Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಟಿಪ್ಪು ಸುಲ್ತಾನನ ರಾಜನೀತಿ

ಟಿಪ್ಪು ಸುಲ್ತಾನನ ರಾಜನೀತಿ

ಇತಿಹಾಸ-ವರ್ತಮಾನ

ಡಾ|| ಲಕ್ಷ್ಮೀಪತಿ.ಸಿ.ಜಿಡಾ|| ಲಕ್ಷ್ಮೀಪತಿ.ಸಿ.ಜಿ4 Nov 2017 6:36 PM IST
share
ಟಿಪ್ಪು ಸುಲ್ತಾನನ ರಾಜನೀತಿ

ಟಿಪ್ಪು ಸುಲ್ತಾನನ ಸಮಗ್ರ ಕೃಷಿ ಸುಧಾರಣಾ ಕ್ರಮದ ಭಾಗವಾಗಿ ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಹುಳ ಸಾಕಣೆೆ ಮುಂತಾದ ಪೂರಕ ಕಸುಬುಗಳಿಗೆ ಅನುಕೂಲವಾಗುವಂತೆ ರೂಪಿಸಿರುವ ನೀತಿಗಳು ಗಮನಾರ್ಹವಾಗಿವೆ.

ಟಿಪ್ಪುಸುಲ್ತಾನನ ಅವಧಿಯಲ್ಲಿ ತೋಟಗಾರಿಕೆ ಉಛ್ರಾಯ ಸ್ಥಿತಿಯಲ್ಲಿತ್ತು. ಯೂರೋಪ್ ಖಂಡದ ಬಹುತೇಕ ಎಲ್ಲ ಹಣ್ಣು, ತರಕಾರಿಗಳನ್ನು, ರೇಷ್ಮೆ ಕೃಷಿಯನ್ನು ಭಾರತಕ್ಕೆ ಪರಿಚಯಿಸಿದ್ದು ಟಿಪ್ಪುಸುಲ್ತಾನನೇ. ಫ್ರಾನ್ಸ್, ಮಸ್ಕಟ್, ಅರೇಬಿಯಾ ದೇಶಗಳಿಂದ ಲವಂಗ, ಕೇಸರಿ, ಖರ್ಜೂರ, ಬಾದಾಮಿ ಮುಂತಾದ ಸಸಿಗಳನ್ನು ತರಿಸಿಕೊಂಡಿದ್ದೇ ಅಲ್ಲದೆ, ಅದರ ಸೂಕ್ತ ಆರೈಕೆ ಮಾಡುವ ಮಾಲಿಯನ್ನೂ ಜೊತೆಗೆ ಕಳುಹಿಸುವಂತೆ ಟಿಪ್ಪುಸುಲ್ತಾನ್ ಆಯಾ ದೇಶದವರೊಂದಿಗೆ ಪತ್ರ ವ್ಯವಹಾರ ನಡೆಸಿದ್ದಾನೆ.

ತೋಟಗಾರಿಕೆಗೆ ಸಂಬಂಧಿಸಿದಂತೆ ಟಿಪ್ಪು ರೈತರಿಗೆ ಹೊರಡಿಸಿರುವ ಆದೇಶಗಳು ಹೀಗಿವೆ:

ಆದೇಶ ಸಂಖ್ಯೆ 4

ರೈತರು ಸೆಗಣಿಯನ್ನು ಗೊಬ್ಬರವಾಗಿ ಬಳಸತಕ್ಕದ್ದು. ಒಬ್ಬ ರೈತನಿಗೆ ಹೆಚ್ಚುವರಿಯಾಗಿ ನೀಡಲಾಗಿರುವ ಜಮೀನಿನಲ್ಲಿ ಆತ ಕಡಿಮೆ ಪ್ರಮಾಣದ ಬೇಸಾಯ ಮಾಡಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳುವುದು. ಭೂಮಿಯು ಫಲವತ್ತಾಗಿರುವ ಜಾಗದಲ್ಲಿ ಹೆಚ್ಚು ಕಬ್ಬು ಬೆಳೆಯಲು ಪಟೇಲರು ಮತ್ತು ರೈತರು ಆದ್ಯತೆ ಕೊಡಬೇಕು. ಒಂದು ವೇಳೆ ರೈತರು ಸೂಕ್ತ ಕಾರಣ ನೀಡದೆ ಕಬ್ಬು ಬೇಸಾಯ ಮಾಡಲು ನಿರಾಕರಿಸಿದರೆ ಅಂಥವರಿಂದ ದುಪ್ಪಟ್ಟು ದಂಡ ವಸೂಲಿ ಮಾಡಬೇಕು.

