ಯುವಕನ ಚಿಕಿತ್ಸೆಯ ನೆರವಿಗಾಗಿ ಮನವಿ

ಉಪ್ಪಿನಂಗಡಿ, ಅ.27: ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಯುವಕನಿಗೆ ಸಹಕರಿಸುವಂತೆ ಕುಟುಂಬ ವಿನಂತಿಸಿದೆ.
ಪೆರ್ನೆಯ ಮೈರಕಟ್ಟೆ ನಿವಾಸಿ ಆದಂ ಎಂಬವರ ಪುತ್ರ ಹಂಝಾ (27) ಮರದಿಂದ ಬಿದ್ದು ತನ್ನ ಬೆನ್ನಿನ ಮೂಳೆ ಮುರಿತಕ್ಕೊಳಗಾಗಿ ಸೊಂಟದ ಕೆಲ ಭಾಗದ ಸ್ವಾದೀನವನ್ನು ಕಳೆದುಕೊಂಡಿದ್ದಾರೆ. ಆದ್ದರಿಂದಾಗಿ ಇವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದು, ದಾನಿಗಳು ನೆರವಾಗುವಂತೆ ಕೋರಲಾಗಿದೆ.
ಆರ್ಥಿಕ ನೆರವು ನೀಡ ಬಯಸುವ ದಾನಿಗಳು ಹಂಝಾ ಅವರ ಬ್ಯಾಂಕ್ ಖಾತೆಗೆ ಸಹಾಯ ನೀಡಬಹುದು. ಆಸಕ್ತ ದಾನಿಗಳು ವಿಜಯ ಬ್ಯಾಂಕ್ ಪೆರ್ನೆ ಶಾಖೆಯ ಖಾತೆ ಸಂಖ್ಯೆ: 146901011000797, IFSC: VIJB0001469 ಅಥವಾ ಮೊ.ಸಂಖ್ಯೆ: 7760785060 ನ್ನು ಸಂಪರ್ಕಿಸಬಹುದು.
Next Story





