Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಟಿಪ್ಪು ರಾಕೆಟ್ ಪುನರ್ ಸೃಷ್ಟಿಗೆ...

ಟಿಪ್ಪು ರಾಕೆಟ್ ಪುನರ್ ಸೃಷ್ಟಿಗೆ ಎನ್‌ಐಎಎಸ್ ವಿಜ್ಞಾನಿಗಳ ಯತ್ನ

ವಾರ್ತಾಭಾರತಿವಾರ್ತಾಭಾರತಿ19 Oct 2017 8:44 PM IST
share
ಟಿಪ್ಪು ರಾಕೆಟ್ ಪುನರ್ ಸೃಷ್ಟಿಗೆ ಎನ್‌ಐಎಎಸ್ ವಿಜ್ಞಾನಿಗಳ ಯತ್ನ

ಬೆಂಗಳೂರು,ಅ.19: ಎರಡು ಶತಮಾನಗಳ ಹಿಂದೆ ಬ್ರಿಟಿಶರಿಗೆ ನಡುಕ ಹುಟ್ಟಿಸಿದ್ದ ಟಿಪ್ಪುಸುಲ್ತಾನ್‌ನ ಸೇನೆಯ ಯುದ್ಧದ ರಾಕೆಟ್‌ಗಳ ಬಗ್ಗೆ ಇದೀಗ ವಿಜ್ಞಾನಿಗಳ ಗಮನಹರಿದಿದೆ. ‘ಬೆಂಕಿಬಾಣ’ (ಫೈರ್ ಆ್ಯರೋ) ಎಂದು ಕರೆಯಲಾಗುತ್ತಿದ್ದ ಈ ರಾಕೆಟ್‌ಗಳನ್ನು ಪುನರ್‌ಸೃಷ್ಟಿಸುವುದಕ್ಕಾಗಿ ಇಲ್ಲಿನ ರಾಷ್ಟ್ರೀಯ ಸುಧಾರಿತ ಅಧ್ಯಯನಗಳ ಸಂಸ್ಥೆ (ಎನ್‌ಐಎಎಸ್)ಯು ಮಹತ್ವದ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ.

   ಟಿಪ್ಪುಸುಲ್ತಾನ್ ಸೇನೆಯ ರಾಕೆಟ್‌ನ್ನು ಪುನರ್ ನಿರ್ಮಿಸುವುದಕ್ಕಾಗಿ ಮಧ್ಯಕಾಲೀನ ಯುಗದ ಉನ್ನತ ದರ್ಜೆಯ ಕಾರ್ಬನ್ ಸ್ಟೀಲ್‌ನ ಒಂದು ವಿಧವಾದ‘ವೂಟ್ಜ್ ಸ್ಟೀಲ್’ನ್ನು ಪುನರುತ್ಪಾದಿಸಲು ಎನ್‌ಐಎಎಸ್ ವಿಜ್ಞಾನಿಗಳು ಯತ್ನಿಸುತ್ತಿದ್ದಾರೆ. ಅಧುನಿಕ ವಿಜ್ಞಾನಿಗಳಿಗೂ ಕುತೂಹಲ ಮೂಡಿಸಿರುವ ಈ ರಾಕೆಟ್ ಒಂದರಿಂದ ಎರಡು ಅಡಿ ಎತ್ತರವಿದ್ದು, 2.5ರಿಂದ 3.5 ಇಂಚು ವರ್ತುಲವನ್ನು ಹೊಂದಿದೆ.

 ರಾಕೆಟ್ ನಿರ್ಮಾಣ ಪೂರ್ತಿಯಾದ ಬಳಿಕ ಅದನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವೈಮಾನಿಕ ಪರೀಕ್ಷಾ ವಲಯದಲ್ಲಿ ಈ ರಾಕೆಟನ್ನು ಪರೀಕ್ಷಿಸಲಾಗುವುದು. ಕೇಂದ್ರ ರಕ್ಷಣಾ ಸಚಿವಾಲಯ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಮಹತ್ವಾಕಾಂಕ್ಷಿ ಯೋಜನೆಗೆ ಸಹಕಾರ ನೀಡಲಿದೆ.

ರಾಕೆಟ್ ನಿರ್ಮಾಣದ ಸಂಶೋಧನಾ ತಂಡದ ನೇತೃತ್ವ ವಹಿಸಿರುವ ವೈಮಾನಿಕ ವಿಜ್ಞಾನಿ ಪ್ರೊ.ರೊಡ್ಡಂ ನರಸಿಂಹ,ಈ ಮಾದರಿಯ ರಾಕೆಟ್‌ನ್ನು ನಿರ್ಮಿಸಲು ಯತ್ನಿಸಿರುವುದು ಇದು ಮೂರನೇ ಸಲವಾಗಿದೆ. ಟಿಪ್ಪುಕಾಲದ ರಾಕೆಟ್‌ನ್ನು ಪುನರ್‌ಸೃಷ್ಟಿಸುವ ಯೋಜನೆ ಮೂರು ದಶಕಗಳ ಹಿಂದೆಯೇ ಮೊಳಕೆಯೊಡೆದಿತ್ತಾದರೂ, ಈತನಕವೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ.

