್ಲೇಖಿಸಿದ ಉದ್ಧವ್ ಠಾಕ್ರೆಯವರು ‘‘ಕತ್ತೆಗಳಿಗೆ ಖರೀದಿ ಆರೋಪವನ್ನು ಹೊರಿಸುವ ಹಕ್ಕಿಲ್ಲ’’ ಎಂದರು.

ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ತ್ಯಜಿಸಿ ಶಿವಸೇನೆ ಜೊತೆಗೂಡಿದ ಆರು ನಗರ ಸೇವಕರಲ್ಲಿ ಒಬ್ಬರಾದ ದಿಲೀಪ್ ಲಾಂಡೆ ‘‘ಮಹಾನಗರ ಪಾಲಿಕೆಯಲ್ಲಿ ಮರಾಠಿ ಮಾಣುಸ್ ಸೋಲಬಾರದು. ಅದಕ್ಕಾಗಿ ತಾವು ಶಿವಸೇನೆಯನ್ನು ಬೆಂಬಲಿಸಿದ್ದೇವೆ. ಬಿಜೆಪಿ ಮುಂಬೈ ಮಹಾನಗರ ಪಾಲಿಕೆಯಲ್ಲಿ ಮರಾಠಿ ಮೇಯರ್‌ರನ್ನು ತೆಗೆದು ಹಾಕುವ ಹುನ್ನಾರ ಆರಂಭಿಸಿದ್ದು, ನಮಗದು ಇಷ್ಟವಿಲ್ಲ. ಮುಂಬೈಯಲ್ಲಿ ಮರಾಠಿ ಜನರ ಹಿತೈಷಿ ಶಿವಸೇನೆ ಮಾತ್ರ. ಹಾಗಾಗಿ ನಾವೆಲ್ಲ ಮತ್ತೆ ಶಿವಸೇನೆಗೆ ಬಂದಿದ್ದೇವೆ’’ ಎಂದರು.

‘‘ಬಿಜೆಪಿ ಶಿವಸೇನೆಯನ್ನು ಮಿತ್ರ ಅನ್ನುತ್ತದೆ. ಹಾಗಿರುವಾಗ ಶಿವಸೇನೆಗೆ ಆರು ನಗರಸೇವಕರು ಬಂದರೆ ಬಿಜೆಪಿಗೆ ಹೊಟ್ಟೆನೋವು ಯಾಕೆ? ಒಂದು ದಿನದಲ್ಲೇ ಆರು ನಗರ ಸೇವಕರು ಬರುವುದಾದರೆ ಶಿವಸೇನೆಯ ಶಕ್ತಿ ಬಿಜೆಪಿಗೆ ಗೊತ್ತಾಗಿದೆ ಅಂತ ಕಾಣುತ್ತದೆ’’ ಎಂದು ಉದ್ಧವ್ ಲೇವಡಿ ಮಾಡಿದ್ದಾರೆ.

ಮುಂಬೈ ಮಹಾನಗರ ಪಾಲಿಕೆಯಲ್ಲಿ ಇದೀಗ ಶಿವಸೇನೆಯ 94 ಕಾರ್ಪೊರೇಟರ್‌ಗಳಿದ್ದಾರೆ. ಭಾಂಡುಪ್‌ನ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಒಂದು ಸೀಟು ಹೆಚ್ಚಿಸಿಕೊಂಡರೂ ಇದೀಗ ಬಿಜೆಪಿಯ ಮೇಯರ್ ಆಸೆ ಸದ್ಯಕ್ಕೆ ತಣ್ಣಗಾಗಿದೆ.

