ನಿವೇಶನ ನೀಡಿಕೆಗೆ ಕಾಲಮಿತಿ ನಿಗದಿ ಪಡಿಸಿದ ಸಚಿವ ಪ್ರಮೋದ್

ಉಡುಪಿ, ನ.5: ಬಡವರಿಗೆ ಮನೆ ನಿವೇಶನ ಮಂಜೂರು ಮಾಡುವ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ವಿತರಿಸಲು ಸಿದ್ಧಪಡಿಸಿರುವ ನಿವೇಶನ ಪಟ್ಟಿಯನ್ನು ಕಾಲಮಿತಿಯೊಳಗೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅರ್ಹ ಫಲಾನುಭಗಳಿಗೆ ನಿವೇಶನ ಒದಗಿಸಲು ತಹಶೀಲ್ದಾರ್ ಅವರು ಸಿದ್ಧಪಡಿಸಿರುವ ಎ ಮತ್ತು ಬಿ ಪಟ್ಟಿಗಳಲ್ಲಿರುವ ಒಟ್ಟು ಅರ್ಜಿದಾರರನ್ನು ಗುರುತಿಸಿ, ಮೊದಲ ಆದ್ಯತೆಯಲ್ಲಿ ಎ ಪಟ್ಟಿಯಲ್ಲಿರುವ ಸ್ಥಳೀಯರಿಗೆ ನಿವೇಶನ ನೀಡಿ ಎಂದರು.
ಬಿ ಪಟ್ಟಿಯನ್ನು ರೇಷನ್ ಕಾರ್ಡ್ ಮತ್ತು ಅಗತ್ಯ ದಾಖತೆ ಪತ್ರಗಳೊಂದಿಗೆ ಪರಿಶೀಲಿಸಿ ವರದಿ ಸಿದ್ಧಪಡಿಸಲು ನಿವೇಶನಕ್ಕೆ ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು. ನಿವೇಶನ ಹಂಚಿಕೆ ಸಭೆಗಳು ಕೇವಲ ಕಾಟಾಚಾರ ಕ್ಕೆ ನಡೆಯದೇ ಅನುಷ್ಠಾನಕ್ಕೆ ಪೂರಕವಾಗಿರಬೇಕೆಂದು ಅವರು ಎಚ್ಚರಿಸಿದರು.
ಡೀಮ್ದ್ ಫಾರೆಸ್ಟ್, ಪರಂಬೋಕು, ಕುಮ್ಕಿಯಂತಹ ಸಮಸ್ಯೆಗಳಿಂದ ಮುಕ್ತ ವಾಗಿರುವ, ಮನೆ ನಿವೇಶನಕ್ಕೆ ಸೂಕ್ತವಾಗಿರುವ, ಭೂಮಿಯ ಲೆಕ್ಕವನ್ನು ಮಾತ್ರ ತನಗೆ ನೀಡಿ. ನೀವು ಗುರುತಿಸಿರುವ ಜಾಗದ ಬಗ್ಗೆ ಪಕ್ಕಾ ಮಾಹಿತಿಯ ಜೊತೆಗೆ ಫಲಾನುಭವಿಗಳಿಗೆ ನೀಡಲು ಸೂಕ್ತವಾಗಿರಬೇಕೆಂದು ಸಚಿವರು ಸ್ಪಷ್ಟಪಡಿಸಿದರು.
ಈಗಾಗಲೇ ಹಲವು ಸುತ್ತಿನ ಸಭೆಗಳು ನಿವೇಶನಕ್ಕೆ ಸಂಬಂಧಿಸಿದಂತೆ ನಡೆದಿದೆ. ಗಾರಮೀಣ ಭಾಗದಲ್ಲಿ ನಿವೇಶನ ಹಂಚಿಕೆಗೆ 65 ಎಕರೆ ಅಗತ್ಯವಾಗಿದ್ದು, ಒಟ್ಟು 1429 ಫಲಾನುಭವಿಗಳ ಪಟ್ಟಿ ತಯಾರಾಗಿದೆ. ನಗರ ಪ್ರದೇಶದಲ್ಲಿ 11 ಎಕರೆ ಭೂಮಿ ಲಭ್ಯವಿದ್ದು, ಒಟ್ಟು 15 ಎಕರೆಯ ಅಗತ್ಯವಿದೆ ಎಂದು ಪೌರಾಯುಕ್ತರು ಮತ್ತು ಸಹಾಯಕ ಆಯುಕ್ತರು ಸಭೆಗೆ ಮಾಹಿತಿ ನೀಡಿದರು.