 ಈ ರಾಕೆಟ್ ತಯಾರಿಗೆ ಆರು ತಿಂಗಳುಗಳಿಂದ ಒಂದು ವರ್ಷ ಸಮಯ ತಗಲಬಹುದೆಂದು ಪ್ರೊ. ನರಸಿಂಹ ಹೇಳುತ್ತಾರೆ. ಟಿಪ್ಪುಸುಲ್ತಾನ್ ಆಳ್ವಿಕೆಯಲ್ಲಿ ಮೈಸೂರಿನಲ್ಲಿ ನಿರ್ಮಿತವಾದ ರಾಕೆಟ್‌ಗಳ ಮಹತ್ವವನ್ನು ಹಾಗೂ ಆ ಕಾಲದಲ್ಲಿ ಲೋಹಶಾಸ್ತ್ರದಲ್ಲಿ ಭಾರತ ಸಾಧಿಸಿದ್ದ ಪ್ರಗತಿ ಮತ್ತು ಈ ತಂತ್ರಜ್ಞಾನವನ್ನು ಬ್ರಿಟಿಶರು ಹೇಗೆ ಕದ್ದುಕೊಂಡರು ಮತ್ತು ಯುರೋಪ್‌ನಲ್ಲಿ ನವೀನ ರಾಕೆಟ್‌ಗಳ ತಯಾರಿಗೆ ಇದು ಹೇಗೆ ಪ್ರೇರಣೆಯಾಯಿತೆಂಬುದನ್ನು ಈ ರಾಕೆಟ್‌ನ ಪುನರ್ ನಿರ್ಮಾಣದಿಂದ ತಿಳಿದುಬರಲಿದೆಯೆಂದು ಅವರು ತಿಳಿಸಿದ್ದಾರೆ.

 ಟಿಪ್ಪುಸುಲ್ತಾನ್ ಕಾಲದ ರಾಕೆಟ್‌ಗಳ ಪ್ರತಿಕೃತಿಯು ಲಂಡನ್‌ನ ವಸ್ತುಸಂಗ್ರಹಾಲಯಗಳಲ್ಲಿ ಇವೆಯಾದರೂ, ಭಾರತದಲ್ಲಿರದಿರುವುದು ತೀರಾ ವಿಷಾದಕರ ಎಂದು ನರಸಿಂಹರಾವ್ ಹೇಳುತ್ತಾರೆ.

  ಎನ್‌ಐಎಎಸ್‌ನ ರಾಕೆಟ್ ನಿರ್ಮಾಣ ಹಾಗೂ ಪ್ರಾಯೋಗಿಕ ಪರೀಕ್ಷೆಯ ಸಮಗ್ರ ಪ್ರಕ್ರಿಯೆಯ ಕುರಿತಾದ ಕಿರುಸಾಕ್ಷ ಚಿತ್ರವೊಂದನ್ನು ಈ ವಿಷಯವಾಗಿ ಚಾರ್ಲ್ಸ್ ವ್ಯಾಲೇಸ್ ಇಂಡಿಯಾ ಟ್ರಸ್ಟ್ ರಿಸರ್ಚ್ ಸ್ಕಾಲರ್‌ಶಿಪ್ ಯೋಜನೆಯಡಿ ವಿಸ್ತೃತವಾದ ಅಧ್ಯಯನ ನಡೆಸಿರುವ ವಿಜ್ಞಾನಿಗಳಾದ ಪ್ರಸಾದ್ ಹಾಗೂ ಕುಮಾತಂ ತಿಳಿಸಿದ್ದಾರೆ.

    ಈ ಮಧ್ಯೆ ಟಿಪ್ಪು ರಾಕೆಟ್‌ಗಳ ಬಗ್ಗೆ ಸಾರ್ವಜನಿಕರ ಗಮನಸೆಳೆಯಲು ಎನ್‌ಐಎಎಸ್ ಸಹಕಾರದೊಂದಿಗೆ ಬೆಂಗಳೂರಿನ ರಂಗಭೂಮಿ ತಂತ್ರಜ್ಞರಾದ ಮಲ್ಲಿಕಾ ಪ್ರಸಾದ್ ಹಾಗೂ ನಾಟಕರಚನೆಗಾರ ರಾಮ್ ಗಣೇಶ್ ಅವರು ‘ವ್ಯಾನ್‌ಗಾರ್ಡ್- ದಿ ಸ್ಟೋರಿ ಆಫ್ ಮೈಸೂರು ರಾಕೆಟ್ಸ್’ ಎಂಬ ಆಂಗ್ಲ ನಾಟಕವೊಂದನ್ನು ಅಕ್ಟೋಬರ್ 23ರಂದು ಪ್ರದರ್ಶಿಸಲಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X