Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ
  4. ಫೈಝ್ ಅಹ್ಮದ್ ಫೈಝ್ ಅವರ ಜನಪ್ರಿಯ...

ಫೈಝ್ ಅಹ್ಮದ್ ಫೈಝ್ ಅವರ ಜನಪ್ರಿಯ ಗಝಲ್‌ಗಳಿಂದ ಆಯ್ದ ಕೆಲವು ದ್ವಿಪದಿಗಳು

ಸಾದಿಕ್ ಪುತ್ತಿಗೆಸಾದಿಕ್ ಪುತ್ತಿಗೆ3 Nov 2017 6:58 PM IST
share
ಫೈಝ್ ಅಹ್ಮದ್ ಫೈಝ್ ಅವರ ಜನಪ್ರಿಯ ಗಝಲ್‌ಗಳಿಂದ ಆಯ್ದ ಕೆಲವು ದ್ವಿಪದಿಗಳು

ಆಯೇ ತೊ ಯೂನ್ ಕೆ ಜೈಸೇ ಹಮೇಶಾ ಥೇ ಮೆಹರ್ಬಾನ್
ಭೂಲೇ ತೊ ಯೂನ್ ಕೆ ಗೋಯಾ ಕಭೀ ಆಶ್ನಾ ನ ಥೇ
ಅವರು ಬಂದ ವೈಖರಿ ನೋಡಿದರೆ ಅವರೇ ಸದಾ ನಮ್ಮ ಪೋಷಕರಾಗಿದ್ದರೋ ಎಂಬಂತಿತ್ತು
ಅವರು ಮರೆತು ಬಿಟ್ಟದ್ದು ನೋಡಿದರೆ ಅವರಿಗೆಂದೂ ನಮ್ಮ ಪರಿಚಯವೇ ಇರಲಿಲ್ಲವೋ ಎಂಬಂತಿತ್ತು.

ದಿಲ್ ನಾ ಉಮ್ಮೀದ್ ತೊ ನಹೀಂ, ನಾಕಾಮ್ ಹೀ ತೊ ಹೈ
ಲಂಬೀ ಹಯ್ ಘಮ್ ಕೀ ಶಾಮ್, ಮಗರ್ ಶಾಮ್ ಹೀ ತೊ ಹೈ
ಮನಸ್ಸು ನಿರಾಶವಾಗಿಲ್ಲ, ಅದು ಕೇವಲ ಸೋತಿದೆಯಷ್ಟೇ
ದುಃಖದ ಇರುಳು ಬಹಳ ದೀರ್ಘವಾಗಿದೆ, ಆದರೆ ಅದು ಕೇವಲ ಇರುಳೆ ತಾನೇ?

ಓ ಬಾತ್, ಸಾರೆ ಪಸಾನೇ ಮೇ ಜಿಸ್ ಕಾ ಝಿಕ್ರ್ ನಹೀ
ವೊ ಬಾತ್ ಉನ್ಕೋ ಬಹುತ್ ನಾಗವಾರ್ ಗುಝರೀ ಹಾಯ್
ಸಂಪೂರ್ಣ ಕಾದಂಬರಿಯಲ್ಲಿ ಯಾವ ವಿಷಯದ ಪ್ರಸ್ತಾಪವೇ ಇದ್ದಿಲ್ಲವೊ
ಅದೇ ವಿಷಯವು ಅವರಿಗೆ ಬಹಳ ತುಂಬಾ ಅಪ್ರಿಯವೆನಿಸಿ ಬಿಟ್ಟಿದೆ.

ಅಬ್ ಜೋ ಕೋಯೀ ಪೂಚೆ ಭೀ ತೊ ಉಸ್ ಸೇ ಕ್ಯಾ ಶರಹೆ ಹಾಲಾತ್ ಕರೇನ್?
ದಿಲ್ ಟೆಹರೆ ತೊ ದರ್ದ್ ಸುನಾಯೇಂ, ದರ್ದ್ ಥಮೇ ತೊ ಬಾತ್ ಕರೇನ್?
ಈಗ ಯಾರಾದರೂ ವಿಚಾರಿಸಿದರೂ, ನಾವು ಅವರೊಡನೆ, ಪರಿಸ್ಥಿತಿಯನ್ನು ಏನೆಂದು ವಿವರಿಸೋಣ?
ಮನಸ್ಸಿಗೆ ಒಂದಿಷ್ಟು ವಿರಾಮ ದೊರೆತರೆ ನೋವನ್ನು ತಿಳಿಸಬಹುದಿತ್ತು, ನೋವು ಒಂದಿಷ್ಟು ನಿಂತಿದ್ದರೆ ಮಾತನಾಡಬಹುದಿತ್ತು.

