Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. 80 ದಿನಗಳ ಸಾಹಸಮಯ ವಿಶ್ವ ಯಾತ್ರೆ

80 ದಿನಗಳ ಸಾಹಸಮಯ ವಿಶ್ವ ಯಾತ್ರೆ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯ-ಕಾರುಣ್ಯ4 Nov 2017 6:30 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
80 ದಿನಗಳ ಸಾಹಸಮಯ ವಿಶ್ವ ಯಾತ್ರೆ

ಯೂಲ್ಸ್ ವೆರ್ನೆ ಎಂಬ ಫ್ರೆಂಚ್ ಲೇಖಕ ಬರೆದ ವಿಶ್ವಪ್ರಸಿದ್ಧ ಸಾಹಸಮಯ ಕಾದಂಬರಿ ‘ಎರೌಂಡ್ ದಿ ವರ್ಲ್ಡ್ ಇನ್ ಎಯ್‌ಟಿ ಡೇಸ್’’. 1873ರಲ್ಲಿ ಬರೆದ ಈ ಕೃತಿ, ಬಳಿಕ ಇಂಗ್ಲಿಷ್‌ಗೆ ಅನುವಾದವಾಯಿತು. ಇಂಗ್ಲಿಷ್ ಮೂಲಕ ಈ ಸಾಹಸ ಯಾತ್ರೆ ವಿಶ್ವಾದ್ಯಂತ ಹರಡಿಕೊಂಡಿತು. 1872ರಲ್ಲಿ ವಿಮಾನ ಪ್ರಯಾಣದ ಅನುಕೂಲತೆಗಳೇ ಇಲ್ಲದ ಕಾಲದಲ್ಲಿ ಉಗಿಹಡಗು ಮತ್ತು ಉಗಿ ರೈಲು ಬಂಡಿಗಳ ಮೂಲಕ ಜಗತ್ತಿಗೆ ಎಂಬತ್ತು ದಿನಗಳಲ್ಲಿ ಒಂದು ಸುತ್ತು ಬರುವ ಸಾಹಸದ ಯಾತ್ರೆಯ ಈ ಕಥನವು ಒಂದು ರೋಮಾಂಚಕ ಕಾದಂಬರಿಯಾಗಿ ವಿದ್ಯಾರ್ಥಿಗಳು, ಯುವಕರನ್ನು ಸೆಳೆದಿದೆ. ಈ ಕೃತಿಯನ್ನು ಇದೀಗ ಕನ್ನಡದ ಹಿರಿಯ ಲೇಖಕರಾಗಿರುವ ಬಿ.ಎ.ವಿವೇಕ್ ರೈ ಕನ್ನಡಕ್ಕೆ ತಂದಿದ್ದಾರೆ. ಸಾಧಾರಣವಾಗಿ ಅಕಾಡಮಿಕ್ ಮತ್ತು ಸಂಶೋಧನಾತ್ಮಕವಾದ ಬರಹಗಳಲ್ಲೇ ಗುರುತಿಸಿಕೊಂಡಿರುವ ರೈ ಅವರು ಸಾಹಿತ್ಯ ಕೃತಿಯಾಗಿ ಬರೆದಿರುವ ಮೊದಲ ಪುಸ್ತಕ ಎಂದೂ ಇದನ್ನು ಕರೆಯಬಹುದಾಗಿದೆ. ಈ ಕೃತಿ ಅವರ ಗಮನ ಸೆಳೆಯುವುದಕ್ಕೂ ಕಾರಣವಿದೆ. ಅದನ್ನು ತಮ್ಮ ಮುನ್ನುಡಿಯಲ್ಲಿ ಅವರು ಹಂಚಿಕೊಂಡಿದ್ದಾರೆ. ಪ್ರೌಢ ಶಾಲಾ ಕಲಿಕೆಯ ಸಂದರ್ಭದಲ್ಲಿ ಈ ಇಂಗ್ಲಿಷ್ ಕೃತಿಯ ಹಿಂದಿ ಅನುವಾದ ಅವರಿಗೆ ಪಠ್ಯವಾಗಿತ್ತು ಮತ್ತು ಆ ಕತೆ ಅವರ ಆ ವಿದ್ಯಾರ್ಥಿ ಜೀವನದಲ್ಲಿ ಬಹಳಷ್ಟು ಪರಿಣಾಮವನ್ನು ಬೀರಿತ್ತು. ಆರಂಭದಲ್ಲಿ ಆ ಹಿಂದಿ ಕೃತಿಯನ್ನೇ ಅವರು ನೇರ ಕನ್ನಡಕ್ಕಿಳಿಸಲು ಪ್ರಯತ್ನಿಸಿದ್ದರು. ಅದೂ ವಿದ್ಯಾರ್ಥಿ ಜೀವನದಲ್ಲೇ. ಆಗ ಅವರು ಅದಕ್ಕೆ ನೀಡಿದ ಶೀರ್ಷಿಕೆ ‘80 ದಿನಗಳಲ್ಲಿ ವಿಶ್ವ ಪರ್ಯಟನ’. ಹೀಗೆ ಬಾಲ್ಯದಲ್ಲಿ ಬಿತ್ತಿದ ಬೀಜ ಈಗ ಪುಸ್ತಕ ರೂಪವನ್ನು ಪಡೆದಿದೆ.

