ಕಾರ್ಕಳ : ಕಳವು ಆರೋಪಿಯ ಬಂಧನ
ಕಾರ್ಕಳ, ಅ.21: ಕುಕ್ಕುಂದೂರು ಗ್ರಾಮ ನೆಲ್ಲಿಕಟ್ಟೆ ಬಸ್ಸು ನಿಲ್ದಾಣದ ಬಳಿ ಅ.21ರಂದು ಕಾರ್ಕಳ ನಗರ ಪೊಲೀಸರು ಕಳವು ಆರೋಪಿಯೊಬ್ಬನನ್ನು ಸೊತ್ತು ಸಹಿತ ಬಂಧಿಸಿದ್ದಾರೆ.
ಬಂಧಿತನನ್ನು ಕಾರ್ಕಳ ಬಂಗ್ಲೆಗುಡ್ಡೆಯ ನಾಗರಾಜ(37) ಎಂದು ಗುರುತಿಸ ಲಾಗಿದೆ. ಈತನ ವಶದಲ್ಲಿದ್ದ ಬೆಳ್ಳಿಯ ಕಾಲು ದೀಪ, ತೀರ್ಥದ ಲೋಟ, ಚಮಚ, ತಟ್ಟೆ, ಬೆಂಡೋಲೆ ಒಂದು ಜೊತೆ ಮತ್ತು 3 ಸೋಲಾರ್ ಬ್ಯಾಟರಿ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





