Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕೋಮುರಂ ಭೀಮು ವರ್ತಮಾನದ ಮುಖಾಮುಖಿ

ಕೋಮುರಂ ಭೀಮು ವರ್ತಮಾನದ ಮುಖಾಮುಖಿ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯ-ಕಾರುಣ್ಯ30 Oct 2017 12:17 AM IST
share
ಕೋಮುರಂ ಭೀಮು ವರ್ತಮಾನದ ಮುಖಾಮುಖಿ

ದೇಶದೊಳಗಿಂದು ಕಾಡು ಮತ್ತು ನಗರಗಳು ಮುಖಾಮುಖಿಯಾಗುತ್ತಿವೆ. ಅಭಿವೃದ್ಧಿ ಕಾಡಿನ ಸೂಕ್ಷ್ಮ ಬದುಕನ್ನು ಚೆಲ್ಲಾಪಿಲ್ಲಿಗೊಳಿಸುತ್ತಿವೆ. ಹಿಂಸೆ ಬೇರೆ ಬೇರೆ ಮುಖಗಳಲ್ಲಿ ಕಾಡನ್ನು ಸುತ್ತುವರಿದಿವೆ. ಈಶಾನ್ಯ ಭಾರತದಲ್ಲಿ ಈ ಘರ್ಷಣೆ ಉಗ್ರವಾದದ ಹುಟ್ಟಿಗೆ ಕಾರಣವಾಗಿದೆ. ಇಂತಹ ಹೊತ್ತಿನಲ್ಲಿ ಲಡಾಯಿ ಪ್ರಕಾಶನ ಗದಗ ಇವರು ‘ಕಾಡು ನಮ್ಮದು’ ಎಂದು ಹೋರಾಟದ ನಗಾರಿ ಬಾರಿಸಿದ ಕೋಮುರಂ ಭೀಮು ಕುರಿತಂತೆ ಕೃತಿಯನ್ನು ಹೊರತಂತಿದೆ. ವರವರರಾವು ತೆಲುಗಿನಲ್ಲಿ ಬರೆದಿರುವ ‘ಆದಿವಾಸಿ ಹೋರಾಟಗಾರ ಕೋಮುರಂ ಭೀಮು-ವರ್ತಮಾನದ ಮುಖಾಮುಖಿ’ ಕೃತಿಯನ್ನು ಬಿ. ಸುಜ್ಞಾನಮೂರ್ತಿಯವರು ಕನ್ನಡಕ್ಕೆ ಇಳಿಸಿದ್ದಾರೆ. ನಿಜಾಮನ ಸರಕಾರಕ್ಕೆ ಎದುರಾಗಿ, ತಮಗಿರುವ ಅತೀ ಕಡಿಮೆ ಸಂಪನ್ಮೂಲಗಳೊಡನೆ ರಾಜಿಯಿಲ್ಲದೆ ಹೋರಾಟ ಮಾಡಿದ, ಮುಗ್ಧರಾದ ಗೋಂಡಿ ಬುಡಕಟ್ಟಿನವರನ್ನು ಜಾಗೃತಿಗೊಳಿಸಿ ಯುದ್ಧ ಫಿರಂಗಿಗಳಾಗಿ ಪರಿವರ್ತಿಸಿದ, ಭೂಮಿ, ನೀರು, ಸಂಪನ್ಮೂಲಗಳಿಗಾಗಿ ನಡೆಸುವ ಹೋರಾಟ ಅಂತಿಮವಾಗಿ ರಾಜ್ಯಾಧಿಕಾರ ಹೋರಾಟವಾಗಿ ಹೇಗೆ ಬೆಳೆಯಬೇಕಾಗಿರುತ್ತದೆ ಎಂದು ಕೋಮುರಂ ಭೀಮು ಹೋರಾಟ ಚರಿತ್ರೆ ಹೇಳುತ್ತದೆ.

ಹಾಗೆ ನೋಡಿದರೆ ವರವರರಾವು ಅವರು ಇದನ್ನು ಪ್ರತ್ಯೇಕ ಲೇಖನವಾಗಿ ಬರೆದಿರುವುದಲ್ಲ. ‘ಕೋಮುರಂ ಭೀಮು’ ತೆಲುಗಿನ ಮಹತ್ವ ಪೂರ್ಣ ಜಾರಿತ್ರಿಕ ಕಾದಂಬರಿ. ಇದನ್ನು ಬರೆದವರು ಸಾಹು ಮತ್ತು ಅಲ್ಲಂ ರಾಜಯ್ಯ ಎಂಬ ಹೋರಾಟಗಾರರು. ಈ ಕಾದಂಬರಿಗೆ ವರವರರಾವು ಅವರು ಅಧ್ಯಯನ ಶೀಲ ಸುದೀರ್ಘ ಮುನ್ನುಡಿಯನ್ನು ಬರೆದಿದ್ದಾರೆ. ಕಾದಂಬರಿಯಾಚೆಗೆ ಆ ಮುನ್ನುಡಿ ಸ್ವತಂತ್ರ ಲೇಖನವಾಗಿಯೂ ಮುಂದೆ ಗುರುತಿಸಲ್ಪಟ್ಟಿತು. ಆ ಮುನ್ನುಡಿಯ ಅನುವಾದ ಇಲ್ಲಿದೆ. ಕೋಮುರ ಭೀಮು ಹೋರಾಟವನ್ನು ಇಟ್ಟುಕೊಂಡು, ವರ್ತಮಾನದ ಹೋರಾಟಗಳ ಸೋಲು ಗೆಲುವುಗಳನ್ನು ಲೇಖಕರು ವಿಶ್ಲೇಷಿಸುತ್ತಾರೆ. ವರ್ತಮಾನದಲ್ಲಿ ತಳಸ್ತರದ ಶೋಷಿತ ಜನರನ್ನು ಒಳಗೊಳ್ಳದ ಹೋರಾಟಗಳು ಹೇಗೆ ಬೇಗ ನೆಲಕಚ್ಚುತ್ತವೆ ಮತ್ತು ಈ ನಿಟ್ಟಿನಲ್ಲಿ ಕೋಮುರ ಭೀಮು ಹೋರಾಟದಿಂದ ನಾವು ಕಲಿಯಬೇಕಾದುದೇನು ಎನ್ನುವುದನ್ನು ಲೇಖಕರು ವಿವರಿಸುತ್ತಾರೆ.112 ಪುಟಗಳ ಈ ಕೃತಿಯ ಮುಖಬೆಲೆ80 ರೂಪಾಯಿ.

share
-ಕಾರುಣ್ಯ
-ಕಾರುಣ್ಯ
Next Story
X