Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಆಫ್ರಿಕನ್ ಸಾಹಿತ್ಯ ವಾಚಿಕೆ

ಆಫ್ರಿಕನ್ ಸಾಹಿತ್ಯ ವಾಚಿಕೆ

ನಾನು ಓದಿದ ಪುಸ್ತಕ

ರಂಗನಾಥ ಕಂಟನಕುಂಟೆರಂಗನಾಥ ಕಂಟನಕುಂಟೆ28 Oct 2017 10:48 PM IST
share
ಆಫ್ರಿಕನ್ ಸಾಹಿತ್ಯ ವಾಚಿಕೆ

ಭಾರತೀಯರು ಆಧುನಿಕ ಸಂದರ್ಭದಲ್ಲಿ ಅತಿ ಹೆಚ್ಚು ಮುಖ ಮಾಡಿ ನೋಡಿರುವುದು ಅಮೆರಿಕ ಮತು ್ತಯುರೋಪಿನ ಕಡೆಗೆ. ಅದು ವಿಜ್ಞಾನ-ತಂತ್ರಜ್ಞಾನದ ವಿಚಾರಗಳಿರಬಹುದು. ರಾಜತಾಂತ್ರಿಕ ವಿಚಾರಗಳಿರಬಹುದು. ಸಾಹಿತ್ಯ ಚಿಂತನೆ, ವಿವಿಧ ಸಿದ್ದಾಂತಗಳು, ಭಾಷೆ, ಸಂಸ್ಕೃತಿ, ಅಭಿವೃದ್ಧಿ ಹೀಗೆ ಯಾವುದೇ ವಿಚಾರಗಳನ್ನು ಕಲಿಯಬೇಕಾದಾಗಲೂ ನಾವು ಎದುರು ನೋಡಿರುವುದು ಯೂರೋಪಿನ ಕಡೆಗೆ. ಅಂದರೆ ನಮ್ಮ ದೇಶವನ್ನು ನಿಯಂತ್ರಿಸುವ, ಉದಾರವಾದಿ ಆರ್ಥಿಕ ನೀತಿಗಳನ್ನು ವಿಶ್ವವ್ಯಾಪಾರ ಸಂಘಟನೆಯ ನೇತೃತ್ವದಲ್ಲಿ ಜಾರಿಗೊಳಿಸುತ್ತ ದೇಶವನ್ನು ದೋಚುವ ರಾಷ್ಟ್ರಗಳ ಕಡೆಗೆ ಮುಖ ಮಾಡಲಾಗಿದೆ. ಅದುಇಂದು ಮತ್ತಷ್ಟು ಹೆಚ್ಚಾಗಿದೆ. ಎಲ್ಲದಕ್ಕೂ ಅಮೆರಿಕದತ್ತ ಮುಖಮಾಡಿ ಅರೆಬೆತ್ತಲಾಗಿ ನಿಲ್ಲಲಾಗಿದೆ.

ಆದರೆ ನಮ್ಮದೇಶದ ಜನರಂತೆಯೇ ಅಮೆರಿಕ ಮತ್ತು ಯೂರೋಪಿನವರ ವಂಚನೆಗೆ ಲೂಟಿಗೆ ಬಲಿಯಾಗಿರುವ ಆಫ್ರಿಕಾ ಖಂಡದ ವಿವಿಧ ದೇಶಗಳ ಕಡೆ ಹೆಚ್ಚು ಮುಖ ಮಾಡಲೇ ಇಲ್ಲ. ಅಲ್ಲಿನ ಸಾಹಿತ್ಯ ಚಿಂತನೆಗಳಿಂದ ಕಲಿಯಲೂ ಇಲ್ಲ. ವಿಶೇಷವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಆಫ್ರಿಕಾ ಖಂಡದ ವಿವಿಧ ದೇಶಗಳು ನಡೆಸಿರುವ ವಸಾಹತುಶಾಹಿ ಮತ್ತು ನವ ವಸಾಹತುಶಾಹಿ ಹೋರಾಟ ಅದರ ಜೊತೆಗೆ ಹುಟ್ಟಿರುವ ಜನತೆಯ ಸಾಹಿತ್ಯದ ಕಡೆಗೆ ಹೆಚ್ಚು ಗಮನ ಹರಿಸಲೇ ಇಲ್ಲ. ನಮ್ಮ ದೇಶದಲ್ಲಿ ಹುಟ್ಟಿರುವ ಜನತೆಯ ಸಾಹಿತ್ಯದಂತೆ ಆಫ್ರಿಕಾದಲ್ಲಿಯೂ ಅತ್ಯಂತ ಸಂವೇದನಾಶೀಲ ಸಾಹಿತ್ಯ ಮೂಡಿ ಬಂದಿದೆ. ಇದರಿಂದ ನಾವು, ನಮ್ಮ ದೇಶದ ಜನತೆ, ಯಾವುದೇ ಸಂವೇದನಾಶೀಲರು ಸಾಕಷ್ಟು ಕಲಿಯಲಿಕ್ಕಿದೆ.