ಆದೇಶ 20

ಪ್ರತೀ ಗ್ರಾಮದಲ್ಲಿ 200 ಮಾವಿನ ಮರಗಳು ಮತ್ತು ಇತರ ಒಣ ಹಣ್ಣುಗಳ ಸಸಿಗಳನ್ನು ನೆಟ್ಟು ಅದರ ವಿವರಗಳನ್ನು ಸರಕಾರಕ್ಕೆ ಸಲ್ಲಿಸತಕ್ಕದ್ದು.

ಆದೇಶ 27

ಒಬ್ಬ ರೈತ ಮೊದಲನೆ ಬಾರಿಗೆ ಅಡಿಕೆ ಬೇಸಾಯ ಮಾಡಲು ಮುಂದಾದರೆ ಮೊದಲ ಐದು ವರ್ಷ ಕಂದಾಯ ಮನ್ನಣೆ ಮಾಡುವುದು. ಆರನೆ ವರ್ಷ ಅರ್ಧದಷ್ಟು ಮತ್ತು ಏಳನೆ ವರ್ಷದಿಂದ ಪೂರ್ಣ ತೆರಿಗೆ ವಸೂಲಿ ಮಾಡತಕ್ಕದ್ದು.

ಆದೇಶ 28

ಮೊದಲ ಬಾರಿಗೆ ತೆಂಗಿನಕಾಯಿ ತೋಟ ಮಾಡಲು ಮುಂದಾಗುವ ರೈತನಿಗೆ ಮೊದಲ ನಾಲ್ಕು ವರ್ಷ ಕಂದಾಯ ಇರುವುದಿಲ್ಲ; ಐದನೆ ವರ್ಷ ಅರ್ಧದಷ್ಟು ಕಂದಾಯ ಮತ್ತು ಆರನೆ ವರ್ಷದಿಂದ ಮಾಮೂಲಿನಂತೆ ಕಂದಾಯ ವಸೂಲಿ ಮಾಡುವುದು. ಈ ಜಮೀನಿನಲ್ಲಿ ಬೆಳೆದ ತರಕಾರಿ ಮತ್ತು ಸೊಪ್ಪುಗಳಿಗೆ ಕಂದಾಯ ಅನ್ವಯಿಸುವುದಿಲ್ಲ.

ಟಿಪ್ಪು ಸುಲ್ತಾನ ನೀಲಗಿರಿಯನ್ನು ಒಳಗೊಂಡಂತೆ ಹಲವು ವಿದೇಶಿ ಮತ್ತು ಹೊಸ ಹಣ್ಣು, ತರಕಾರಿ ಮತ್ತು ಹೂವುಗಳ ತಳಿಗಳನ್ನು ಭಾರತಕ್ಕೆ ಪರಿಚಯಿಸಿದ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ವಿವಿಧ ಜಾತಿಯ ಮಾವಿನ ಮರಗಳನ್ನು ಆತ ನೆಡಿಸಿದ್ದ. ಟಿಪ್ಪು ಕಾಲದಲ್ಲಿ ನೆಟ್ಟ ಅನೇಕ ಮಾವಿನ ಮರಗಳ ಪೈಕಿ ಮೂರು ಮರಗಳು ಈಗಲೂ ಫಲ ನೀಡುತ್ತಿವೆ ಎನ್ನಲಾಗಿದೆ.

ಮುಂದಿನ ಸಂಚಿಕೆಯಲ್ಲಿ ಪಶು ಸಂಗೋಪನೆಗೆ ಸಂಬಂಧಪಟ್ಟಂತೆ ಟಿಪ್ಪು ಸುಲ್ತಾನ್ ರೂಪಿಸಿದ ನೀತಿಗಳನ್ನು ಗಮನಿಸೋಣ.

share
ಡಾ|| ಲಕ್ಷ್ಮೀಪತಿ.ಸಿ.ಜಿ
ಡಾ|| ಲಕ್ಷ್ಮೀಪತಿ.ಸಿ.ಜಿ
Next Story
X