Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ನ್ಯಾಯದ ನಿರೀಕ್ಷೆಯಲ್ಲಿ ಮಂಗಳೂರಿನ...

ನ್ಯಾಯದ ನಿರೀಕ್ಷೆಯಲ್ಲಿ ಮಂಗಳೂರಿನ ವಯೋವೃದ್ಧೆ ಗಿರಿಜಕ್ಕ

ವಾರ್ತಾಭಾರತಿವಾರ್ತಾಭಾರತಿ25 Oct 2017 9:20 PM IST
share
ನ್ಯಾಯದ ನಿರೀಕ್ಷೆಯಲ್ಲಿ ಮಂಗಳೂರಿನ ವಯೋವೃದ್ಧೆ ಗಿರಿಜಕ್ಕ

ಉಡುಪಿ, ಅ. 25: ನಯ ವಂಚಕನೊಬ್ಬನಿಂದ ಮೋಸಕ್ಕೊಳಗಾಗಿ ಜೀವಮಾನವಿಡೀ ತಾನು ದುಡಿದು ಸಂಪಾದಿಸಿದ ಎರಡು ಲಕ್ಷ ರೂ.ಗಳೆಲ್ಲವನ್ನೂ ಕಳೆದು ಕೊಂಡಿರುವ ಮಂಗಳೂರಿನ 80 ವರ್ಷದ ವೃದ್ಧೆ ಗಿರಿಜಕ್ಕನತ್ತ ಇದೀಗ ನ್ಯಾಯ ದೇವತೆ ಕಣ್ಣು ತೆರೆದಿದ್ದು, ತನ್ನ ಹಣವನ್ನು ಮತ್ತೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಎರಡು ವಾರಗಳ ಹಿಂದೆ ಪತ್ರಿಕೆಗಳ ಮೂಲಕ ಬೆಳಕಿಗೆ ತಂದ ಪ್ರಕರಣವೊಂದರ ಹಿನ್ನೆಲೆಯಲ್ಲಿ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯವು ಅಪರಾಧಿ ರಾಮ ಪೂಜಾರಿ ಎಂಬಾತನನ್ನು ಚರಸೊತ್ತುಗಳ ಸಹಿತ ಬಂಧನಕ್ಕೊಳಪಡಿಸಿ ತನ್ನ ಮುಂದೆ ಹಾಜರುಪಡಿಸುವಂತೆ ಅಧೀಕ್ಷಕರಿಗೆ ಆದೇಶ ನೀಡಿದೆ.

ಅದೇ ರೀತಿ ಆತನಿಂದ ವಶಪಡಿಸಿಕೊಂಡ ಚರ ಸೊತ್ತುಗಳನ್ನು ಮಾರಿ ಸಂತ್ರಸ್ಥೆಗೆ 2,25,000 ರೂ.ಗಳನ್ನು ಪಾವತಿಸುವಂತೆಯೂ ನ್ಯಾಯಾಧೀಶರು ಆಜ್ಞಾಪಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಈಗ 80ರ ಹರೆಯದಲ್ಲಿರುವ ಗಿರಿಜಕ್ಕ ಬಳೆಗಾರ ಜನಾಂಗದವಳು. ಆಕೆಗೆ ಮಕ್ಕಳಿಲ್ಲ. ಬಳೆ ಮಾರಲು ಆಕೆಗೆ ಅಂಗಡಿಯೂ ಇರಲಿಲ್ಲ. ಬೀದಿ-ಬೀದಿ ತಿರುಗಿ ಸಂತೆ-ಜಾತ್ರೆಗಳಿಗೆ ಹೋಗಿ ಬಳೆ ಮಾರಿ ಗಳಿಸಿದ ಎರಡು ಲಕ್ಷ ರೂ.ಗಳನ್ನು ಮಂಗಳೂರಿನ ಕದ್ರಿ ಸಹಕಾರಿ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಲ್ಲಿಟ್ಟಿದ್ದರು. ತನ್ನ ಕೊನೆಗಾಲದಲ್ಲಿ ಉಪಯೋಗಕ್ಕೆ ಬಂದೀತು ಎಂಬ ಆಸೆಯಲ್ಲಿ ದಿನಗಳೆಯುತಿದ್ದಳು.

ಎಲ್ಲಿಂದಲೋ ಬಂದ ರಾಮಪೂಜಾರಿ ಈ ವೃದ್ದೆಯ ಸ್ನೇಹ ಗಳಿಸಿ ‘ಗಿರಿಜಕ್ಕ, ನೀವು ನನ್ನ ತಾಯಿ ಇದ್ದಂತೆ ಕೊನೆಗಾಲದಲ್ಲಿ ನಾನೇ ನೋಡಿಕೊಳ್ಳುತ್ತೇನೆ.’ ಎಂದು ಆಶ್ವಾಸನೆ ನೀಡಿ ಆಕೆಯ ಜೀವನವೆಲ್ಲಾ ದುಡಿದು ಉಳಿತಾಯ ಮಾಡಿದ ಹಣವನ್ನೇಲ್ಲಾ ಲಪಟಾಯಿಸಿದ. ಬಡ್ಡಿ ನೀಡುತ್ತೇನೆ, ಬೇಕಾದಾಗಲ್ಲೆಲ್ಲ ಅಸಲನ್ನೂ ನೀಡುತ್ತೇನೆ ಎಂದು ಮಾತು ನೀಡಿ ಕೊನೆಗೆ ಪುಡಿಗಾಸನ್ನೂ ಕೊಡಲಿಲ್ಲ!