  ವಿದೇಶಿ ಸಾಹಸ ಗಾಥೆಗಳನ್ನಿಟ್ಟುಕೊಂಡು ಹತ್ತುಹಲವು ಖ್ಯಾತ ಕೃತಿಗಳು ಬಂದಿವೆ. ಭಾರೀ ಪ್ರಮಾಣದ ಓದುಗರನ್ನು ಸೆಳೆದಿವೆ. ಇಂತಹ ಕೃತಿಗಳನ್ನು ಗುರುತಿಸಿ ಪೂರ್ಣ ಚಂದ್ರ ತೇಜಸ್ವಿಯವರು ಅನುವಾದ ಮಾಡಿ, ಒಂದು ದೊಡ್ಡ ಓದುಗ ವರ್ಗವನ್ನು ಸೆಳೆದಿದ್ದರು. ಕನ್ನಡಕ್ಕೆ ಈ ಮೂಲಕ ಓದುವ ಖುಷಿಯನ್ನು ಕೊಟ್ಟಿದ್ದರು. ವಿದ್ಯಾರ್ಥಿಗಳು, ಹದಿಹರೆಯದ ಯುವಕರು ಇಂತಹ ಸಾಹಸಮಯ ಕಾದಂಬರಿಗಳಿಂದ ಆಕರ್ಷಿತರಾಗಿ ಕನ್ನಡ ಅಕ್ಷರಗಳನ್ನು ಪ್ರೀತಿಸತೊಡಗಿದ್ದರು. ಇದೀಗ ಪ್ರೊ. ಬಿ. ಎ. ವಿವೇಕ ರೈ ಅವರು ಕೂಡ ಇಂತಹದೊಂದು ಪ್ರಯತ್ನವನ್ನು ಮಾಡಿದ್ದಾರೆ. ಇಂದು ಯುವಕರಲ್ಲಿ ಕನ್ನಡ ಓದುವಿಕೆಯ ಕೊರತೆ ಕಾಣುತ್ತಿದೆ. ಒಂದೆಡೆ ಇಂಗ್ಲಿಷ್ ಮೀಡಿಯಂ ಪ್ರಭಾವ ಇದಕ್ಕೆ ಕಾರಣವಾಗಿರಬಹುದು. ಇದೇ ಸಂದರ್ಭದಲ್ಲಿ ಆಧುನಿಕ ಸಂದರ್ಭಕ್ಕೆ ತಕ್ಕಂತೆ ಯುವಕರನ್ನು, ಮಕ್ಕಳನ್ನು ಆಕರ್ಷಿಸುವಂತಹ ಪುಸ್ತಕಗಳು ಬರುವುದೂ ಕಡಿಮೆಯಾಗಿದೆ. ಮಕ್ಕಳನ್ನು ಕನ್ನಡ ಅಕ್ಷರಗಳ ಕಡೆಗೆ ಸೆಳೆಯುವಂತಹ ಕುತೂಹಲಕಾರಿ ಕೃತಿಗಳು ಹೆಚ್ಚು ಹೆಚ್ಚು ಬರತೊಡಗಿದಂತೆ, ಕನ್ನಡ ಓದುಗರ ಸಂಖ್ಯೆಯೂ ಜಾಸ್ತಿಯಾಗಬಹುದೇನೋ? ಈ ನಿಟ್ಟಿನಲ್ಲಿ ವಿವೇಕ್ ರೈ ಪ್ರಯತ್ನವನ್ನು ನಾವು ಅಭಿನಂದಿಸಬೇಕಾಗಿದೆ.
ಆಕೃತಿ ಆಶಯ ಪಬ್ಲಿಕೇಶನ್ ಹೊರತಂದಿರುವ ಕೃತಿಯ ಒಟ್ಟು ಪುಟಗಳು 70. ಮುಖಬೆಲೆ 80ರೂ. ಆಸಕ್ತರು 0824 2443002 ದೂರವಾಣಿಯನ್ನು ಸಂಪರ್ಕಿಸಬಹುದು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯ
-ಕಾರುಣ್ಯ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X