ದ.ಕ. ಜಿಲ್ಲಾ ಎಸ್ ವೈ ಎಸ್ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು, ಅ. 30: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಇದರ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಮಹಾಸಭೆ ಸುನ್ನಿ ಜಂಯ್ಯತುಲ್ ಉಲಮಾ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದರ ದುಆದೊಂದಿಗೆ ಪ್ರಾರಂಭಗೊಂಡು ಜಿಲ್ಲಾಧ್ಯಕ್ಷ ಪಿ.ಎಂ ಉಸ್ಮಾನ್ ಸಅದಿ ಪಟ್ಟೋರಿ ಅಧ್ಯಕ್ಷತೆಯಲ್ಲಿ ಮಾಣಿ ದಾರುಲ್ ಇರ್ಶಾದ್ ನಲ್ಲಿ ನಡೆಯಿತು.
ಸಮಿತಿಯ ಚುನಾವಣೆಗೆ ಸಂಘದ ರಾಜ್ಯ ಉಪಾಧ್ಯಕ್ಷ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ನೇತೃತ್ವ ನೀಡಿದರು. ಈ ಸಂದರ್ಭ ರಾಜ್ಯ ಪ್ರ.ಕಾರ್ಯದರ್ಶಿ ಡಿ ಕೆ ಉಮರ್ ಸಖಾಫಿ,ಝೈನಿ ಕಾಮಿಲ್ ಸಖಾಫಿ, ತೋಕೆ ಕಾಮಿಲ್ ಸಖಾಫಿ, ಮಲ್ಲೂರು ಸಅದಿ, ಕೆ ಕೆ ಎಂ ಕಾಮಿಲ್ ಉಪಸ್ಥಿತರಿದ್ದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಪ್ ಕಿನಾರ ಮಂಗಳೂರು ಕೋಶಾಧಿಕಾರಿ ಯಾಗಿ ಹನೀಫ್ ಹಾಜಿ ಉಳ್ಳಾಲ, ಉಪಾಧ್ಯಕ್ಷರಾಗಿ ಎಂ ಎ ಸಿದ್ದೀಖ್ ಸಖಾಫಿ ಮೂಳೂರು, ಸಿ ಎಚ್ ಮುಹಮ್ಮದಾಲಿ ಸಖಾಫಿ ಅಶ್ಹರಿಯ್ಯ, ಅಬ್ದುಲ್ ಹಮೀದ್ ಬೀಜಕೊಚ್ಚಿ ಸುಳ್ಯ, ಕಾರ್ಯದರ್ಶಿಗಳಾಗಿ ಎನ್ ಎಸ್ ಉಮರ್ ಮಾಸ್ಟರ್, ಸಲೀಲ್ ಹಾಜಿ ಬಜ್ಪೆ, ಖಲೀಲ್ ಮುಸ್ಲಿಯಾರ್, ಸದಸ್ಯರುಗಳಾಗಿ ಎಸ್ ಎಂ ಕೋಯ ತಂಙಲ್ ಉಜಿರೆ, ಸೈಯದ್ ಅಬ್ದುಲ್ ಅಸ್ಸಾಂ ತಂಙಲ್ ಬೆಳ್ತಂಗಡಿ, ಹಂಝ ಮದನಿ ಮಿತ್ತೂರು, ಅಬೂಬಕ್ಕರ್ ಸಅದಿ ಮಜೂರು, ಖತ್ತರ್ ಬಾವ ಹಾಜಿ, ಕೆ ಈ ರಝ್ವಿ ಸಾಲೆತ್ತೂರು, ಖಾಸಿಂ ಪದ್ಮುಂಜೆ ಕುಪ್ಪೆಟ್ಟಿ, ಭಾವ ಫಕ್ರುದ್ದೀನ್ ಕೃಷ್ಣಾಪುರ, ಪಿ ಕೆ ಮುಹಮ್ಮದ್ ಮದನಿ ಕುಪ್ಪೆಟ್ಟಿ, ಎಂ ಎಚ್ ಅಬ್ದುಲ್ ಖಾದರ್ ಉಪ್ಪಿನಂಗಡಿ, ಮುತ್ತಲಿಬ್ ಹಾಜಿ ನಾರ್ಶ, ಎಂ ಇ ಅಬ್ದುರ್ರಝ್ಝಾಕ್ ಮದನಿ ಮಾಣಿ, ಅಬ್ದುಲ್ ಅಝೀಝ್ ಸಖಾಫಿ ಕೊಳ್ತಿಗೆ, ಅಬ್ದುಲ್ ಹಮೀದ್ ಸಖಾಫಿ ಕೊಡುಂಗೈ, ಹಾಜಿ ಅಬ್ದುರ್ರಝ್ಝಾಕ್ ಸಖಾಫಿ ಕುಪ್ಪೆಟ್ಟಿ, ಅಬ್ದುಲ್ಲ ಮುಸ್ಲಿಯಾರ್ ಪುತ್ತೂರು, ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಮುಹಮ್ಮದ್ ಅಶ್ರಫ್ ಹಾಜಿ ಬಳ್ಳಾರಿ, ಹಾಗು ಇತರರನ್ನು ಆರಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.





