Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ
  4. ಒಲಿದ ಸ್ವರಗಳು

ಒಲಿದ ಸ್ವರಗಳು

ಡಾ. ಕೆ. ಶರೀಫಾಡಾ. ಕೆ. ಶರೀಫಾ4 Nov 2017 11:56 AM IST
share
ಒಲಿದ ಸ್ವರಗಳು

ನೆತ್ತರ ಮಳೆ

ಇಟ್ಟಿಗೆ, ಕಲ್ಲುಗಳು ನಿರಪರಾಧಿಗಳು
ರಾಮನ ಹೆಸರು ಎಲ್ಲಿ ಕೆತ್ತಿದರೇನು?
ರಾಮ ಅಕ್ರಮಣಕಾರಿಯಾಗಲಾರ.
ಲೋಕದಲ್ಲಿ ಎಂದಾದರೂ ಅಲ್ಲಾಹನೂ
ಹಿಂದುಗಳ ಮನೆ ಸುಟ್ಟಿರುವನೇ?.

ಜಗತ್ತಿನಲ್ಲಿ ರಾಮ ಎಂದಾದರೂ
ಮುಸ್ಲಿಮರ ಗುಡಿಸಲಿಗೆ ಬೆಂಕಿ ಇಟ್ಟಿರುವನೇ?
ಅವರೆಂದಿಗೂ ದ್ವೇಷದ ಮಾತನಾಡಿರುವುದಿಲ್ಲ.
ಇವರೇಕೆ ಕಾದ ಹಂಚಿನ ನೀರ ಹನಿಗಳು?

ಅವರ ಕರಕಲಾದ ಅಂಗಡಿಯಿಂದ
ದಟ್ಟ ಹೊಗೆ ಈಗಲೂ ಬರುತ್ತಿದೆ ನೋಡು
ಹುಡುಕಿ ಹೊರಗೆಳೆದು ಕೊಚ್ಚಿ ಹಾಕಿದ
ಅವರ ರುಂಡಗಳು ವಿಲವಿಲ ಒದ್ದಾಡಿ
ರಕ್ತದ ಮಡುವಿನಲಿ ಬಿದ್ದಿವೆ ನೋಡು.

ದಂಡೆಗೆ ತೇಲಿ ಬರುತ್ತಿರುವ
ಮನುಜರ ರುಂಡವಿಲ್ಲದ ದೇಹಗಳು.
ದೇಹವಿಲ್ಲದ ಬರೀ ರುಂಡಗಳು
ಭಯ ಹುಟ್ಟಿಸುತ್ತಿವೆ.
ಮಸೀದಿ ಉರುಳಿದ ಸಮಯ
ನೆತ್ತರ ಕಣ್ಣೀರು ಹರಿಯುತ್ತಿವೆ.

ಗಲಭೆ ಪೀಡಿತ ಅವರು ಭಯಂಕರ
ರಕ್ತ ಪಿಪಾಸುಗಳಾಗಿದ್ದರು.
ಬೀಭತ್ಸ ರುದ್ರ ನರ್ತನವಿತ್ತು.
ಸಾವಿನ ತಲ್ಲಣದ ಕ್ಷಣಗಳಲ್ಲಿ
ಕಣ್ಣು ಗಾಜಿನ ಗೋಲಿಯಾಗಿತ್ತು.
ನಡೆದ ಎಲ್ಲದಕ್ಕೂ ಸಾಕ್ಷಿಯಾಗಿತ್ತು.

ಗದ್ದುಗೆಯಲ್ಲಿ ಕುಳಿತ ಅವರು
ಕೋಮುವಾದೀ ಕೊಳ್ಳಿ ದೆವ್ವಗಳು
ಲೆಕ್ಕ ಹಾಕುತ್ತಿದ್ದರು,ಈ ಸಲ
ಭಾರೀ ನೆತ್ತರ ಮಳೆ ಸುರಿದಿದೆ,
ಉತ್ತಮ ಪಸಲು ಬರಬಹುದು.

