Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ವಿಷಯ ವೈವಿಧ್ಯವುಳ್ಳ ಕಥನ ರೂಪದ ಬರಹಗಳು...

ವಿಷಯ ವೈವಿಧ್ಯವುಳ್ಳ ಕಥನ ರೂಪದ ಬರಹಗಳು ‘ಇವನಾರವ...’

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯ-ಕಾರುಣ್ಯ23 Oct 2017 12:07 AM IST
share
ವಿಷಯ ವೈವಿಧ್ಯವುಳ್ಳ ಕಥನ ರೂಪದ ಬರಹಗಳು ‘ಇವನಾರವ...’

 ಯೋಗೇಶ್ ಮಾಸ್ಟರ್ ಸದ್ಯದ ದಿನಗಳಲ್ಲಿ ತಮ್ಮ ವಿಭಿನ್ನ, ವಿಶಿಷ್ಟ ಹಾಗೂ ಮಾನವೀಯ ವಿಚಾರಧಾರೆಗಳ ಬರಹಗಳ ಮೂಲಕ ಸುದ್ದಿಯಲ್ಲಿರುವ ಲೇಖಕರು. ಅವರ ಮಥಿಸಿದ ವಿಚಾರಗಳ ಕಥಿಸಿದ ಲೇಖನಗಳ ಸಂಗ್ರಹವೇ ‘ಇವನಾರವ’. ಈ ಕೃತಿಯ ತಲೆಬರಹವೇ ವಚನವೊಂದರ ಸಾಲಾಗಿದೆ. ಸದ್ಯ ಒಬ್ಬರು ಮತ್ತೊಬ್ಬರಿಗೆ ಅನ್ಯರಾಗುತ್ತಿರುವ ದಿನಗಳಲ್ಲಿ ಇವನಾರವ ಕೃತಿ, ಒಳಗೊಳ್ಳುವಿಕೆಯ, ಕೂಡಿಕೊಳ್ಳುವ ಅಗತ್ಯವನ್ನು ಎತ್ತಿ ಹಿಡಿಯುತ್ತದೆ. ಅಂತಹದೊಂದು ಮಾನವೀಯ ತುಡಿತವೇ ಇಲ್ಲಿರುವ ಎಲ್ಲ ಬರಹಗಳನ್ನು ಬರೆಸಿದೆ. ಇಲ್ಲಿ ಬೇರೆ ಬೇರೆ ವಿಷಯ ವೈವಿಧ್ಯಗಳನ್ನೊಳಗೊಂಡ 47 ಲೇಖನಗಳಿವೆ. ಹಲವು ಲಲಿತ ಪ್ರಬಂಧಗಳನ್ನು ಹೋಲುತ್ತವೆ. ವಿವಾದದ ಸ್ಫೋಟಕಗಳನ್ನು ಎದೆಯೊಳಗೆ ಹೊತ್ತುಕೊಂಡ ಕೆಲವು ಬರಹಗಳೂ ಇವೆ.

‘‘ನೀವು ಕರೆ ಮಾಡುತ್ತಿರುವ ಚಂದಾದಾರರು...’’ ಎನ್ನುವ ಯಾಂತ್ರಿಕ ಹೇಳಿಕೆಯನ್ನು ಇಟ್ಟುಕೊಂಡು ಯೋಗೇಶ್ ಅವರು ಬದುಕಿನ ವಿವಿಧ ಮಗ್ಗುಲನ್ನು ಶೋಧಿಸುವ ಸುಂದರ ಬರಹವನ್ನು ಬರೆಯುತ್ತಾರೆ. ನಮ್ಮ ನಮ್ಮ ವ್ಯಾಪ್ತಿಯ ಗುಣಗಳನ್ನು ಕಟ್ಟಿಕೊಳ್ಳಬೇಕಾದವರು ನಾವೇ. ನಮ್ಮ ವ್ಯಾಪ್ತಿ ಪ್ರದೇಶದಲ್ಲಿ ಇರುವವರೆಲ್ಲರೂ ನಾವು ನೋಡಿದಂತೆಯೇ ಕಾಣುತ್ತಾರೆ ಎನ್ನುವುದರೊಂದಿಗೆ ಮನುಷ್ಯನೊಂದಿಗೆ ಸಾಧ್ಯವಾಗುವ ಸಂವಹನದ ಬಗ್ಗೆ ಮಾತನಾಡುತ್ತಾರೆ. ‘ತಾಯಿ ಚಾಮುಂಡಿ...’ ಒಂದು ವ್ಯಂಗ್ಯ ಧಾಟಿಯ ಬರಹ. ಇಲ್ಲಿ ತಾಯಿ ಚಾಮುಂಡಿಯ ಜೊತೆಗೆ ಮಾತುಕತೆ ನಡೆಸುವ ನೆಪದಲ್ಲಿ ವರ್ತಮಾನವನ್ನು ಅವರು ವಿಡಂಬಿಸುತ್ತಾರೆ. ಇಂತಹ ವ್ಯಂಗ್ಯಧಾಟಿಯ ಬರಹಗಳೂ ಹಲವಿವೆ. ‘ಚಿಕ್ಕಮ್ಮನ ಮದುವೆ’ಯಂತಹ ನವೋದಯ ಶೈಲಿಯ ಬರಹಗಳೂ ಇವೆ. ವೈಚಾರಿಕತೆಯನ್ನು ಮೈಗೂಡಿಸಿಕೊಂಡ ನೇರ ಲೇಖನಗಳೂ ಇಲ್ಲಿ ನಮ್ಮನ್ನು ಸೆಳೆಯುತ್ತವೆ. ‘ಇವನಾರವ’ ಕೃತಿಗೆ ಈ ಮೂಲಕ ಬೇರೆ ಬೇರೆ ಆಯಾಮಗಳನ್ನು ನಾವು ಕೊಡಬಹುದು. ಕಥನ ಶೈಲಿಯ ಇಲ್ಲಿರುವ ಬರಹಗಳು ಆ ಕಾರಣಕ್ಕಾಗಿಯೇ ವಿಭಿನ್ನವೆನಿಸುತ್ತವೆ. ‘ಇವ ನಮ್ಮವ’ ಎಂಬ ಆತ್ಮೀಯತೆಯನ್ನು ಓದುಗನಲ್ಲಿ ಮೂಡಿಸುತ್ತವೆೆ.
328 ಪುಟಗಳ ಬೃಹತ್ ಕೃತಿ ಇದು. ಮುಖಬೆಲೆ 250 ರೂಪಾಯಿ. ರಾಜಮಾರ್ಗ ಸಾಹಿತ್ಯ ಸಂಸ್ಕೃತಿ ಈ ಪುಸ್ತಕವನ್ನು ಹೊರತಂದಿದೆ. ಆಸಕ್ತರು 08880660347 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯ
-ಕಾರುಣ್ಯ
Next Story
X