ಇತ್ತ ಶಿವಸೇನೆಯ ಈ ಕೃತ್ಯದಿಂದ ‘ಮನಸೇ’ ಕಾರ್ಯಕರ್ತರು ತೀವ್ರ ಸಿಟ್ಟುಗೊಂಡಿದ್ದು ದಾದರ್‌ನ ಕೃಷ್ಣಕುಂಜ್‌ನಲ್ಲಿ ಒಟ್ಟುಸೇರಿ ಶಿವಸೇನೆಯ ವಿರುದ್ಧ ಘೋಷಣೆ ಕೂಗಿದರು. ‘ಮನಸೇ’ಯಿಂದ ಬಂದ 6 ನಗರಸೇವಕರನ್ನು ಆನಂತರ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಯ್ತು. ಬಿಜೆಪಿಗೀಗ ಏನಾದರೂ ಸಾಹಸ ಮಾಡಬೇಕಾದರೆ ನಾರಾಯಣ ರಾಣೆ ಮೊರೆ ಹೋಗಬೇಕಾಗಿದೆ. ಕಾಂಗ್ರೆಸ್ ಬಳಿ 30 ನಗರಸೇವಕರಿದ್ದರೂ ಅವರಲ್ಲಿ 10 ಜನ ನಾರಾಯಣ ರಾಣೆ ಜೊತೆ ಸಂಪರ್ಕದಲ್ಲಿದ್ದಾರಂತೆ.
* * * 

19ನೆ ‘ಮಾಮಿ’ ಮುಂಬೈ ಫಿಲ್ಮ್ ಫೆಸ್ಟಿವಲ್
ಏಳು ದಿನ, 18 ಸ್ಕ್ರೀನ್, 200ಕ್ಕೂ ಹೆಚ್ಚು (ಐವತ್ತು ದೇಶಗಳ) ಫಿಲ್ಮ್‌ಗಳ ಪ್ರದರ್ಶನಗಳು........
ಹೌದು, ಸಿನೆಮಾ ಪ್ರೇಮಿಗಳ ಇಷ್ಟದ ‘ಮಾಮಿ’ ಮುಂಬೈ ಫಿಲ್ಮ್ ಫೆಸ್ಟಿವಲ್‌ನ ದೃಶ್ಯವಿದು.
ಮುಂಬೈ ಅಕಾಡಮಿ ಆಫ್ ಮೂವಿಂಗ್ ಇಮೇಜ್ (‘ಮಾಮಿ’) ವತಿಯಿಂದ ಆಯೋಜನೆಯ ಈ ಫಿಲ್ಮ್ ಫೆಸ್ಟಿವಲ್‌ಗೆ ಈ ಬಾರಿ 19 ನೆ ವರ್ಷದ ಸಂಭ್ರಮ. ಲಿಬರ್ಟಿ ಸಿನೆಮಾ ಟಾಕೀಸ್‌ನಲ್ಲಿ ಇದರ ಉದ್ಘಾಟನೆಯಾಯಿತು. ಅಕ್ಟೋಬರ್ 12ರಿಂದ ಆರಂಭವಾಗಿ ಅಕ್ಟೋಬರ್ 18 ರ ತನಕ ಸಿನೆಮಾ ಪ್ರೇಮಿಗಳ ಮನ ತಣಿಸುತ್ತಿದೆ. ಈ 19 ನೆ ‘ಜಿಯೋ ‘ಮಾಮಿ’ ಮುಂಬೈ ಫಿಲ್ಮ್ ಫೆಸ್ಟಿವಲ್’ನ ಆರಂಭವು ಫಿಲ್ಮ್ ಮೇಕರ್ ಅನುರಾಗ್ ಕಶ್ಯಪ್ ಅವರ ನಿರ್ದೇಶನದ ‘ಮುಕ್ಕಾಬಾಜ್’ ನಿಂದ ಆರಂಭವಾಯಿತು. ಹಿರಿಯ ನಟಿ ಶರ್ಮಿಳಾ ಠಾಗೋರ್ ಅವರಿಗೆ ಈ ತನಕದ ಕೊಡುಗೆಗಾಗಿ ಜೀವನ ಶ್ರೇಷ್ಠ ಅವಾರ್ಡ್ ನೀಡಿ ಸನ್ಮಾನಿಸಲಾಯಿತು. ಅದೇ ರೀತಿ ಇಂಟರ್ ನ್ಯಾಷನಲ್ ಅವಾರ್ಡ್‌ನ್ನು ಚೀನಾದ ಫಿಲ್ಮ್ ಮೇಕರ್ ಶೇನ್‌ಕೆಜ್‌ರಿಗೆ ನೀಡಲಾಯಿತು.

