ಉಳ್ಳಾಲದ ರಾಣಿ ಅಬ್ಬಕ್ಕರನ್ನು ಸ್ಮರಿಸಿದ ರಾಷ್ಟ್ರಪತಿ ಕೋವಿಂದ್
ಬೆಂಗಳೂರು, ಅ.25: ವಿಧಾನಸೌಧದ ವಜ್ರಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಬುಧವಾರ ವಿಧಾನಮಂಡಲದಲ್ಲಿ ವಿಶೇಷ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಉಳ್ಳಾಲ ರಾಣಿ ಅಬ್ಬಕ್ಕರನ್ನು ಸ್ಮರಿಸಿದ್ದಾರೆ.
‘‘ಕರ್ನಾಟಕ ಮಹಾನ್ ವೀರ ಯೋಧರ ಭೂಮಿ. ಇಲ್ಲಿ ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ರಾಜನಾಗಿದ್ದ. ಕೆಂಪೇಗೌಡ ಬೆಂಗಳೂರಿನ ನಿರ್ಮಾತೃ. ಕಿತ್ತೂರು ರಾಣಿ ಚೆನ್ನಮ್ಮ ಹಾಗು ರಾಣಿ ಅಬ್ಬಕ್ಕ ಅವರು ವಸಾಹತು ಶಕ್ತಿಗಳ ವಿರುದ್ಧ ಪ್ರಾರಂಭದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ರಾಕೆಟ್ ತಂತ್ರಜ್ಞಾನದ ಜನಕ ಟಿಪ್ಪು, ಅವರು ಅಪ್ರತಿಮ ವೀರ ಯೋಧನಾಗಿದ್ದರು’’ ಎಂದು ರಾಷ್ಟ್ರಪತಿ ಕೋವಿಂದ್ ಬಣ್ಣಿಸಿದರು.
Next Story