*****************************

ನಿಮಗೆ ಶೋಭಿಸದು

ಮನುಷ್ಯರ ಮನುಷ್ಯರ ನಡುವೆ
ಜಾತಿಯ ವಿಷ ಬೀಜ
ಬಿತ್ತಿದವರು ನೀವು
ಜಾತ್ಯತೀತತೆಯ ಮಾತು
ನಿಮಗೆ ಶೋಭಿಸದು ಬಿಡಿ.

ಸಮಾನತೆಯ ಮಾತು ಬೇಡನಿಮಗೆ ಇಷ್ಟವಾಗುವುದಿಲ್ಲ
ಹಿಟ್ಲರನ ಸಂತತಿ ಅಧಿಕಾರಿಶಾಹಿಗೆ
ಪ್ರಜಾಪರತೆಯ ಮಾತು ಬಿಡಿ
ಅದು ನಿಮಗೆ ಶೋಭಿಸದು.

ಗುಡಿಸಲ ಬಡವರವರು ನಾವು
ತಳ್ಳು ಬಂಡಿಯ ವ್ಯಾಪಾರಿಗಳು
ಗಲಭೆಗಳಾದಾಗ ನಾವು ಮೊದಲ ಬಲಿಗಳು
ಸೌಹಾರ್ದದ ಮಾತು ಬಿಡಿ
ಅದು ನಿಮಗೆ ಶೋಭಿಸದು.

ನಿಮ್ಮ ಸಬ್ ಕಾ ವಿಕಾಸ್‌ನಲ್ಲಿ
ಮನ್ ಕಿ ಬಾತ್ ಹೇಳುತ್ತೀರಿ.
ನಿಮ್ಮ ಸ್ಮಾರ್ಟ್ ಸಿಟಿಯಲ್ಲಿ
ನಮಗೆಲ್ಲಿದೆ ಜಾಗ?
ಬರೀ ಭರವಸೆಗಳು ಬಿಡಿ
ಅದು ನಿಮಗೆ ಶೋಭಿಸದು.

ಗಾಂಧೀ ಕೈಗೆ ಕಸಬರಿಕೆ ಕೊಟ್ಟಿದ್ದೀರಿ
ಅವನ ಕನ್ನಡಕ ಭಾರತ ಸ್ವಚ್ಛಗೊಳಿಸಲು
ನಿಮ್ಮ ಹತ್ತು ಲಕ್ಷದ ಹೊನ್ನಿನ ಸೂಟಿದೆಯಲ್ಲನನ್ನ ಹರಕು ಸೀರೆಯ ಮಾತು ಬಿಡಿ
ಅದು ನಿಮಗೆ ಶೋಭಿಸದು .

ದೇಶ ಬಲಿ ಕೇಳಿದಾಗಲೆಲ್ಲ
ನನ್ನ ಕತ್ತನ್ನೇ ಮೊದಲು ಕೊಟ್ಟೆ
ಓಟಿನ ಬೇಟದಲಿ ನೀವು
ಸೌಹಾರ್ದದ ಬದುಕಿಗೆ ಬೆಂಕಿಯಿಟ್ಟವರು
ದೇಶಭಕ್ತಿಯ ಮಾತು ಬಿಡಿ
ಅದು ನಿಮಗೆ ಶೋಭಿಸದು .


*****************************

ಆಲದ ಆತ್ಮಬಲ

ಎಂತಹ ಆತ್ಮಬಲ ಆ ಆಲದ ಮರದ್ದು
ಕಲ್ಲು ಬಂಡೆಗಳಲ್ಲಿ ನೂಲಿನೆಳೆಯ ಬೇರು ತುರುಕಿ
ಬಂಡೆ ಸೀಳಿ ಹೊರ ಬರುವ ಅದರ ಆತ್ಮಬಲಕ್ಕೇನೆನ್ನಲಿ?
ಬಿಸಿಲಿಗೆ ಬಾಡುತ್ತಾ, ಚಳಿಗೆ ಉದುರುತ್ತಾ,
ಮತ್ತೆ ಚಿಗುರುವ ಆತ್ಮಶಕ್ತಿಗೇನೆನ್ನಲಿ ?