ಮುಂಬೈಯ ಪ್ರಥಮ ಅಂತಾರಾಷ್ಟ್ರೀಯ ‘ಮಾಮಿ’ ಫಿಲ್ಮ್ ಫೆಸ್ಟಿವಲ್ 1997ರಲ್ಲಿ ಜರಗಿತ್ತು. ಆಗ 22 ದೇಶಗಳ ಸುಮಾರು 70ಕ್ಕೂ ಮಿಕ್ಕಿದ ಸಿನೆಮಾಗಳ ಪ್ರದರ್ಶನ ನಡೆದಿತ್ತು. ಆ ಸಮಯ ಏಳೂ ದಿನಗಳು ಭಾಗವಹಿಸುವ ಅಪೂರ್ವ ಅವಕಾಶ ನನಗೆ ದೊರಕಿತ್ತು. ಅಡೂರ್ ಗೋಪಾಲ ಕೃಷ್ಣನ್‌ರಿಗೆ ಅಭಿನಂದನೆಯ ಜೊತೆಗೆ ಪ್ರಥಮ ‘ಮಾಮಿ’ ಫಿಲ್ಮ್ ಫೆಸ್ಟಿವಲ್ ಸಮಾಪ್ತಿಗೊಂಡಿತ್ತು. ಉದ್ಘಾಟನೆಯ ಸಮಯ ಗೋವಿಂದ ನಿಹಲಾನಿ ಅವರ ‘ಹಜಾರ್ ಚೌರಸೀ ಕೀ ಮಾ’ ಸಿನೆಮಾ ಪ್ರದರ್ಶನೊಂಡಿತ್ತು. ಅನಿವಾಸಿ ಭಾರತೀಯರ ಸಿನೆಮಾಗಳೂ ಗಮನ ಸೆಳೆದಿದ್ದು, ವಿದೇಶಿ ಕಿಟಕಿಯಲ್ಲಿ ನಿಂತು ಭಾರತವನ್ನು ನೋಡುವುದು ಆ ಎಲ್ಲ ಸಿನೆಮಾಗಳ ವಸ್ತುಗಳಾಗಿತ್ತು. ಈ ಸಿನೆಮಾಗಳ ಮೂಲಕ ಅನಿವಾಸಿ ಭಾರತೀಯರಲ್ಲಿ ಭಾರತೀಯತೆ ಅನ್ನುವುದು ಜೀವಂತ ಇರುತ್ತದೆ ಎಂದು ಈ ನಿರ್ದೇಶಕರ ನಂಬಿಕೆಯಾಗಿದೆ.

 ಆಗಿನ ಸಮಯದಲ್ಲಿ ಕಸ್ಟಮ್ಸ್ ಕಿರಿಕಿರಿಯಿತ್ತು. ಕಸ್ಟಮ್ಸ್ ಕ್ಲಿಯರೆನ್ಸ್ ಆಗದ ಕಾರಣ ವಿದೇಶದ ಐದು ಫಿಲ್ಮ್‌ಗಳು ಕೊನೆಗೂ ವಿಮಾನ ನಿಲ್ದಾಣದಲ್ಲಿಯೇ ಬಿದ್ದುಕೊಂಡಿತ್ತು. ಸೀಮಾ ಶುಲ್ಕ ವಿಭಾಗದ ಔಪಚಾರಿಕತೆ ಪೂರೈಸುವ ಹೊತ್ತಿಗೆ ‘ಮಾಮಿ’. ಫೆಸ್ಟಿವಲ್ ಸಮಾಪ್ತಿಯಾಗಿತ್ತು!

ಪ್ರಥಮ ‘ಮಾಮಿ’ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರತೀದಿನ ಬಿಡುವಿನ ವೇಳೆಯಲ್ಲಿ ಸಿನೆಮಾ ನಿರ್ದೇಶಕ, ನಿರ್ಮಾಪಕ, ನಟರ ಜೊತೆ ಸಂವಾದ ಕಾರ್ಯಕ್ರಮ ಇರುತ್ತಿತ್ತು. ಅಲ್ಲಿ ಪ್ರಮುಖ ನಿರ್ದೇಶಕರು, ಪ್ರಶಸ್ತಿ ಪುರಸ್ಕೃತರನ್ನು ವೀಕ್ಷಿಸುವ ಭಾಗ್ಯವೂ ಸಿಗುತ್ತಿತ್ತು. ಹಳೆಯ ಸಿನೆಮಾಗಳಾದ ‘ಮೊಗಲ್ ಎ ಆಝಮ್’, ‘ಆವಾರ’, ‘ಗೈಡ್’......... ಇವೆಲ್ಲ ಆವಾಗ ಪ್ರದರ್ಶನಗೊಂಡಿದ್ದುವು.

