ಅ.27ರಂದು ರಾ.ಜೈವಾನಿಲ ಗೊಬ್ಬರ ನಿರ್ವಹಣೆ ಕಾರ್ಯಗಾರ
ಉಡುಪಿ, ಅ.26: ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಜಿಪಂ ಉಡುಪಿ, ಬಿಡಿಟಿಸಿ, ಜಿಕೆವಿಕೆ, ಕರ್ನಾಟಕ ರಾಜ್ಯ ಬಯೋಗ್ಯಾಸ್ ಟರ್ನ್ ಕೀ ಟೆಕ್ನೆಶಿಯನ್ಸ್ ಅಸೋಸಿಯೇಶನ್ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಜೈವಾನಿಲ ಗೊಬ್ಬರ ನಿರ್ವಹಣೆಯ ಕಾರ್ಯಾ ಗಾರವನ್ನು ಅ.27ರಂದು ಬೆಳಗ್ಗೆ 10 ಗಂಟೆಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕ ಹಾಗೂ ಸರಕಾರದ ಪದನಿಮಿತ್ತ ಜಂಟಿ ಕಾರ್ಯಕ್ರಮ ಕೃಷ್ಣಪ್ಪ, ಬೆಂಗಳೂರು ಜಿಕೆವಿಕೆಯ ಕೃಷಿ ತಾಂತ್ರಿಕ ವಿಭಾಗದ ಪ್ರಾಯೋಜನೆ ಸಂಯೋಜಕ ಡಾ.ಬಿ. ಕುಮಾರ ಗೌಡ ಹಾಗೂ ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದ ನಿರ್ದೇಶಕ ಬಿ. ರಾಮಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಕಾರ್ಯಕ್ರಮದಲ್ಲಿ 2017-18ನೇ ಸಾಲಿಗೆ ಗೋಬರ್ ಅನಿಲ ಸ್ಥಾವರದ ಸಹಾಯಧನ ಹೆಚ್ಚುವರಿ ಆದ ಬಗ್ಗೆ ಮಾಹಿತಿ ಹಾಗೂ ಟರ್ನ್ ಕೀ ಏಜೆಂಟ್ ರಿಗೆ ಗುರುತು ಚೀಟಿ ವಿತರಿಸಲಾಗುವುದು. ಅಲ್ಲದೇ ಅಸೋಸಿಯೇಶನ್ನ ವೆಬ್ಸೈಟ್ಗೆ ಚಾಲನೆ ನೀಡಲಾಗುವುದು. ಇದರೊಂದಿಗೆ ಅಡುಗೆ ತ್ಯಾಜ್ಯದಿಂದ ಜೈವಾನಿಲ ಉತ್ಪತ್ತಿ ಮಾಡುವ ಶಕ್ತಿ ಸುರಭಿ ಮಾದರಿಯ ಜೈವಾನಿಲ ಘಟಕ ಗಳನ್ನು ರಾಷ್ಟ್ರೀಯ ಜೈವಾನಿಲ ಗೊಬ್ಬರ ನಿರ್ವಹಣೆ ಯೋಜನೆಯಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.