ಕುಂಬಳೆ ಉಪಜಿಲ್ಲಾ ಕಲೋತ್ಸವ: ಕಾಟುಕುಕ್ಕೆ ಶಾಲೆ ಚಾಂಪಿಯನ್

ಕಾಸರಗೊಡು, ನ. 5: ನೀರ್ಚಾಲು ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕಂಡರಿ ಶಾಲೆ ಸಮಗ್ರ ಚಾಂಪಿಯನ್ಶಿಪ್ ಪಡೆಯಿತು.
ಕಳೆದ ಐದು ದಿನಗಳಿಂದ ನಡೆದ ಕಲೋತ್ಸವದಲ್ಲಿ 209 ಅಂಕಗಳೊಂದಿಗೆ ಸತತ ಎರಡನೇ ಬಾರಿ ಕಾಟುಕುಕ್ಕೆ ಶಾಲೆ ಚಾಂಪಿಯನ್ಶಿಪ್ ಪಡೆದಿದೆ. ಗ್ರೂಪ್ ಸ್ಪರ್ಧೆಗಳಾದ ಸಮೂಹ ನೃತ್ಯ, ನಾಟಕ, ದಫ್ಮುಟ್ಟ್, ಜಾನಪದ ಹಾಡು, ಚೆಂಡೆಮೇಳ, ಮಾರ್ಗಂಕಳಿ ಸ್ಪರ್ಧೆಗಳಲ್ಲಿ ಎ ಗ್ರೇಡ್ನೊಂದಿಗೆ ಪ್ರಥಮ ಸ್ಥಾನ,ತಿರುವಾದಿರ, ಇಂಗ್ಲೀಷ್ ಪ್ರಹಸನ, ಕೋಲ್ಕಳಿ, ವಂಜಿಪಾಟ್ ಸ್ಪರ್ಧೆಗಳಲ್ಲಿ ಎ ಗ್ರೇಡ್ನೊಂದಿಗೆ ದ್ವಿತೀಯ ಸ್ಥಾನ, ವೈಯಕ್ತಿಕ ಸ್ಪರ್ಧೆಗಳಾದ ಚೆಂಡೆ, ಸಂಸ್ಕøತ ಕಂಠಪಾಠ, ಹಿಮದಿ ಕಂಠಪಾಠ, ಇಂಗ್ಲೀಷ್ ಕಂಠಪಾಠ, ತಮಿಳು ಕಂಠಪಾಠ, ಮಾಪಿಳ್ಳಪಾಟು, ಕೊಲಾಷ್, ಭರತನಾಟ್ಯ, ಸಂಸ್ಕøತಬ ಕಥಾರಚನೆ, ಉರ್ದು ಗಝಲ್, ಕೇರಳ ನಟನೆ ಇತ್ಯಾದಿ ಸ್ಪರ್ಧೆಗಳಲ್ಲಿ ಕಾಟುಕುಕ್ಕೆ ಶಾಲಾ ವಿದ್ಯಾರ್ಥಿಗಳು ಎ ಗ್ರೇಡ್ನೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
138 ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳನ್ನು ಶಾಲಾ ಮೇನೇಜರ್ ಮಿತ್ತೂರು ಪುರುಷೋತ್ತಮ ಭಟ್, ಶಾಲಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಸಂಜೀವ ರೈ, ಪ್ರಿನ್ಸಿಪಾಲ್ ಪದ್ಮನಾಭ ಶೆಟ್ಟಿ ಅಭಿನಂದಿಸಿದರು. ಅಧ್ಯಾಪಕರಾದ ವಾಣಿಶ್ರೀ, ರಾಜೇಶ್ ಸಿ. ಎಚ್., ಅನಿತಾ ಕುಮಾರಿ, ವಿನೋದ ಕುಮಾರ್, ರಮಣಿ ಎಂ. ಎಸ್., ಸರಸ್ವತಿ ಪ್ರಸನ್ನ, ವಾಣಿ ಕೆ., ಕೃಷ್ಣಕುಮಾರಿ, ಬಾಲಕೃಷ್ಣ, ಸುರೇಶ್, ಗೋವಿಂದನ್ ನಂಬೂದಿರಿ, ಸಂದೀಪ್ ಕುಮಾರ್, ಈಶ್ವರ ನಾಯಕ್, ಮಹೇಶ್ ಏತಡ್ಕ, ಹೇಮಲತ ನೇತೃತ್ವ ವಹಿಸಿದ್ದರು.