ಆದರೆ ಅದನ್ನು ಕಲಿಯಲು ಬೇಕಾದ ದಾರಿಗಳೇ ತೆರೆದಿಲ್ಲದಿರುವುದು ದುರಂತ. ಕೆಲವು ಪ್ರಯತ್ನಗಳು ಇದುವರೆಗೂ ಪ್ರಾಸಂಗಿಕವಾಗಿ ನಡೆದಿದ್ದರೂ ಅದು ವ್ಯಾಪ್ತಿಯನ್ನು ನಿರಂತರತೆಯನ್ನು ಕಾಪಾಡಿಕೊಳ್ಳದ ಕಾರಣ ಆಫ್ರಿಕಾದ ಸಂವೇದನೆ ಚಿಂತನೆಗಳು ನಮ್ಮ ನಾಡಿನ ಜನರ ಮನಸ್ಸನ್ನು ಯುರೋಪ್ ಪ್ರಭಾವಿಸಿದಂತೆ ಇಂದಿಗೂ ಪ್ರಭಾವಿಸಿಲ್ಲ. ಇದು ಬಹುದೊಡ್ಡ ಕೊರತೆ. ಇಂತಹ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಆಫ್ರಿಕಾ ಸಾಹಿತ್ಯ ವಾಚಿಕೆಯೊಂದನ್ನು ಸಿದ್ಧಪಡಿಸಿ ಇತ್ತೀಚೆಗೆ ಪ್ರಕಟಪಡಿಸಿದೆ. ಇದನ್ನು ನಟರಾಜ್ ಹುಳಿಯಾರ್, ಎಸ್. ಗಂಗಾಧರಯ್ಯ ಮತ್ತು ಕೇಶವ ಮಳಗಿ ಅವರು ಸಂಪಾದಿಸಿದ್ದಾರೆ.

ಆಫ್ರಿಕಾಖಂಡದ ವಿವಿಧ ಲೇಖಕರ ಕತೆಗಳು, ಕವಿತೆಗಳು, ನಾಟಕಗಳು, ಕಾದಂಬರಿಗಳು ಹಾಗೂ ಜನಪದಕತೆಗಳ ಆಯ್ದ ಭಾಗಗಳನ್ನು ಬೇರೆ ಬೇರೆ ಲೇಖಕರಿಂದ ಅನುವಾದಿಸಿ ಸೂಕ್ತ ಪ್ರಸ್ತಾವನೆ ಬರೆದು ಹೊರತಂದಿದ್ದಾರೆ. ಇಡೀ ವಾಚಿಕೆ ಆಫ್ರಿಕನ್ ಸಾಹಿತ್ಯದ ಮುಖ್ಯ ಸಂಗತಿಗಳನ್ನು ಸಂವೇದನೆಗಳನ್ನು ಒಳಗೊಂಡಿದ್ದು ಆಫ್ರಿಕನ್ ಸಾಹಿತಿಗಳು ಯೋಚಿಸುತ್ತಿರುವ ಮತ್ತು ನಡೆಸುತ್ತಿರುವ ಹೋರಾಟದ ಪರಿಚಯ ಮಾಡಿಕೊಡುತ್ತದೆ. ಇದು ಕನ್ನಡದ ಯಾವುದೇ ವರ್ಗದ, ತಲೆಮಾರಿನ ಅಂತರಗಳಿಲ್ಲದೆ ಎಲ್ಲರಿಗೂ ಉಪಯುಕ್ತವಾಗಿರುವ ಕೃತಿ.