‘‘ಉತ್ತಮ ಸಿನೆಮಾಗಳಿಗೆ ಟಾಕೀಸ್‌ಗಳು ಸಿಗುವುದಿಲ್ಲ’’ ಎಂದು ಆಗ ಅಡೂರ್ ಗೋಪಾಲಕೃಷ್ಣನ್ ಹೇಳಿದ್ದರು. ಈ ಎರಡು ದಶಕಗಳಲ್ಲಿ ಸಮಸ್ಯೆ ಇನ್ನೂ ಹಾಗೆಯೇ ಇದೆ.

ಪ್ರಥಮ ‘ಮಾಮಿ’ ಫಿಲ್ಮ್ ಫೆಸ್ಟಿವಲ್‌ನಲ್ಲಿ ಹಿಂದಿ, ಮರಾಠಿ, ಬಂಗಾಳಿ ಮತ್ತು ಮಲಯಾಳಂ ಸಿನೆಮಾಗಳಿಗೆ (ಭಾರತದಿಂದ) ಮಾತ್ರ ಪ್ರವೇಶವಿತ್ತು. ಇತರ ದೇಶೀ ಭಾಷೆಗಳ ಚಿತ್ರಗಳಿರಲಿಲ್ಲ.

ಈ ಬಾರಿ 19 ನೆ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡ ಅನುರಾಗ್ ಕಶ್ಯಪ್‌ರ ‘ಮುಕ್ಕಾ ಬಾಜ್’ ಮೊದಲ ಸಿನೆಮಾ ಆಗಿತ್ತು. ಈ ಸಿನೆಮಾವು ಉತ್ತರ ಪ್ರದೇಶವು ಯಾಕೆ ಕ್ರೀಡಾ ಕ್ಷೇತ್ರದಲ್ಲಿ ಹಿಂದುಳಿದಿದೆ ಎನ್ನುವ ಸಂದೇಶ ತಿಳಿಸಿದೆ. ಅರ್ಥಾತ್ ಕ್ರೀಡೆಯ ಹಿಂದೆ ಅಡಗಿರುವ ರಾಜಕೀಯ ಆಟವನ್ನು ಬಹಿರಂಗ ಪಡಿಸಿದೆ. ಈ ಫಿಲ್ಮ್ ಕ್ರೀಡಾ ಕ್ಷೇತ್ರದಲ್ಲಿನ ಜಾತಿವಾದ, ಧಾರ್ಮಿಕ ಉನ್ಮಾದ, ಡೋಪಿಂಗ್.....ಇಂತಹ ಹಲವು ವಸ್ತುಗಳನ್ನು ಏಕಕಾಲಕ್ಕೆ ಚರ್ಚಿಸಿದೆ.

ಈ ಫೆಸ್ಟಿವಲ್‌ನಲ್ಲಿ ‘ಇಂಡಿಯಾ ಗೋಲ್ಡ್’, ‘ಸ್ಪಾಟ್‌ಲೈಟ್’, ‘ಹಾಫ್ ಟಿಕೆಟ್’..... ಇಂತಹ ಹಲವು ಶ್ರೇಣಿಗಳ ಐವತ್ತಕ್ಕೂ ಹೆಚ್ಚಿನ ದೇಶಗಳ 200 ಕ್ಕೂ ಹೆಚ್ಚಿನ ಸಿನೆಮಾಗಳು ಪ್ರದರ್ಶನಗೊಳ್ಳುತ್ತಿವೆ. ಇವುಗಳಲ್ಲಿ ಬೊರ್ನಿಲಾ ಚಟರ್ಜಿ ಅವರ ‘ದ ಹಂಗ್ರಿ’, ಇರ್ಫಾನ್ ಖಾನ್ ಅಭಿನಯದ ‘ದ ಸಾಂಗ್ ಆಫ್ ಸ್ಕಾರ್ಪಿಯನ್ಸ್, ಸೈಕಾಲೋಜಿಕಲ್ ಥ್ರಿಲರ್ ‘ಮದರ್’, ದೇವಶೀಷ್ ಮಖೀಜಾ ಅವರ ‘ಅಜೀ’, ಶ್ಲೋಕ್ ಶರ್ಮಾರ ‘ಜೂ’, ಟೊರೆಂಟೋ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರೀಮಿಯರ್ ಆಗಿರುವ ‘ವಿಲೇಜ್ ರಾಕ್ ಸ್ಟಾರ್’ ಇಂತಹ ಸಿನೆಮಾಗಳು ಆಕರ್ಷಣೆಯ ಕೇಂದ್ರಗಳಾಗಿದ್ದವು.

