ಬಂಟ್ವಾಳದ ಮೂರು ಠಾಣೆಯ ನಾಲ್ವರು ಸಬ್ಇನ್ಸ್ಪೆಕ್ಟರ್ಗಳ ವರ್ಗಾವಣೆ
ಬಂಟ್ವಾಳ, ಅ. 17: ಇದೇ ಮೊದಲ ಬಾರಿಗೆ ಏಕ ಕಾಲದಲ್ಲಿ ಬಂಟ್ವಾಳದ ಮೂರು ಠಾಣೆಯ ನಾಲ್ವರು ಸಬ್ಇನ್ಸ್ಪೆಕ್ಟರ್ಗಳನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.
ಬಂಟ್ವಾಳ ಗ್ರಾಮಾಂತರ, ನಗರ, ಅಪರಾಧ ವಿಭಾಗದ ಹಾಗೂ ಸಂಚಾರಿ ಠಾಣೆಗಳ ನಾಲ್ವರು ಎಸ್ಸೈಗಳನ್ನು ವರ್ಗಾವಣೆ ಮಾಡುವ ಮೂಲಕ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಸ್ಸೈ ರಕ್ಷಿತ್ ಅವರನ್ನು ಮಂಗಳೂರಿನ ಡಿಎಸ್ಪಿ ಕಚೇರಿಗೆ, ನಗರ ಠಾಣಾ ಅಪರಾಧ ವಿಭಾಗದ ಎಸ್ಸೈ ಗಂಗಾದರಪ್ಪ ಅವರನ್ನು ನೂತನವಾಗಿ ನಿರ್ಮಾಣವಾಗುವ ಬೆಳ್ತಂಗಡಿ ಟ್ರಾಫಿಕ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಸೈ ಉಮೇಶ್ ಅವರನ್ನು ಮಂಗಳೂರು ಡಿಸಿಬಿ ಕಚೇರಿಗೆ ಮತ್ತು ಟ್ರಾಫಿಕ್ ಪೊಲೀಸ್ ಠಾಣೆಯ ಎಸ್ಸೈ ಚಂದ್ರಶೇಖರ್ ಅಯ್ಯ ಅವರನ್ನು ಡಿಎಸ್ಎ ಮಂಗಳೂರು ಕಚೇರಿಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
ತೆರವಾದ ಬಂಟ್ವಾಳ ನಗರ ಠಾಣೆಗೆ ಸುಳ್ಯದಲ್ಲಿ ಎಸ್ಸೈ ಆಗಿದ್ದ ಚಂದ್ರಶೇಖರ್ ಹಾಗೂ ಈಗ ತಾನೆ ಪ್ರೋಬೆಷನರಿ ಅವಧಿಯನ್ನು ಮುಗಿಸಿದ ಮೂವರು ಅಧಿಕಾರಿಗಳನ್ನು ಕ್ರಮವಾಗಿ ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗಕ್ಕೆ ಹರೀಶ್, ಬಂಟ್ವಾಳ ಗ್ರಾಮಾಂತರ ಠಾಣೆಗೆ ಪ್ರಸನ್ನಕುಮಾರ್ ಮತ್ತು ಟ್ರಾಫಿಕ್ ಪೊಲೀಸ್ ಠಾಣೆಗೆ ಯಲ್ಲಪ್ಪ ಅವರನ್ನು ನೇಮಕ ಮಾಡಲಾಗಿದೆ.
ಬಂಟ್ವಾಳ ನಗರ, ಗ್ರಾಮಾಂತರ ಮತ್ತು ಟ್ರಾಫಿಕ್ ಪೊಲೀಸ್ ಠಾಣೆಯ ಉಪನೀರಿಕ್ಷಕರನ್ನು ಬದಲಾವಣೆ ಮಾಡಿ ಹೊಸ ಮುಖಗಳನ್ನು ಪರಿಚಯಿಸುವ ಮೂಲಕ ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಲು ಮುಂದಾಗಿದೆ.
ಕೋಮು ಗಲಭೆಯಿಂದ ಈಗ ತಾನೇ ಚೇತರಿಸಿಕೊಳ್ಳುತ್ತಿರುವ ಬಂಟ್ವಾಳಕ್ಕೆ ಪೊಲೀಸ್ ಅಧಿಕಾರಿಗಳ ಏಕಾಏಕಿ ವರ್ಗಾವಣೆಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ವರ್ಗವಣೆ: ಇತ್ತೀಚೆಗೆ ನಡೆದ ಮತೀಯ ಗಲಭೆಗೆ ಸಂಬಂಧಿಸಿದಂತೆ ಬಂಟ್ವಾಳಕ್ಕೆ ಆಗಮಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಮೇಜರ್ ಬದಲಾವಣೆ ಮಾಡಿದ್ದರು. ಆರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಾಸೆಯವರನ್ನು ವರ್ಗವಣೆ ಮಾಡಲಾಗಿದ್ದರೆ, ಇದರ ಬೆನ್ನಲ್ಲೇ ಬಂಟ್ವಾಳ ಡಿವೈಎಸ್ಪಿ ರವೀಶ್ ಮತ್ತು ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ. ಮಂಜಯ್ಯ ಮತ್ತು ಪಶ್ಚಿಮ ವಲಯದ ಐ.ಜಿ. ಹರಿಶೇಖರನ್ನು ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಬಂಟ್ವಾಳ ನಗರ, ಅಪರಾಧ ವಿಭಾಗ, ಗ್ರಾಮಾಂತರ, ಟ್ರಾಫಿಕ್ ಠಾಣೆಯ ಎಸ್ಸೈಗಳನ್ನು ಏಕಕಾಲದಲ್ಲಿ ವರ್ಗಾವಣೆಗೊಳಿಸಿದೆ. ಈ ನಾಲ್ವರು ಸಬ್ಇನ್ಸ್ಪೆಕ್ಟರ್ಗಳು ಈಗಾಗಲೆ ಅಧಿಕಾರ ಸ್ವೀಕರಿಸಿದ್ದಾರೆ.