ವಕೀಲರೋರ್ವರ ಸಹಾಯದಿಂದ 2014ರಲ್ಲಿ ಮಂಗಳೂರಿನ ಸಿವಿಲ್ ನ್ಯಾಯಲಯದಲ್ಲಿ ಗಿರಿಜಕ್ಕ ಹೂಡಿದ ದಾವೆ 2016ರಲ್ಲಿ ಇತ್ಯರ್ಥವಾಯಿತು. ಬಡ್ಡಿಸಹಿತ 2,20,00ರೂ.ಗಳನ್ನು ನೀಡುವಂತೆ ನ್ಯಾಯಾಧೀಶರು ಆದೇಶಿಸಿದರು. ತನ್ನ ಹಣ ಪಡೆಯಲು ಸುಮಾರು 10 ತಿಂಗಳ ಕಾಲ ಪರದಾಡಿದ ಗಿರಿಜಕ್ಕ ಕೊನೆಗೆ ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದಳು.

ಮಧುಮೇಹ, ರಕ್ತದೊತ್ತಡದಿಂದ ಬಳಲುತಿದ್ದ ಗಿರಿಜಕ್ಕನಿಗೆ ಸಹಿ ಹಾಕಲೂ ಸಾಧ್ಯವಾಗುವುದಿಲ್ಲವೆಂಬುದನ್ನು ಅರಿತ ಸಂಘಟನೆ, ಕೊನೆಗೆ ತಾನೇ ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು ನೀಡಿತು.

ಆರು ತಿಂಗಳ ಹಿಂದೆ ಮಂಗಳೂರಿನ ಉಪ ವಿಭಾಗಾಧಿಕಾರಿಗಳು ಆಕೆಯ ಹಣ ತೆಗೆಸಿಕೊಡುವಂತೆ ಕೊಣಾಜೆಯ ಪೋಲಿಸ್‌ರಿಗೆ ನ್ಯಾಯಾಲಯ ಆದೇಶ ನೀಡಿತ್ತು. ಆದರೂ ಆಕೆಗೆ ನ್ಯಾಯ ಸಿಕ್ಕಿರಲಿಲ್ಲ. ಮರಣ ಶಯ್ಯೆಯಲ್ಲಿರುವ ಗಿರಿಜಕ್ಕ ಆದೇಶ ಪಾಲನೆಯಾಗದಿರುವುದನ್ನು ಗಮನಿಸಿ, ನನ್ನ ಔಷಧಿಗಾದರೂ ಹಣಕೊಡಿಸಿ. ಒಂದು ವೇಳೆ ಹಣ ನನಗೆ ಸಿಗದಿದ್ದರೂ ಚಿಂತಿಲ್ಲ. ರಾಮ ತಿನ್ನಬಾರದು. ದಯವಿಟ್ಟು ಅ ಹಣವನ್ನು ಅನಾಥಶ್ರಮ ಕ್ಕಾದರೂ ಕೊಡಿಸಿ ಎಂದು ವಿನಂತಿಸಿದ್ದಳು.

ನ್ಯಾಯ ನಿಂದನಾ ಅರ್ಜಿ: ಪ್ರತಿಷ್ಠಾನದ ಮೂಲಕ ಈ ಪ್ರಕರಣ ಸುದ್ದಿಯಾಗುತಿದ್ದಂತೆ ಗಿರಿಜಕ್ಕನ ಪರ ಈ ಹಿಂದೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಮಂಗಳೂರಿನ ವಕೀಲ ಪ್ರಸಾದ ಭಂಡಾರಿ ಅವರು ಕಳೆದ ವಾರ ನ್ಯಾಯಾಲಯದಲ್ಲಿ ನ್ಯಾಯ ನಿಂದನಾ ಅರ್ಜಿ ಸಲ್ಲಿಸಿ ಅಪರಾಧಿ ರಾಮಪೂಜಾರಿ ಯ ಚರಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು ಗಿರಿಜಮ್ಮನ ಹಣ ಕೊಡಿಸಬೇಕೆಂದು ವಿನಂತಿಸಿದ್ದರು.

ಇದೀಗ ನ್ಯಾಯಾಧೀಶರು ನೀಡಿದ ಆದೇಶದ ಮೇರೆಗೆ ಕೊಣಾಜೆ ಪೋಲೀಸರು ರಾಮಪೂಜಾರಿಯನ್ನು ಹಾಗೂ ಅತನ ಹೆಸರಿನಲ್ಲಿರುವ ಮಾಕ್ಸಿಕ್ಯಾಬ್‌ನ್ನು ವಶಪಡಿಸಿಕೊಂಡು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ನ್ಯಾಯಾಲಯದ ಮೂಲಕ ಆತನ ಚರಸೊತ್ತನ್ನು ಮಾರಿ ಗಿರಿಜಕ್ಕನ ಹಣಪಾವತಿಸುವ ಕಾರ್ಯ ನಡೆಯುತ್ತಿದೆ ಎಂದು ಈ ಪ್ರಕರಣದಲ್ಲಿ ವಯೋವೃದ್ಧೆ ಗಿರಿಜಕ್ಕನ ಪರವಾಗಿ ಹೋರಾಡಿದ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನುಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X