ಕೊರಡು ಕೊನರುವುದು ಬರಡು ಹಯನಹುದು
ಗರಗಸದಿ ಕೊರೆದ ಮರ ತುಂಡು ತುಂಡಾಗಿ
ನೆಲಕ್ಕೆ ಬಿದ್ದರೂ ಚಿಗುರುವ ಛಲದ ಪರಿ
ದಾರದೆಳೆಯ ಬೇರಿಗೆ ಬಂಡೆ ಸೀಳುವ ಕಸುವು
ಸಾವಿನಂಚಿನಿಂದ ಹೊರಬರುವ ಅಂತ:ಶಕ್ತಿ.
ಭೂಡ್ಡೆಗೆ ಬಂಡೆಯಾಸರೆಯಾಗುವ ಬಂಧುತ್ವ
ಧಾರಣಶಕ್ತಿಗೇನೆನ್ನಲಿ?

ಗಚ್ಚು, ಗಾರೆ, ಗಟ್ಟಿ ಅಡಿಪಾಯಗಳ ಸೀಳಿ
ಹೊರಬರುವ ಬೇರಿನ ಧ್ಯಾನಸ್ಥ್ ಮನಸ್ಸು
ಏಕಾಗ್ರ ನೆಲೆಯಲ್ಲಿ ಒಂದುಗೂಡಿದ ಶಕ್ತಿ ,
ಅಸಾಧ್ಯವನು ಸಾಧ್ಯವಾಗಿಸುವ ಛಲ.
ನೀರು - ಬೆಂಕಿಯ ತಾಣ,
ಬಂಡೆ- ಆಲದ ಜೀವಕೋಶ
ಅನುದಿದ ಬಡಿದಾಟ
ಬದುಕು ಕಲಿಸಿತ್ತು ಹೋರಾಟ.

*****************************

ಅರ್ಥವಿಲ್ಲದ ಯುದ್ಧಗಳು

ಯುದ್ಧಗಳು ಬೂದಿ ಸೃಷ್ಟಿಸುತ್ತವೆ ಅನ್ನವನ್ನಲ್ಲ
ಯುದ್ಧಗಳಿಗೆ ಸಾಯಿಸುವ ಶಕ್ತಿಯಿದೆ ಜೀವ ಸೃಷ್ಟಿಸುವುದಿಲ್ಲ.
ಭಾರತ ಪಾಕಿಸ್ತಾನ ಒಡೆದ ಕನ್ನಡಿ
ಶಾಂತಿ ಬಯಸುವ ಮಗುವೇ
ನಿನಗೇನು ಗೊತ್ತು ಆಳುವವರ ಮರ್ಮ
ಇದು ರಾಜಕೀಯ ಆಟ.

ಕಾರ್ಗಿಲ್ ದೇಶಭಕ್ತಿಯ ಕದನದಂಗಳದಿಂದ
ನಿನ್ನಪ್ಪನ ಶವಪೆಟ್ಟಿಗೆ ಬರುತ್ತದೆ ಮೆಹರ್?
ಸೈನಿಕರ ಶವ ಪೆಟ್ಟಿಗೆಗಳಲ್ಲಿರುವುದು
ಬಡ ತಾಯಿಯ ಮಕ್ಕಳ ಶವಗಳಲ್ಲವೇ ಮಗು?

ಆ ಶವ ಪೆಟ್ಟಿಗೆಯಲ್ಲಿ ಇನ್ನೇನಿರಲು ಸಾಧ್ಯ ಹೇಳು?
ಎರಡು ದೇಶಗಳ ನೆಮ್ಮದಿಗೆ ಕೊಳ್ಳಿಯಿಟ್ಟ ರಾಜಕಾರಣಿಗಳ
ಶವಗಳಿರುವುದಿಲ್ಲ ಗುರ್‌ಮೆಹರ್ ಕೌರ್?
ಅಲ್ಲಿರುವುು ದೇಶಪ್ರೇಮದ ಚಾದರ ಹೊದ್ದ
ಬಡ ತಾಯಿಯ ಮಕ್ಕಳ ಶವಗಳು.

ತಂದೆ, ಮಗ, ಪತಿ, ಸೋದರರ ಕಳೆದುಕೊಂಡ
ಹೆಣ್ಣೊಡಲ ಸಂಕಟಗಳ
ಈ ರಾಜಕಾರಣಿಗಳೆತ್ತ ಬಲ್ಲರು?
ಅವರುಗಳ ಮನೆಮಗನ ಶವಪೆಟ್ಟಿಗೆ ಬರಲೇ ಇಲ್ಲ
ಕಳೆದುಕೊಂಡವರ ನೋವು ಇವರೆತ್ತ ಬಲ್ಲರು ಮಗು?

