Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕವಿತೆಗಳಾಗಿ ಹೊಮ್ಮಿದ ತಾಯಿ...

ಕವಿತೆಗಳಾಗಿ ಹೊಮ್ಮಿದ ತಾಯಿ ಮನಸ್ಸುಗಳು...

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯ-ಕಾರುಣ್ಯ6 Nov 2017 12:20 AM IST
share
ಕವಿತೆಗಳಾಗಿ ಹೊಮ್ಮಿದ ತಾಯಿ ಮನಸ್ಸುಗಳು...

‘ಮಹಾತಾಯಿ’ ಕೃತಿ ಪ್ರೊ. ಎಚ್. ಲಿಂಗಪ್ಪ ಅವರ ಒಂದು ವಿಭಿನ್ನ ಪ್ರಯೋಗವಾಗಿದೆ. ಅನುಭವ ಕಥನವಾಗಿ ಮೂಡಿ ಬಂದಿರುವ ಇಲ್ಲಿರುವ ಸಾಲುಗಳು ಗದ್ಯ ಮತ್ತು ಕಾವ್ಯದ ನಡುವೆ ಸಮನ್ವಯ ಸಾಧಿಸಿದಂತಹವುಗಳು. ವೈಚಾರಿಕ ಮತ್ತು ಸಾಹಿತ್ಯಕ ಎರಡು ಉದ್ದೇಶಗಳನ್ನೂ ಹೊಂದಿರುವಂತಹದು. ದಲಿತ ಪ್ರಜ್ಞೆಯ ಒಡಲಿಂದ ಹೊಮ್ಮಿದ ಕಿರಣಗಳು ಇವು. ಮಹಾತಾಯಿ ಎನ್ನುವುದು ಒಂದು ದೀರ್ಘಕವಿತೆಗಳಿಗಷ್ಟೇ ಸೀಮಿತವಾಗಬೇಕಾಗಿಲ್ಲ. ಅವರು ಕಟ್ಟಿಕೊಟ್ಟಿರುವ ಎಲ್ಲ ಪಾತ್ರಗಳೂ ತಾಯ್ತನವನ್ನು ಹೊಂದಿದವುಗಳೇ. ನಿರ್ಲಕ್ಷಿತ ಸಮಾಜವನ್ನು ತನ್ನ ಮಡಿಲಲ್ಲಿ ತೆಗೆದುಕೊಂಡ ತಾಯಿ ಮನಸ್ಸುಗಳೇ ಆಗಿವೆ. ಆದುದರಿಂದ ‘ಮಹಾತಾಯಿ’ ಹೆಸರು ಇಲ್ಲಿರುವ ಎಲ್ಲ ದೀರ್ಘ ಕವಿತೆಗಳನ್ನು ಒಟ್ಟಾಗಿ ಕಟ್ಟಿಕೊಡುತ್ತದೆ. ಈ ವಿಶಿಷ್ಟ ಪ್ರಯೋಗದ ಕುರಿತಂತೆ ಲೇಖಕರು ಈ ರೀತಿ ಹೇಳಿಕೊಳ್ಳುತ್ತಾರೆ ‘‘...ಇದು ಪದ್ಯ, ಗದ್ಯ, ರಗಳೆ, ಚಂಪೂ, ಛಂದಸ್ಸು ಎಲ್ಲವನ್ನೂ ಮೀರಿ ನನ್ನ ಬಾಲ್ಯದಿಂದ ಹಿಡಿದು ಇವತ್ತಿನವರೆಗೆ, ಹಿತಾನುಭವವನ್ನು ನೀಡುವಂತಹ ವಸ್ತುಗಳು...’’ . ಇಲ್ಲಿ ಒಟ್ಟು ಎಂಟು ಜೀವನ ಕಥನಗಳಿವೆ. ಎಲ್ಲವೂ ತಳಸ್ತರದ ಜನರ ಬಿಡುಗಡೆಯ ಕನಸು ಕಂಡ ವ್ಯಕಿತ್ವಗಳು.