ಶಾಮ್ ಹುಯೀ ಫಿರ್ ಜೋಶೆ ಖರಝಾ ನೇ ಬಜಮೆ ಹರೀಪಾನ್ ರೋಷನ್ ಕೀ
ಘರ್ ಕೋ ಆಗ್ ಲಗಾಯೆನ್, ಹಮ್ ಭೀ ರೋಷನ್ ಅಪ್‌ನೀ ರಾತ್ ಕರೇನ್
ಸಂಜೆಯಾಯಿತು, ವಿಧಿಯ ಆವೇಶವು ಮತ್ತೆ ವಿರೋಧಿಗಳ ನೆಲೆಯನ್ನು ಬೆಳಗಿ ಬಿಟ್ಟಿದೆ
ಬನ್ನಿ ನಾವೂ ಮನೆಗೆ ಕಿಚ್ಚು ಹಚ್ಚೋಣ, ನಮ್ಮ ಇರುಳನ್ನು ಬೆಳಗೋಣ.

ಖತ್ಲೆ ದಿಲ್ ಒ ಜಾನ್ ಆಪ್‌ನೇ ಸರ್ ಹೇ, ಅಪ್ನಾ ಲಹೂ ಅಪ್‌ನೀ ಗರ್ದನ್ ಪೇ
ಮೊಹರ್ ಬ ಲಬ್ ಬೈಠೇ ಹೈನ್, ಕಿಸ್ ಕಿಸ್ ಕಾ ಶಿಕ್ವಾ ಕಿಸ್ ಕೇ ಸಾಥ್ ಕರೇನ್?
ಮನಸ್ಸು ಜೀವಗಳ ಹತ್ಯೆಯ ಆರೋಪ ನಮ್ಮ ಮೇಲಿದೆ, ನಮ್ಮದೇ ಹತ್ಯೆಯ ಆರೋಪವು ನಮ್ಮ ಮೇಲಿದೆ,
ಬಾಯಿಗೆ ಬೀಗ ಜಡಿದು ಕೂತಿದ್ದೇವೆ, ಯಾರ ಬಳಿ ಯಾರನ್ನು ದೂರೋಣ?

ಹಿಜ್ರ್ ಮೇ ಶಬ್ ಭರ್ ದರ್ದ್ ಒ ತಲಬ್ ಕೆ ಚಾಂದ್ ಸಿತಾರೇ ಸಾಥ್ ರಹೇ
ಸುಬಹ್ ಕೀ ವೇರಾನೀ ಮೇ ಯಾರೋ, ಕೈಸೇ ಬಸರ್ ಔಖಾತ್ ಕರೇನ್?
ವಿರಹದಲ್ಲಿ ಇರುಳೆಲ್ಲಾ, ನೋವು, ನಿವೇದನೆಗಳೆಂಬ ಚಂದ್ರ, ತಾರೆಗಳು ಜೊತೆಗಿದ್ದವು,
ಇದೀಗ ನಿರ್ಜನ ಬೆಳಕಿನಲ್ಲಿ ಮಿತ್ರರೇ, ಬದುಕನ್ನು ಹೇಗೆಂದು ಸಾಗಿಸೋಣ?

ದರ್ದ್ ಇತ್ನಾ ಹೈ ಕೆ ಹರ್ ರಗ್ ಮೇ ಹೈ ಮೆಹ್ಷರ್ ಬರ್ಪಾ
ಔರ್ ಸುಖ್ ಏಸಾ ಕೆ ಮರ್ ಜಾನೇಕೋ ಜೀ ಚಾಹತಾ ಹೈ
ನೋವು ಎಷ್ಟಿದೆಯೆಂದರೆ ನರನರದಲ್ಲೂ ಪ್ರಳಯವು ಮೆರೆೆದಿದೆ,
ಸುಖ ಹೇಗಿದೆಯೆಂದರೆ, ಸತ್ತು ಹೋಗಲು ಮನವು ತುಡಿಯುತ್ತಿದೆ.

share
ಸಾದಿಕ್ ಪುತ್ತಿಗೆ
ಸಾದಿಕ್ ಪುತ್ತಿಗೆ
Next Story
X