ಯುದ್ಧಗಳ ವಿರುದ್ಧ ಶಾಂತಿ ಜಪಿಸುವ ಮಗುವೆ
ಬಾಲ್ಯದಲ್ಲೇ ತಂದೆಯ ಕಳಕೊಂಡ ಅನಾಥೆಯೇ
ಯುದ್ಧವಾಗದಿರಲೆಂದು ಪ್ರಾರ್ಥಿಸುವೆಯಾ ಕಂದ?
ನಿನ್ನ ಹೊಟ್ಟೆಯ ಸಂಕಟ ಇವರೆತ್ತ ಬಲ್ಲರು ಹೇಳು?

ವಿಶ್ವಶಾಂತಿಯ ಭಾವುಟ ಕೈಯಲ್ಲಿ ಹಿಡಿದು
ಛಿದ್ರವಾದ ನೆಲದ ತುಂಡುಗಳ ಜೋಡಿಸಲು
ವಿಂಗಡಿಸುವ ಗಡಿಗಳ ಕಿತ್ತು ಹಾಕಲು
ಯುದ್ಧವಿಲ್ಲದ ನಾಡ ಕಟ್ಟಲು ಹೊರಟ ಮಗಳೇ

ಇಂದಲ್ಲ ನಾಳೆ ಗಡಿಗಳ ನಿರರ್ಥಕತೆ
ಲೋಕಕ್ಕೆ ತಿಳಿಯುತ್ತದೆ.
ಆಗ ಬಂದೂಕಿನಲ್ಲಿ ಗುಬ್ಬಿಗೂಡು ಕಟ್ಟುತ್ತವೆ
ಹುಸಿ ದೇಶಪ್ರೇವುದ ಮಾತುಗಳನ್ನುದುರಿಸುವವರ
ಮನೆಗೂ ಅವರ ಮಗನ ಶವಪಟ್ಟಿಗೆ ಬರಲೇಬೇಕೇ?

‘‘ನನ್ನ ತಂದೆಯನ್ನು ಪಾಕಿಸ್ತಾನ ಕೊಂದಿಲ್ಲ
ತಂದೆಯ ಕೊಂದಿದ್ದು ಯುದ್ಧಗಳು‘‘ ಎನ್ನುತ್ತಿ ಮಗಳೇ
ಗಡಿಗಳ ಎರಡೂ ಬದಿಯ ಜನರು ಸತ್ತಿದ್ದಾರೆ
ಎರಡು ವರ್ಷದ ಹಸುಗೂಸಾದ ನಿನ್ನನ್ನಗಲಿ
ಯುದ್ಧದಾಹಕ್ಕೆ ಬಲಿಯಾದವ ನಿನ್ನಪ್ಪ ಮಗಳೇ.

ಪ್ರತಿದಿನ ಅಪ್ಪನ ಸಾವಿನ ನೆಪು ಕಾಡುತ್ತಿದೆಯೇ
ಎರಡು ದೇಶಗಳ ಜನ ಬಯಸುತ್ತಾರೆ
ಶಾಂತಿ ಮಂತ್ರವನ್ನೇ ಹೊರತು ಯುದ್ಧಗಳಲ್ಲ
ನಿನ್ನ ಮಾನವೀಯ ಕಳಕಳಿಗೆ ದೇಶದ್ರೋಹವೆನ್ನುವ
ಇವರು ಹಿಟ್ಲರನ ಸಂತತಿಯವರು.

(1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾದ ಕ್ಯಾಪ್ಟನ್ ಮನ್‌ದೀಪ್ ಸಿಂಹ್‌ರ ಮಗಳು ಗುರ್‌ಮೆಹರ್ ಕೌರ್ 20 ವರ್ಷದ ತರುಣಿ. ದಿಲ್ಲಿ ವಿವಿ ಲೇಡಿ ಶ್ರೀರಾಂ ಕಾಲೇಜಿನ ವಿದ್ಯಾರ್ಥಿನಿ)

*****************************

ಗೌರಿಯರು

ತಲೆಗೆ ಗುಂಡಿಟ್ಟರೇನು
ಮಿದುಳು ಮಾತಾಡುತ್ತದೆ
ಒಬ್ಬ ಗೌರಿ
ಜಗವೆಲ್ಲ ಗೌರಿಯಾದ ಸೋಜಿಗ!
ಅನ್ಯಾಯಕೆ ಕೊನೆ ಎಂದು?

ನ್ಯಾಯ ಕಟಕಟೆಯ ಮುಂದೆ
‘.....ಬೇಟಿ ಬಚಾವೋ’ ದನಿ
ಗುಂಡುಗಳ ಚೆಂಡುಗಳಾಗಿ ಆಡಲು
ಪುಸ್ತಕದ ಬೇಟಿಯರ ರಣ ದಂಡು
ಬಿಗಿದ ಮುಷ್ಟಿಗಳ ಎತ್ತಿ.

ನವ ಹಿಟ್ಲರನ ಮಾತಿನ ಮಾರ್ಕೆಟ್ಟಿನಲಿ
ಜೀವ ಬಲು ಅಗ್ಗ!
ಮಗಳು ಓದಿ ವಿಚಾರವಾದಿಯಾದರೆ
‘ಬೇಟಿಕೋ ಗೋಲಿಸೆ ಉಢಾದೋ’
ವಿಚಾರಗಳ ಎದುರಿಸಲಾಗದ
ಹೇಡಿ ಹಿಟ್ಲರನ ಸಂತತಿ
ಸಾವು ಸಂಭ್ರಮಿಸುವ ನವೋದ್ಯಮ.

ಢಂ.ಢಂ ಫ್ರೀಡಂ ಇದು ಹಿಟ್ಲರನ ವಾಕ್ಯ
ಗೌರಿಯನು ಕೊಂದವರು ನಮಗೆ ಗೊತ್ತಿಲ್ಲ
ಈ ಾವನ್ನು ಸಂಭ್ರಮಿಸುತ್ತಿರುವವರು
ಯಾರೆಂದು ಲೋಕಕ್ಕೇ ತಿಳಿದಿದೆ
ಅವಳ ಸಾವಿನ ಪ್ರಾಯೋಜಕರು
ಪಾತಾಳದಲ್ಲಿಯೇ ಅಡಗಿರಲಿ ಹುಡುಕಿ ತರುತ್ತಾರೆ
ಅನ್ಯಾಯಕೆ ಅಂತ್ಯ ಹಾಡುತ್ತಾರೆ
ನ್ಯಾಯ ಪಡೆದೇ ತೀರುವ ದೀಕ್ಷೆ ತೊಟ್ಟಿದ್ದಾರೆ.

ಸಾಗರದಂತೆ ಹರಿದು ಬರುತ್ತಿದ್ದಾರೆ
ಅಸಂಖ್ಯೆ ಗೌರಿಯರ ದಂಡು ಧಾಂಗುಡಿಯಿಟ್ಟು
ಅಹಿಂಸೆಯನು ಹಿಂಸೆ ಕೊಲ್ಲುತ್ತಿದೆ
ಕತ್ತಲಲಿ ಅವಿತು
ಅಹಿಂಸೆಯ ಗೌರಿಯ ವಾರಸುದಾರರು
ಬೆಳಕ ಮುಖವಿಲ್ಲದವರ ಹುಡುಕಿ
ದೀವಟಿಗೆಗಳ ಹಿಡಿದು ಸಂಪು ಹೂಡಿದ್ದಾರೆ
ಬುಲೆಟ್ಟು ಬಂದೂಕಿನ ಲೆಕ್ಕ ಕೇಳುತ್ತ
ಒಕ್ಕೊರಲಿನಲಿ ಹೇಳುತ್ತಿದ್ದಾರೆ: ನಾವು ಗೌರಿಯರು.

