Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಎಣ್ಣೆ ಬತ್ತಿದ ಲಾಟೀನಿನ

ಎಣ್ಣೆ ಬತ್ತಿದ ಲಾಟೀನಿನ ಬೆಳಕಿನಲ್ಲಿ....

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯ-ಕಾರುಣ್ಯ30 Oct 2017 6:45 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಎಣ್ಣೆ ಬತ್ತಿದ ಲಾಟೀನಿನ ಬೆಳಕಿನಲ್ಲಿ....

ಈಗಾಗಲೇ ತಮ್ಮ ಕತೆಗಳು ಮತ್ತು ಲೇಖನಗಳ ಮೂಲಕ ಗುರುತಿಸಿಕೊಂಡಿರುವ ಎ.ಕೆ. ಕುಕ್ಕಿಲ ಅವರ ಉಮ್ರಾ ಅನುಭವವನ್ನು ಹೇಳುವ ವಿಭಿನ್ನ ಕೃತಿ ‘‘ಎಣ್ಣೆ ಬತ್ತಿ ಲಾಟೀನು’’. ಉಮ್ರಾ-ಪ್ರವಾಸ ಮುಸ್ಲಿಮರ ಪಾಲಿಗೆ ಒಂದು ಧಾರ್ಮಿಕ ವಿಧಿಯಾಗಿದೆ. ಆದರೆ ಒಬ್ಬ ಸೃಜನಶೀಲ ಲೇಖಕನಿಗೆ ಅದು ಕೇವಲ ಒಂದು ಪ್ರವಾಸವಷ್ಟೇ ಅಲ್ಲ. ಹಾಗೆಯೇ ಅದು ಕೇವಲ ಧಾರ್ಮಿಕ ವಿಧಿಯೂ ಅಲ್ಲ. ಆತನಿಗೆ ಅದರಾಚೆಗೆ ನೋಡುವ ಹಲವು ಅವಕಾಶಗಳಿರುತ್ತವೆ. ಈ ಕಾರಣದಿಂದಲೇ ಕುಕ್ಕಿಲ ಅವರ ಕೃತಿ ಒಂದು ಆಧ್ಯಾತ್ಮಿಕ ಅನುಭವ ಮಾತ್ರವಲ್ಲ. ಈ ಕೃತಿ, ಇತಿಹಾಸ, ವರ್ತಮಾನವನ್ನು ಬೆಸೆಯುವ ಪ್ರಯತ್ನವನ್ನು ಮಾಡುತ್ತದೆಯಲ್ಲದೆ, ಆ ಮೂಲಕ ಮನುಷ್ಯ ತನ್ನ ಹೊಸ ಭವಿಷ್ಯವನ್ನು ರೂಪಿಸಿಕೊಳ್ಳುವ ಆಶಯವನ್ನು ಪ್ರಕಟಿಸುತ್ತದೆ. ಹಿರಿಯ ಲೇಖಕ ಬಿ. ಎಂ. ಹನೀಫ್ ಈ ಕುರಿತಂತೆ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ ‘‘ನನ್ನ ಪ್ರಕಾರ ಇದು ಕೇವಲ ಒಂದು ಪ್ರವಾಸ ಕಥನವಲ್ಲ. ಮಂಗಳೂರಿನಿಂದ ಮಕ್ಕಾದವರೆಗೆ ಹೋಗಿ ಬಂದ ನೀವು ಅಲ್ಲಿ ಹೆಜ್ಜೆ ಹೆಜ್ಜೆಗೂ ಇಸ್ಲಾಮಿನ ಹೆಜ್ಜೆ ಗುರುತುಗಳನ್ನು ವಿಶ್ಲೇಷಿಸಿದ ಅತ್ಯಪೂರ್ವ ವೈಚಾರಿಕ ಓದು ಇದು. ಇಸ್ಲಾಮಿ ಇತಿಹಾಸದ ತಳಸ್ಪರ್ಶಿ ಓದಿನ ಹಿನ್ನೆಲೆ ಇದ್ದುದರಿಂದಲೇ ಈ ಓದಿಗೆ ಭಾವುಕ ಸ್ಪರ್ಶದ ಜೊತೆಗೆ ಒಂದು ವೈಚಾರಿಕ ಗಾಂಭೀರ್ಯವೂ ದಕ್ಕಿದೆ. ಒಂದು ಅಪರಿಚಿತ ಸ್ಥಳವನ್ನು ನೋಡುತ್ತಾ ಅಕ್ಷರಗಳಲ್ಲಿ ಅದು ಜೀವಂತವಾಗುವಂತೆ ವಿವರಿಸುವುದು ಬೇರೆ, ಸಮಕಾಲೀನ ಸಂದರ್ಭದ ಎಚ್ಚರವನ್ನು ಇಟ್ಟುಕೊಂಡು, ಇತಿಹಾಸದ ಪಳೆಯುಳಿಕೆಗಳನ್ನು ಸ್ಪರ್ಶಿಸಿ ಓದುಗರ ದರ್ಶನಕ್ಕೆ ದಕ್ಕಿಸುವುದೇ ಬೇರೆ. ನಿಮ್ಮದು ಎರಡನೆಯ ಕ್ರಮದ ಬರವಣಿಗೆ. ಅದು ಪುಸ್ತಕದ ಉದ್ದಕ್ಕೂ ಕಣ್ಣಿಗೆ ಕಟ್ಟುವಂತಿದೆ. ನಿಜಕ್ಕೂ ಅಂತಃಕರಣವುಳ್ಳ, ಕವಿ ಹೃದಯದ ಲೇಖಕನೊಬ್ಬ ಮಾತ್ರ ಹೀಗೆ ಇತಿಹಾಸ ಮತ್ತು ವರ್ತಮಾನದ ಮಧ್ಯೆಯ ಬಿಂದುವಿನಲ್ಲಿ ನಿಂತುಕೊಂಡು ಖಚಿತವಾಗಿ ಯೋಚಿಸಬಲ್ಲ’’
ಕೇವಲ ಧಾರ್ಮಿಕ ವ್ಯಕ್ತಿಯಾಗಿ ಕುಕ್ಕಿಲ ಈ ಕೃತಿಯನ್ನು ಬರೆದಿದ್ದರೆ ಅದು ಮುಸ್ಲಿಮರಿಗಷ್ಟೇ ಸೀಮಿತವಾಗುತ್ತಿತ್ತೇನೋ. ಆದರೆ ಈ ಕೃತಿ ಅಂತಹ ಗೆರೆಗಳನ್ನು ದಾಟಿ, ಎಲ್ಲ ಪ್ರವಾಸಿಗರಿಗೂ, ಎಲ್ಲ ಅಧ್ಯಾತ್ಮ ದರ್ಶಕರಿಗೂ ಅನ್ವಯವಾಗುತ್ತದೆ. ಉಮ್ರಾ, ಹಜ್‌ನಂತಹ ಸಂಗತಿಗಳು ಇಂದಿಗೂ ಮುಸ್ಲಿಮೇತರರಿಗೆ ನಿಗೂಢ ಮತ್ತು ಅನ್ಯ ವಿಷಯವಾಗಿರುವ ಈ ಸಂದರ್ಭದಲ್ಲಿ ಈ ಕೃತಿ ಇಸ್ಲಾಮ್ ಧರ್ಮದ ಕುರಿತಂತೆ ಅವರಲ್ಲಿ ಹೆಚ್ಚು ಆಸಕ್ತಿಯನ್ನು ಹುಟ್ಟಿಸಬಹುದು. ಒಟ್ಟು 15 ಅಧ್ಯಾಯಗಳನ್ನೊಳಗೊಂಡ ಈ ಕೃತಿ, ಉಮ್ರಾ ಯಾತ್ರೆಯ ತಯಾರಿ, ಪ್ರಯಾಣದ ಪ್ರಕ್ರಿಯೆಗಳು, ನೆರವೇರಿಸಬೇಕಾದ ಧಾರ್ಮಿಕ ಕ್ರಿಯೆಗಳು, ಅದರ ಹಿಂದಿರುವ ಉದ್ದೇಶ, ಅದು ನಮ್ಮಿಳಗೆ ಮಾಡುವ ಪರಿವರ್ತನೆ, ಇಸ್ಲಾಮಿನ ಇತಿಹಾಸ, ಸ್ಥಳವಿವರಣೆ, ಅಂದು ಮತ್ತು ಇಂದಿನ ನಡುವಿನ ವ್ಯತ್ಯಾಸ ಇವೆಲ್ಲವುಗಳನ್ನು ಸಂಕ್ಷಿಪ್ತವಾಗಿ ಕಥನ ರೂಪದಲ್ಲಿ ಲೇಖಕರು ತೆರೆದಿಟ್ಟಿದ್ದಾರೆ. ಓದು ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 112. ಕೃತಿಯ ಮುಖಬೆಲೆ 130. ಆಸಕ್ತರು 98800 96128 ದೂರವಾಣಿಯನ್ನು ಸಂಪರ್ಕಿಸಬಹುದು. 

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯ
-ಕಾರುಣ್ಯ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X