Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜಿಎಸ್‌ಟಿ, ನೋಟು ನಿಷೇಧದಿಂದ ವಿವಾಹ...

ಜಿಎಸ್‌ಟಿ, ನೋಟು ನಿಷೇಧದಿಂದ ವಿವಾಹ ವೆಚ್ಚದಲ್ಲಿ ಹೆಚ್ಚಳ

ವಾರ್ತಾಭಾರತಿವಾರ್ತಾಭಾರತಿ23 Oct 2017 11:05 PM IST
share
ಜಿಎಸ್‌ಟಿ, ನೋಟು ನಿಷೇಧದಿಂದ ವಿವಾಹ ವೆಚ್ಚದಲ್ಲಿ ಹೆಚ್ಚಳ

ಹೊಸದಿಲ್ಲಿ, ಆ. 21: ನಗದು ಅಪಮೌಲ್ಯೀಕರಣ ಹಾಗೂ ಸರಕು ಹಾಗೂ ಸೇವಾ ತೆರಿಗೆ ಕಾರಣದಿಂದ (ಜಿಎಸ್‌ಟಿ) ವಿವಾಹದ ವೆಚ್ಚದಲ್ಲಿ ಶೇ. 10ರಿಂದ 15 ಏರಿಕೆಯಾಗಲಿದೆ.

 ಜಿಎಸ್‌ಟಿ ಹಾಗೂ ನಗದು ಅಪಮೌಲ್ಯೀಕರಣ ವಿವಾಹ ಉದ್ಯಾನ, ಸಭಾಭವನ, ಟೆಂಟ್ ಕಾಯ್ದಿರಿಸುವುದು, ಸಿಹಿ ತಿಂಡಿ ಪೂರೈಕೆ ಹಾಗೂ ಫೋಟೊಗ್ರಾಫಿಯಂತಹ ವಿವಾಹಕ್ಕೆ ಸಂಬಂಧಿಸಿದ ಸೇವೆಯ ಮೇಲೆ ನಿರ್ದಿಷ್ಟವಾಗಿ ಪರಿಣಾಮ ಬೀರಬಹುದು ಎಂದು ಇಂಡಸ್ಟ್ರಿ ಚೇಂಬರ್ ಅಸೊಚಾಮ್ ಅಧ್ಯಯನ ತಿಳಿಸಿದೆ.

ಮುಂಬರುವ ವಿವಾಹ ಕಾಲದಲ್ಲಿ ಆಭರಣ, ಬಟ್ಟೆಬರೆ, ಸಲೂನ್, ಬ್ಯೂಟಿಪಾರ್ಲರ್, ಫೋಟೊಗ್ರಾಫಿ, ಹೊಟೇಲ್, ಸಭಾಭವನ, ಕೊರಿಯರ್ ಹಾಗೂ ಇತರ ವಿವಾಹ ಸಂಬಂಧಿತ ಸೇವೆಗಳ ಮೇಲೆ ಕೂಡ ಜಿಎಸ್‌ಟಿ ಹಾಗೂ ನಗದು ಅಪವೌಲ್ಯೀಕರಣ ಪ್ರಭಾವ ಬೀರಲಿದೆ.

ಶಾಪಿಂಗ್, ಟೆಂಟ್ ಕಾಯ್ದಿರಿಸುವಿಕೆ, ಆಹಾರ ಸೇವೆ ಮೊದಲಾದ ವಿವಾಹ ಸಮಾರಂಭದ ಸೇವೆಗಳ ಶುಲ್ಕ ಜಿಎಸ್‌ಟಿ ಕಾರಣಕ್ಕೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಚಿನ್ನ ಹಾಗೂ ವಜ್ರದ ಆಭರಣಗಳ ಮೇಲಿನ ತೆರಿಗೆ ಜಿಎಸ್‌ಟಿಯಿಂದಾಗಿ ಶೇ. 1.6ರಿಂದ ಶೇ. 3ರ ವರೆಗೆ ಏರಿಕೆಯಾಗಲಿದೆ. ಪಂಚತಾರ ಹೊಟೇಲ್‌ಗಳನ್ನು ಮುಂಗಡ ಕಾಯ್ದಿರಿಸುವಿಕೆ ವೆಚ್ಚ ಜಿಎಸ್‌ಟಿ ಯಿಂದಾಗಿ ಶೇ. 28ರಷ್ಟು ಹೆಚ್ಚಾಗಲಿದೆ.

 ಕಾರ್ಯಕ್ರಮ ನಿರ್ವಹಣಾ ಸೇವೆಯಲ್ಲಿ ವೆಚ್ಚದ ಮೇಲೆ ಹೆಚ್ಚುವರಿಯಾಗಿ ಶೇ. 18 ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ವಿವಾಹ ಗಾರ್ಡನ್ ಹಾಗೂ ಸಭಾಭವನ ಮುಂಗಡ ಕಾಯ್ದಿರಿಸುವಿಕೆಯಲ್ಲಿ ಶೇ. 18 ಜಿಎಸ್‌ಟಿ ನೀಡಬೇಕಾಗಬಹುದು.

ಈ ಎಲ್ಲ ಸೇವೆಗಳ ಜಿಎಸ್‌ಟಿ ದರ ಶೇ. 18ರಿಂದ 28. ಜಿಎಸ್‌ಟಿ ಮೊದಲು ಟೆಂಟ್ ಸೇವೆ, ಸಿಹಿತಿಂಡಿ ಕಾಯ್ದಿರಿಸುವಿಕೆಯಂತಹ ಹೆಚ್ಚಿನ ವಿವಾಹ ಸೇವಾ ವ್ಯವಹಾರಗಳಿಗೆ ನೋಂದಣಿಯಾಗದ ಬಿಲ್ ಬಳಸಲಾಗುತ್ತಿತ್ತು. ಅವರು ಯಾವುದೇ ತೆರಿಗೆ ನೀಡುತ್ತಿರಲಿಲ್ಲ ಎಂದು ಅಧ್ಯಯನ ಹೇಳಿದೆ.

ನಗದು ಮೊತ್ತದ ಅಲಭ್ಯತೆ ಕಾರಣದಿಂದ ಹೆಚ್ಚಿನ ಜನರು ವಿವಾಹಕ್ಕೆ ಬೇಕಾದ ದಿನಸಿ ಹಾಗೂ ಇತರ ವಸ್ತುಗಳನ್ನು ಖರೀದಿಸಿ ಬಿಲ್ ಪಾವತಿ ಬಾಕಿ ಇರಿಸಲು ಆದ್ಯತೆ ನೀಡುತ್ತಿದ್ದರು. ಆದರೆ, ಜಿಎಸ್‌ಟಿಯಿಂದಾಗಿ ವ್ಯಾಪಾರಿಗಳು ಬಿಲ್ ಪಾವತಿ ಬಾಕಿ ಇರಿಸಲು ಅವಕಾಶ ನೀಡಲಾರರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X