ಹೊಸಂಗಡಿ: ಅ.28ರಂದು ವಾಹನ ಪ್ರಚಾರ ಜಾಥಾಕ್ಕೆ ಚಾಲನೆ
ಮಂಜೇಶ್ವರ, ಅ.27: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನ.1ರಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯಾದ್ಯಂತ ಅಂಗಡಿಗಳನ್ನು ಬಂದ್ ಮಾಡಿ ತಿರುವನಂತಪುರದ ಸೆಕ್ರಟರಿಯೇಟ್ಗೆ ಜಾಥಾ ನಡೆಸಲಿದೆ.
ಇದರ ಪ್ರಚಾರಾರ್ಥ ನಡೆಯುವ ವಾಹನ ಪ್ರಚಾರ ಜಾಥಾದ ಉದ್ಘಾಟನೆ ಅ.28ರಂದು ಬೆಳಗ್ಗೆ 9:30ಕ್ಕೆ ಹೊಸಂಗಡಿಯಲ್ಲಿ ನಡೆಯಲಿದೆ ಸಮಿತಿಯ ಮಂಜೇಶ್ವರ ಘಟಕದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದ್ದಾರೆ.
ಕೇೀರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ರಾಜ್ಯಾಧ್ಯಕ್ಷ ಟಿ.ನಸೀರುದ್ದೀನ್ ನೇತೃತ್ವದಲ್ಲಿ ಜಾಥಾ ನಡೆಯಲಿದೆ. ಶಾಸಕ ಪಿ.ಬಿ.ಅಬ್ದುರ್ರಝಾಕ್ ಉದ್ಘಾಟಿಸುವರು ಎಂದವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಬಶೀರ್ ಕನಿಲ, ಹಮೀದ್ ಹೊಸಂಗಡಿ, ಹಸೈನಾರ್ ಉದ್ಯಾವರ, ದಯಾನಂದ ಬಂಗೇರ, ಸುದರ್ಶನ್, ಗಣೇಶ್ ಉಪಸ್ಥಿತರಿದ್ದರು.
Next Story