*****************************

ಜೋಪಾನ ಜೋಗುಳ

ಜೀವ ಹೊಸಕುವ ಗುಂಡುಗಳು ನಿಷ್ಕ್ರಿಯವಾಗಲಿ
ದಫನ ಆಗಿಯೇ ಬಿಡಲಿ ದ್ವೇಷದ ವಿಷ ಬೀಜ
ತರವಲ್ಲ ಹೂದೋಟದಲಿ ಗುಂಡಿನ ಸದ್ದು
ಬುಲೆಟ್ಟಿನ ಘಾಟು ವಾಸನೆ ನಮಗೆ ಹಿಡಿಸದು
ಸಾಲು ಸಾಲು ಸಾವುಗಳು ಶೋಭೆಯಲ ್ಲ ನಿಮಗೆ.
ಗುಬ್ಬಿಗಳ ಮೇಲೆ ಸಾವಿನ ಶಸ್ತ್ರಗಳ ಪ್ರಹಾರ ತರವಲ್ಲ.

ಬಾಂಬು ಬಂದೂಕುಗಳಿಗೆ ತುಕ್ಕು ಹಿಡಿಯಲಿ
ಗಲ್ಲಿ ಮೊಹಲ್ಲಾ, ಎಲ್ಲೆಡೆಗೂ ಶಾಂತಿ ನೆಲೆಸಲಿ
ಸತತ ಸುರಿಯಲಿ ಪ್ರೀತಿಯ ಸೋನೆ ಮಳೆ
ದ್ವೇಷದ ಉರಿ ಬೆಂಕಿಯನು ನಂದಿಸಲಿ
ಮನುಜ ಪ್ರೀತಿಯ ಬಳ್ಳಿ ಹಬ್ಬಿ ಹರಡಲಿ.

ತೆಗೆದುಬಿಡಿ ಹುಸಿ ರಾಷ್ಟ್ರಪ್ರೇಮದ ಮುಖವಾಡ
ಲೇಖಕರೆಂದೂ ಗನ್ನು ಹಿಡಿಯಲಿಲ್ಲ ಕೈಯಲಿ
ಯಾವ ಕೊಲೆಯನೂ ಮಾಡಲಿಲ್ಲ
ಕಳಚಿಟ್ಟು ಬನ್ನಿ ಮುಖವಾಡಗಳ

ಅವಳು ಅಮ್ಮನ ಪ್ರೀತಿಯ ಸಾವು ಜಯಿಸಿದ ಮಗಳು,

ಸೆಕ್ಯುಲರ್ ಸ್ತ್ರೀವಾದಿ ಧ್ವನಿ ,ನೋಂದ ಜನಗಳ ಕೊರಳು.

ಅವಳು ಶೋಷಿತರ ಸಂಗಾತಿ ಸಾಂತ್ವನದ ಅಭಿವ್ಯಕ್ತಿ
ನಮ್ಮಳಗಿನ ಸಾಕ್ಷಿ ಪ್ರಜ್ಞೆಯ ಪ್ರತಿಫಲನ
ಹಸಿ ಗಾಯ ಮಾಯಲು ಮುಲಾಮು ಹಚ್ಚಬೇಕಿದೆ
ಕೊಚ್ಚಿ ಹೋಗಲಿ ಈ ಬಲಿಪೀಠಗಳು
ಸಾವಿಲ್ಲದ ಸಾವಿರಾರು ಗೌರಿಯರು ಹುಟ್ಟಿ.

ಅಳುವ ಕಂದನ ರಮಿಸಲು ತೊಟ್ಟಿಲು ತೂಗಿ
ತಟ್ಟಿ ಮಲಗಿಸಲು ಕಂದನ
ಕಾಪಿಡುವ ಎದೆಯ ಜೋಗುಳ ಹಾಡಿ
ಬರುವ ನಾಳೆಗಳು ಜೋಪಾನ
ಅವಳೆದೆಗೆ ನಾಟಿದ ಮೂರು ಗುಂಡುಗಳು
ಕುಡಿಗಳಾಗಿ ಎದೆಹಾಲು ಕುಡಿದು
ಸಾವಿಲ್ಲದ ಕೇಡಿಲ್ಲದ ಲೋಕಕ್ಕಾಗಿ
ಹಾರೈಸಿ ಹಾದಿಯಲಿ ಕಾದು ನಿಂತು.

share
ಡಾ. ಕೆ. ಶರೀಫಾ
ಡಾ. ಕೆ. ಶರೀಫಾ
Next Story
X