ನಗರಸಭೆ ಪೌರಾಯುಕ್ತ ಮಂಜುನಾಥಯ್ಯ ಮಾಹಿತಿ ನೀಡಿ, 595 ಫಲಾನುಭಗಳ ಪಟ್ಟಿ ನಗರಸಭೆಯಲ್ಲಿ ಸಿದ್ಧವಾಗಿದ್ದು 500 ಜನರಿಗೆ ಭೂಮಿ ನೀಡಲು ಸಿದ್ದತೆಗಳಾಗಿದೆ ಎಂದರು. ಹೆರ್ಗ, ಮಂಚಿ ಪ್ರದೇಶಗಳಲ್ಲಿ ನಿವೇಶನ ಭೂಮಿಯನ್ನು ಉಡುಪಿ ನಗರಸಭೆ ಗುರುತಿಸಿದೆ ಎಂದರು.
ಪರಾರಿ-ಶಿಮ್ರಾ ಸೇತುವೆ ಡಿಸೆಂಬರ್ನಲ್ಲಿ ಉದ್ಘಾಟನೆಯಾಗಲಿದ್ದು ಬಳಿಕ ನಗರದಿಂದ ಈ ಪ್ರದೇಶಕ್ಕಿರುವ ದೂರ ಕಡಿಮೆಯಾಗಲಿದೆ. ಹೀಗಾಗಿ ಮನೆ ನಿವೇಶನ ನೀಡಿಕೆಗೆ ಫಲಾನುಭವಿಗಳ ಆಕ್ಷೇಪವಿರಲಾರದು ಎಂದು ಸಚಿವರು ಹೇಳಿದರು. ಉಪ್ಪೂರಿನಲ್ಲಿ 26 ಎಕರೆ ನಿವೇಶನ ಭೂಮಿ ಹಂಚಿಕೆಗೆ ಸಿದ್ದವಾಗಿದೆ ಎಂದು ತಹಶೀಲ್ದಾ್ ಪ್ರದೀಪ್ ಕುರ್ಡೇಕರ್ ತಿಳಿಸಿದರು.
ಪರಾರಿ-ಶಿಮ್ರಾ ಸೇತುವೆ ಡಿಸೆಂಬರ್ನಲ್ಲಿ ಉದ್ಘಾಟನೆಯಾಗಲಿದ್ದು ಬಳಿಕ ನಗರದಿಂದ ಈ ಪ್ರದೇಶಕ್ಕಿರುವ ದೂರ ಕಡಿಮೆಯಾಗಲಿದೆ. ಹೀಗಾಗಿ ಮನೆ ನಿವೇಶನ ನೀಡಿಕೆಗೆ ಫಲಾನುವಿಗಳಆಕ್ಷೇಪವಿರಲಾರದುಎಂದುಸಚಿವರುಹೇಳಿದರು.ಉಪ್ಪೂರಿನಲ್ಲಿ26ಎಕರೆನಿವೇಶನೂಮಿ ಹಂಚಿಕೆಗೆ ಸಿದ್ದವಾಗಿದೆ ಎಂದು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ತಿಳಿಸಿದರು. ನೀಲಾವರ, ಚೇರ್ಕಾಡಿ, ಹಾರಾಡಿ, ಪೆರ್ಡೂರುಗಳಲ್ಲಿ ನಿವೇಶನಗಳನ್ನು ಗುರುತಿಸಲಾಗಿದೆ ಎಂದೂ ಅವರು ಹೇಳಿದರು. ಐಟಿಐಗೆ ಚೇರ್ಕಾಡಿಯಲ್ಲೇ ಜಾಗ ಮಿಸಲಿಡಿ ಎಂದ ಸಚಿವರು, ನಾಲ್ಕೂರು, ನಂಚಾರಿನಲ್ಲಿ ನಿವೇಶನ ಮೀಸಲಿಡುವಲ್ಲಿ ಹಿನ್ನಡೆಯಾದರೆ ಅಲ್ಲಿನ ಆರ್ಐ ಮತ್ತು ವಿಎಯನ್ನು ಜವಾಬ್ದಾರರನ್ನಾಗಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದರು.
ಚೇರ್ಕಾಡಿ ರಸ್ತೆ ಕಾಮಗಾರಿ ಬಗ್ಗೆ, ಪೆರ್ಡೂರಿನಲ್ಲಿ ಫಲಾನುವಿಗಳ ಪಟ್ಟಿ ಅಂತಿಮಗೊಂಡಿರುವ ಹಾಗೂ ಕುತ್ಪಾಡಿಯಲ್ಲಿ ಶೀಘ್ರವೇ 14ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಬ್ಗೆ ಸಚಿವರು ಖಾತರಿಪಡಿಸಿಕೊಂಡರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಿಇಒ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ, ಐಎಎಸ್ ಪ್ರೊಬೇಷನರ್ ಪೂವಿತ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.