ಇಂತಹ ಕೃತಿಯೊಂದು ಈಗಲಾದರೂ ಓದುಗರ ಮುಂದೆ ಬಂದಿರುವುದು ಮಹತ್ವದ ಸಂಗತಿ. ಇದರ ಮಹತ್ವವನ್ನು ಎಲ್ಲ ಕನ್ನಡ ಓದುಗರು ಪಡೆದುಕೊಳ್ಳಬೇಕು. ಅದರಲ್ಲಿ ಕುರಿ ಕಾಯುವ ಹುಡುಗಿಯೊಬ್ಬಳ ಆತ್ಮಕತೆಯ ಭಾಗ, ಮಕ್ಕಳನ್ನು ಅಪಹರಿಸಿ ಅವರನ್ನು ಸಂತೆಗಳಲ್ಲಿ ಮಾರಾಟ ಮಾಡುವಂತ ಪ್ರಕರಣಗಳ ಆತ್ಮಕತೆಗಳ ವಿವರಗಳೂ ಇವೆ. ಇಂತಹ ಭಾಗಗಳು ನಿಜಕ್ಕೂ ಮನಕಲಕುತ್ತವೆ. ಪಾಪಿ ರಾಜಎನ್ನುವಂತಹ ಒಂದು ಜನಪದ ಕತೆಯಿದೆ. ಇದು ಹಣ ಆಸ್ತಿ ಸಂಪತ್ತುಗಳು ಮನುಷ್ಯನನ್ನು ಮನುಷ್ಯತ್ವದಿಂದ ದೂರ ಮಾಡಿ ಕೊಂದಿರುವುದನ್ನು ವಿವರಿಸುತ್ತದೆೆ. ಇಂತಹ ಹತ್ತು ಹಲವು ಮತ್ತು ವೈವಿಧ್ಯಮಯ ಸಂಗತಿಗಳನ್ನು ಒಳಗೊಂಡಂತಹ ಸಾಹಿತ್ಯದ ಪಠ್ಯಭಾಗಗಳು ಇಲ್ಲಿವೆ. ಇವುಗಳ ಓದು ನಿಜಕ್ಕೂ ಓದುಗರ ಅರಿವಿನ ಪರಿಧಿಯನ್ನು ನಿರ್ವಿವಾದವಾಗಿ ಬೆಳೆಸುತ್ತವೆ. ಇದಕ್ಕೆ ಕಾರಣವಾದ ಎಲ್ಲರಿಗೂ ಕನ್ನಡಿಗರು ಋಣಿಯಾಗಿರಬೇಕು.

ಪುಸ್ತಕ: ಆಫ್ರಿಕನ್ ಸಾಹಿತ್ಯ ವಾಚಿಕೆ

ಸಂಪಾದಕರು: ನಟರಾಜ್ ಹುಳಿಯಾರ್, ಎಸ್ ಗಂಗಾಧರಯ್ಯ ಮತ್ತು ಕೇಶವ ಮಳಗಿ

ಪ್ರಕಟನೆ: 2017

ಪ್ರಕಾಶಕರು: ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಮಲ್ಲತ್ತಹಳ್ಳಿ, ಬೆಂಗಳೂರು-56

ಬೆಲೆ: 300 ರೂ.

share
ರಂಗನಾಥ ಕಂಟನಕುಂಟೆ
ರಂಗನಾಥ ಕಂಟನಕುಂಟೆ
Next Story
X