ಈ ಬಾರಿಯೂ ಬಾಲಿವುಡ್ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದಾರೆ. ಫೆಸ್ಟಿವಲ್‌ನ ಚೆಯರ್ ಪರ್ಸನ್ ಕಿರಣ್ ರಾವ್ ಇದ್ದರೆ, ಅವರ ಪತಿ, ನಟ ಆವೀರ್ ಖಾನ್‌ರ ಮುಂದಿನ ಸಿನೆಮಾ ‘ಸೀಕ್ರೆಟ್ ಸೂಪರ್ ಸ್ಟಾರ್’ನ ನಟಿ ಝಾಯ್ರಾ ವಸೀಮ್ ಜೊತೆಗೆ ಬಂದಿದ್ದರು, ಬಾಲಿವುಡ್‌ನ ಕರಣ್ ಜೋಹರ್, ಬೋನಿ ಕಪೂರ್, ಶ್ರೀದೇವಿ, ಹುಮಾ ಖುರೇಶಿ, ದಕ್ಷಿಣದ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್, ರಿಚಾ ಚಡ್ಡಾ, ಅದಿತಿ ರಾವ್ ಹೈದರಿ, ವಿಶಾಲ್ ಭಾರದ್ವಾಜ್, ಕುಣಾಲ್ ಕಪೂರ್, ಕಂಗನಾ ರಣಾವತ್, ಕೊಂಕಣ ಸೇನ್ ಶರ್ಮಾ, ಕಬೀರ್ ಖಾನ್, ಅಂಬಾನಿ ಪರಿವಾರ..... ಮುಂತಾದವರೆಲ್ಲ ಪಾಲ್ಗೊಂಡಿದ್ದರು.

ಈ ಬಾರಿಯ ‘ಮಾಮಿ’ ಫಿಲ್ಮ್ ಫೆಸ್ಟಿವಲ್ ಸಾಕಾರಗೊಳ್ಳಲು ಮೂವರು ಮಹಿಳೆಯರಿಗೆ ಈ ಶ್ರೇಯಸ್ಸು ಸಲ್ಲಬೇಕು. ಚೆಯರ್ ಪರ್ಸನ್ ಕಿರಣ್ ರಾವ್, ಫೆಸ್ಟಿವಲ್ ಡೈರೆಕ್ಟರ್ ಅನುಪಮಾ ಚೋಪ್ರಾ, ಕ್ರಿಯೇಟಿವ್ ಡೈರೆಕ್ಟರ್ ಸ್ಮತಿ ಕಿರಣ ಇವರೇ ಆ ಮೂವರು ಮಹಿಳೆಯರು.
ಈ ಫೆಸ್ಟಿವಲ್‌ನಲ್ಲಿ ಭಾರತೀಯ ಸಿನೆಮಾರಂಗವನ್ನು ಎತ್ತರಕ್ಕೇರಿಸುವಲ್ಲಿ ಕೊಡುಗೆ ನೀಡಿದ ಶರ್ಮಿಳಾ ಠಾಗೋರ್‌ಗೆ ಪ್ರತಿಷ್ಠಿತ ಎಕ್ಸ್‌ಲೆನ್ಸ್ ಇನ್ ಸಿನೆಮಾ ಇಂಡಿಯಾ ಅವಾರ್ಡ್ ನೀಡಲಾಯಿತು.

share
ಶ್ರೀನಿವಾಸ್ ಜೋಕಟ್ಟೆ
ಶ್ರೀನಿವಾಸ್ ಜೋಕಟ್ಟೆ
Next Story
X