ಮೊದಲನೆಯದು ‘ಸಿದ್ಧಾರ್ಥ ಬುದ್ಧನಾದ’ ಕವಿತೆ. ಇದು ವರ್ತಮಾನದ ಜೊತೆಗೆ ಸಂವಾದಿಯಾಗಬಲ್ಲ ಚಾರಿತ್ರಿಕ ಕಥನ. ಈ ಕಥನ ಮುಂದೆ ಪರಿಚಯಿಸಲ್ಪಡುವ ವ್ಯಕ್ತಿತ್ವಗಳ ಜೊತೆಗೆ ಒಂದಲ್ಲ ಒಂದು ಕಾರಣಕ್ಕಾಗಿ ಬೆಸೆದುಕೊಳ್ಳುತ್ತದೆ. ವೈಶಾಖ ಶುಕ್ಲ ಪೂರ್ಣಿಮೆಯಂದು ಬುದ್ಧ ಸಿದ್ಧಾರ್ಥ ಹುಟ್ಟಿದ ದಿನದಿಂದ ಅವನು ಬುದ್ಧನಾಗಿ ಲೋಕದಿಂದ ವಿದಾಯಹೇಳುವವರೆಗಿನ ಕಥನವನ್ನು ಕಾವ್ಯದ ಮೂಲಕ ತೆರೆದಿಟ್ಟಿದ್ದಾರೆ. ಎರಡನೆಯದು, ಪ್ರೊ. ಬಿ. ಕೃಷ್ಣಪ್ಪ ಅವರ ಬದುಕು, ಹೋರಾಟಕ್ಕೆ ಸಂಬಂಧಿಸಿದ್ದು. ಅಸ್ಪಶ್ಯತೆಯ ವಿರುದ್ಧ ಹೋರಾಡಿದ ಕೃಷ್ಣಪ್ಪ ಅವರೊಳಗಿನ ಬುದ್ಧ ಚಿಂತನೆಯ ಅಂಶವನ್ನು ಆ ಕವಿತೆ ತೆರೆದಿಡುತ್ತದೆ. ಮೂರನೆಯದು, ಮಹಾತಾಯಿ. ಈಕೆ ಲೇಖಕರ ತಾಯಿಯೂ ಹೌದು. ತಳಸ್ತರದ ಶೋಷಿತರೆಲ್ಲರ ತಾಯಿಯೂ ಹೌದು. ಅವರು ಕಟ್ಟಿಕೊಡುವ ವ್ಯಕ್ತಿತ್ವ ಕಣಕಣಗಳಾಗಿ ಎಲ್ಲ ತಾಯಂದಿರಲ್ಲೂ ಹಂಚಿಹೋಗಿದೆ. ಭಾವುಕತೆಯೊಂದಿಗೆ ತೀರಾ ಕೊಚ್ಚಿ ಹೋಗದೆ ತನ್ನ ತಾಯಿಯನ್ನು ಗೌತಮಿ, ಮೀರಾಬಾಯಿಗೆ ಹೋಲಿಸುತ್ತಾ ಅವರನ್ನು ಸಾರ್ವತ್ರಿಕಗೊಳಿಸುತ್ತಾರೆ ಲೇಖಕರು. ದೇವರಾಜ ಅರಸು ರಾಜಕೀಯ ಕಥನವನ್ನೂ ಅವರು ಇನ್ನೊಂದು ದೀರ್ಘ ಪದ್ಯದಲ್ಲಿ ತೆರೆದಿಟ್ಟಿದ್ದಾರೆ. ಎಡ-ಬಲ ಭೇದವಿಲ್ಲದ ರಾಜಕೀಯವನ್ನು ನೆಚ್ಚಿಕೊಂಡು ಹೇಗೆ ಒಬ್ಬ ರಾಜಕಾರಣಿ ತುಳಿತಕ್ಕೊಳಗಾದವರ ಪರ ಆಡಳಿತ ನಡೆಸಬಹುದು ಎನ್ನುವುದನ್ನು ದೇವರಾಜ ಅರಸರ ಬದುಕಿನಿಂದ ಲೇಖಕರು ಕಂಡುಕೊಳ್ಳುತ್ತಾರೆ. ಹಾಗೆಯೇ ‘ನನ್ನಪ್ಪ’ ಕವಿತೆಯೂ ಹೃದಯಕ್ಕೆ ಮುಟ್ಟುವಂತಹದ್ದು. ಕವಿಗೆ ಆತ್ಮಾಭಿಮಾನದ ಬದುಕನ್ನು ಕೊಟ್ಟು ಇಲ್ಲವಾದ ಮನಸ್ಸುಗಳು ಬೇರೆ ಬೇರೆ ರೀತಿಯಲ್ಲಿ, ರೂಪಕಗಳಲ್ಲಿ ಕವಿತೆಗಳಾಗಿ ನಮ್ಮನ್ನು ತಟ್ಟುತ್ತವೆ, ಕಾಡುತ್ತವೆ

ರಶ್ಮಿ ಪ್ರಕಾಶನ ಚಿತ್ರದುರ್ಗ ಇವರು ಹೊರತಂದಿರುವ ಕೃತಿಯ ಮುಖಬೆಲೆ 80 ರೂ. ಆಸಕ್ತರು 99459 98099 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯ
-ಕಾರುಣ್ಯ
Next Story
X