ಅಲ್ ಮದೀನ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಸ್ವಾಗತ ಸಮಿತಿ ಕಛೇರಿ ಉದ್ಘಾಟನೆ
ನರಿಂಗಾನ,ಅ.20: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಆಶ್ರಯದಲ್ಲಿ ನ.21 ರಿಂದ ನ.23ರ ವರೆಗೆ ಆಯೋಜಿಸಲಾಗಿರುವ ಹುಬ್ಬುರ್ರಸೂಲ್ ಕಾನ್ಪರೆನ್ಸ್ ನ ಕಾರ್ಯಚಟುವಟಿಕೆಗಾಗಿ ತೆರೆಯಲಾದ ಸ್ವಾಗತ ಸಮಿತಿಯ ಕಛೇರಿಯನ್ನು ಸುನ್ನೀ ಸಂಘಟನೆಗಳ ನೇತಾರ ಬಹು ಎಸ್.ಪಿ ಹಂಝ ಸಖಾಫಿ ಇಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರವಾದಿ (ಸ.ಅ) ರವರ ಜೀವನ ಸಂದೇಶವನ್ನು ಇನ್ನಷ್ಟು ವ್ಯಾಪಕಗೊಳಿಸಲು ಈ ಕಾನ್ಪರೆನ್ಸ್ ನ ಮೂಲಕ ಸಾದ್ಯವಾಗಲಿ ಎಂದು ಹಾರೈಸಿದರು. ಶರಪುಲ್ ಉಲಮಾ ಶೈಖುನಾ ಪಿ.ಎಂ ಅಬ್ಬಾಸ್ ಮುಸ್ಲಿಯಾರ್ ದುಅ ನೆರವೇರಿಸಿದರು. ಸ್ವಾಗತ ಸಮಿತಿ ಕನ್ವೀನರ್ ಬದುರುಲ್ ಮುನೀರ್ ಹಿಮಮಿ ಸ್ವಾಗತಿಸಿದರು. ಮುನೀರ್ ಕಾಮಿಲ್ ಸಖಾಫಿ, ಅಬ್ದುಲ್ ರಹಿಮಾನ್ ಅಹ್ಸನಿ. ಅಬ್ದುಲ್ ಅಝೀಝ್ ಅಹ್ಸನಿ. ಅಬ್ದುಲ್ ಸಲಾಂ ಅಹ್ಸನಿ ಶುಭ ಹಾರೈಸಿದರು. ಹುಸೈನ್ ಮುಸ್ಲಿಯಾರ್ ಉದ್ಯಾವರ ಧನ್ಯವಾದಗೈದರು.
ವೇದಿಕೆಯಲ್ಲಿ ಅಬ್ದುಲ್ಲಾ ಹಾಜಿ ಮೋರ್ಲ ,ಪುತ್ತು ಅಬುಧಾಬಿ, ಅಬ್ಬಾಸ್ ಸಖಾಫಿ, ಅಬೂಬಕ್ಕರ್ ಮದನಿ ಪಡಿಕ್ಕಲ್, ಕಂಡಿಕ ಮುಹಮ್ಮದ್ ಹಾಜಿ, ಮಹಮ್ಮದ್ ಕುಂಞಿ ಅಮ್ಜದಿ, ಕಲ್ಕಟ್ಟ ಮೋನು, ಅಬ್ದುಲ್ ರಝಾಕ್ ಮಾಸ್ಟರ್, ಇಬ್ರಾಹಿಂ ಮದನಿ ಕಲ್ಕಟ್ಟ, ಜೀಲಾನಿ ಮುಹಮ್ಮದ್ ಹಾಜಿ, ಪಾರೂಖ್ ಸಖಾಫಿ, ಅಶ್ರಫ್ ನೆಕ್ಕರೆ, ಇಬ್ರಾಹಿಂ ಮದನಿ, ಬಶೀರ್ ಮೋರ್ಲ, ಖಾಲಿದ್ ಹಾಜಿ ಬಟ್ಕಳ, ಅಬೂಬಕ್ಕರ್ ಮುಸ್ಲಿಯಾರ್ ಮೊಂಟೆಪದವು,ಇರ್ಷಾದ್ ಮದನಿ, ಸಿದ್ದೀಖ್ ಅಹ್ಸನಿ, ಕಬೀರ್ ಸಅದಿ, ಹಾಫಿಲ್ ಮರ್ಷದ್, ಹಾಪಿಲ್ ಅಬ್ದುಲ್ ರಝಾಕ್, ಹಾಪಿಲ್ ಅಬ್ದುಲ್ ಅಝೀಝ್ ಹಿಮಮಿ, ಹೈದರ್ ಸಖಾಫಿ ಉಪಸ್ಥಿತರಿದ್ದರು.