ಅಕ್ರಮ ಮದ್ಯ ಮಾರಾಟ: ಓರ್ವನ ಸೆರೆ
ಬೈಂದೂರು, ಅ.24: ಯಡ್ತರೆ ಗ್ರಾಮದ ಮೂಕಾಂಬಿಕಾ ರೈಲ್ವೆ ನಿಲ್ದಾಣ ರಸ್ತೆಯ ಮನೀಷ ಹೊಟೇಲ್ ಹಿಂಬದಿಯಲ್ಲಿ ಅ.23ರಂದು ಸಂಜೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಉಡುಪಿಯ ಸೆನ್ ಪೊಲೀಸರು ಬಂಧಿಸಿದ್ದಾರೆ.
ಸಸಿಹಿತ್ಲುವಿನ ರಾಘವೇಂದ್ರ ಪೂಜಾರಿ(35) ಬಂಧಿತ ಆರೋಪಿ. ಬಂಧಿತ ನಿಂದ ಒಟ್ಟು 4885ರೂ. ಮೌಲ್ಯದ ಸೊತ್ತುಗಳನ್ನು ವಶಪಡಿ ಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
Next Story