ಕಾರ್ಕಳ: ಜಮೀಯ್ಯತುಲ್ ಫಲಾಹ್ ವಾರ್ಷಿಕ ಮಹಾಸಭೆ

ಮುಹಮ್ಮದ್ ಶರೀಫ್
ಕಾರ್ಕಳ, ನ. 8: ಜಮೀಯ್ಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ವಾರ್ಷಿಕ ಮಹಾಸಭೆಯು ಸಾಲ್ಮರ ವೆಲ್ಫೇರ್ ಕಟ್ಟಡದಲ್ಲಿ ನಡೆಯಿತು.
ಅಶ್ಪಾಕ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮುಹಮ್ಮದ್ ಶರೀಫ್ ವಾರ್ಷಿಕ ವರದಿ ಮಂಡಿಸಿದರು. 2017-19ರ ಸಾಲಿನ ನೂತನ ಪದಾಧಿಕಾರಿಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಮಹಾಸಭೆಯ ವೀಕ್ಷಕರಾಗಿ ಜಮೀಯ್ಯತುಲ್ ಫಲಾಹ್ ಕೇಂದ್ರ ಸಮಿತಿ ಸದಸ್ಯರಾದ ಸಮೀರ್ ಉಡುಪಿ, ಅಬ್ದುಲ್ ಗಫೂರ್ ಮೂಡುಬಿದಿರೆ, ಉಡುಪಿ ಘಟಕದ ನೂತನ ಅಧ್ಯಕ್ಷ ಅಬ್ದುಲ್ ರಶೀದ್ ಮಲ್ಪೆ, ಜಮೀಯ್ಯತುಲ್ ಫಲಾಹ್ ವ್ಯವಸ್ಥಾಪಕ ಆದಂ ಬ್ಯಾರಿ ಉಪಸ್ಥಿತರಿದ್ದು, ಚುನಾವಣೆ ಪ್ರಕ್ರಿಯೆ ನಡೆಸಿದರು.
ಜಮೀಯ್ಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಮುಹಮ್ಮದ್ ಶರೀಫ್, ಉಪಾಧ್ಯಕ್ಷರು-ಎಚ್.ಸುಲೇಮಾನ್ ಬಜಗೋಳಿ, ಮುಹಮ್ಮದ್ ಯಾಕೂಬ್, ಕಾರ್ಯದರ್ಶಿ ಮುಹಮ್ಮದ್ ಅಸ್ಲಂ ಆನೆಕೆರೆ, ಜತೆ ಕಾರ್ಯದರ್ಶಿ ಇಜಾಝ್ ಶರೀಫ್ ಸಾಲ್ಮರ, ಕೋಶಾಧಿಕಾರಿ ನಾಸೀರ್ ಶೇಖ್ ಬೈಲೂರು, ಸಂಘಟನಾ ಕಾರ್ಯದರ್ಶಿ ಸಯ್ಯದ್ ಅಬ್ಬಾಸ್ ಅಂಚಿಕಟ್ಟೆ, ಪತ್ರಿಕಾ ಕಾರ್ಯದರ್ಶಿ ನಾಸೀರ್ ಶೇಖ್ ಕಾಬೆಟ್ಟು, ಸದಸ್ಯರುಗಳಾಗಿ ಕೆ.ಎಸ್.ಇಮ್ತಿಯಾಝ್ ಅಹ್ಮದ್ ಕಾಬೆಟ್ಟು, ಅಶ್ಪಾಕ್ ಅಹ್ಮದ್ ಬಂಗ್ಲೆಗುಡ್ಡೆ, ಅಬ್ದುಲ್ ವಾಹಿದ್ ಕಾಬೆಟ್ಟು, ಅಬ್ದುಲ್ ರಶೀದ್ ಬಂಗ್ಲೆಗುಡ್ಡೆ, ಹೈದರ್ ಎಣ್ಣೆಹೊಳೆ, ಮುಹಮ್ಮದ್ ಅಬ್ಜಾನ್ ಕುಂಟಲ್ಪಾಡಿ, ಅಬ್ದುಲ್ ಸಮದ್ ಪತ್ತೊಂಜಿಕಟ್ಟೆ, ಮುಹಮ್ಮದ್ ಮುಸ್ತಫಾ ತಾಲೂಕುಗುಡ್ಡೆ, ಕೆ.ನಸೀರ್ ಖಾನ್ ತಾಲೂಕುಗುಡ್ಡೆ, ಸೈಯ್ಯದ್ ಯೂನುಸ್ ಪುಲ್ಕೇರಿ, ಮಹಮ್ಮದ್ ಗೌಸ್ ಮಿಯ್ಯೆರು, ಸಯ್ಯದ್ ಅಹ್ಮದ್ ಕಾಬೆಟ್ಟು, ಕೆ.ಎಂ.ಖಲೀಲ್ ಅಂಚಿಕಟ್ಟೆ.







