Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜಾರಿ ನಿರ್ದೇಶನಾಲಯ ಬಳಿ 9900 ಕೋಟಿ ರೂ....

ಜಾರಿ ನಿರ್ದೇಶನಾಲಯ ಬಳಿ 9900 ಕೋಟಿ ರೂ. ಅಕ್ರಮ ಆಸ್ತಿಯ 3700 ಪ್ರಕರಣಗಳು

ನೋಟು ರದ್ದತಿ

ವಾರ್ತಾಭಾರತಿವಾರ್ತಾಭಾರತಿ10 Nov 2017 8:43 PM IST
share
ಜಾರಿ ನಿರ್ದೇಶನಾಲಯ ಬಳಿ 9900 ಕೋಟಿ ರೂ. ಅಕ್ರಮ ಆಸ್ತಿಯ 3700 ಪ್ರಕರಣಗಳು

ಹೊಸದಿಲ್ಲಿ, ನ.10 : ನೋಟು ರದ್ದತಿಯ ನಂತರದ ಒಂದು ವರ್ಷದಲ್ಲಿ ಇಲಾಖೆಯು ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಪಟ್ಟಂತೆ 3,700ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿಕೊಂಡಿದೆ ಮತ್ತು ಸುಮಾರು 600 ಶೋಕಾಸ್ ನೊಟೀಸ್‌ಗಳನ್ನು ಜಾರಿ ಮಾಡಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ವರದಿ ಮಾಡಿದೆ. ಇಲಾಖೆಯು ದೇಶಾದ್ಯಂತ ನಡೆಸಿದ 620 ಕಾರ್ಯಾಚರಣೆಗಳಲ್ಲಿ ರೂ. 9,900 ಕೋಟಿಗೂ ಅಧಿಕ ಅಕ್ರಮ ಆಸ್ತಿಗಳನ್ನು ಪತ್ತೆಮಾಡಲಾಗಿದೆ. ನವೆಂಬರ್ 2016ರಿಂದ ಸೆಪ್ಟೆಂಬರ್ 2017ರ ಅವಧಿಯ ಅಂಕಿಅಂಶಗಳನ್ನು ಹೊಂದಿರುವ ಈ ವರದಿಯಲ್ಲಿ ಆ ಸಮಯದಲ್ಲಿ 54 ಮಂದಿಯನ್ನು ಹಣ ವಂಚನೆ ಸಂಬಂಧ ಬಂಧಿಸಲಾಗಿದೆ ಎಂದು ಇಡಿ ತಿಳಿಸಿದೆ.

ಇವುಗಳಲ್ಲಿ 3,567 ಪ್ರಕರಣಗಳನ್ನು ಫೆಮ ಕಾಯಿದೆ ಉಲ್ಲಂಘನೆ ಮಾಡಿದ ಕಾರಣ ದಾಖಲಿಸಲಾಗಿದ್ದು, ಇವುಗಳ ಮೊತ್ತ ರೂ. 4,600 ಕೋಟಿಯಾಗಿದೆ. ಹಣ ವಂಚನಾ ತಡೆ ಕಾಯಿದೆಯಡಿ 191 ಪ್ರಕರಣಗಳನ್ನು ದಾಖಲಿಸಲಾಗಿದ್ದು ರೂ. 5335 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸುತ್ತದೆ. ಯಾವ ರೀತಿ ಕಪ್ಪುಹಣವನ್ನು ಬಿಳಿ ಮಾಡಲಾಗುತ್ತಿತ್ತು ಎಂಬ ಬಗ್ಗೆಯೂ ವರದಿಯಲ್ಲಿ ವಿವರಿಸಲಾಗಿದೆ. ಇಲಾಖೆಯು ಪಟ್ಟಿ ಮಾಡಿರುವಂತೆ ಕಪ್ಪುಹಣವನ್ನು ಬಿಳಿ ಮಾಡುವ ಆರು ಜನಪ್ರಿಯ ದಾರಿಗಳು ಈ ರೀತಿಯಿವೆ, ಬ್ಯಾಂಕ್ ಅಧಿಕಾರಿಗಳಿಗೆ ಲಂಚ ನೀಡುವುದು, ನಕಲಿ ಕಂಪೆನಿಗಳ ಆರಂಭ, ಚಿನ್ನ ಖರೀದಿ, ಆಮದಿನಲ್ಲಿ ಹೆಚ್ಚಳ ತೋರಿಸುವುದು, ಹವಾಲಾ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ. ಇವುಗಳಲ್ಲಿ ಶೆಲ್ ಕಂಪೆನಿಗಳ ಉಪಯೋಗ ಅತೀಹೆಚ್ಚು ನಡೆದಿದೆ ಎಂದು ತಿಳಿಸಲಾಗಿದ್ದು 2017ರ ಎಪ್ರಿಲ್ ನಲ್ಲಿ ಇಡಿಯು 16 ರಾಜ್ಯಗಳಲ್ಲಿ 1000ಕ್ಕೂ ಅಧಿಕ ಶೆಲ್ ಕಂಪೆನಿಗಳಿಗಾಗಿ 134 ಕಡೆಗಳಲ್ಲಿ ಶೋಧ ನಡೆಸಿದ್ದವು ಎಂದು ವರದಿಯಲ್ಲಿ ತಿಳಿಸಿದೆ. ನೋಟು ಅಮಾನ್ಯದ ನಂತರ ದಾಖಲಾದ ದೂರುಗಳನ್ನು ಗಮನಿಸಿದಾಗ ತಮ್ಮ ಅಕ್ರಮ ಆಸ್ತಿಯನ್ನು ಸಕ್ರಮಗೊಳಿಸಲು ಉದ್ಯಮಿಗಳು ಮತ್ತು ವೃತ್ತಿಪರರು ಪರಸ್ಪರ ಕೈಜೋಡಿಸಿರುವುದು ತಿಳಿಯುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವರದಿಯಲ್ಲಿ ತಿಳಿಸಿರುವಂತೆ, ಭಾರತದಲ್ಲಿ ಆರ್ಥಿಕ ಸಂಸ್ಥೆಗಳನ್ನು ಶೆಲ್ ಕಂಪೆನಿಗಳು ಮತ್ತು ರಿಯಲ್ ಎಸ್ಟೇಟ್‌ಗಳನ್ನು ಬಳಸಿ ವಂಚಿಸುವ ಮೂಲಕ ಶೇಕಡಾ 43, ಸರಕಾರಿ ಅಧಿಕಾರಿಗಳಿಗೆ ಮತ್ತು ಉದ್ಯೋಗಿಗಳಿಗೆ ಲಂಚ ನೀಡುವ ಮೂಲಕ ಶೇಕಡಾ 31, ಮಾದಕ ದ್ರವ್ಯದ ಮೂಲಕ ಶೇಕಡಾ 6.5 ಮತ್ತು ಶಸ್ತ್ರಾಸ್ತ್ರದ ಮೂಲಕ ಶೇಕಡಾ 4.5 ಕಪ್ಪುಹಣ ಉತ್ಪತ್ತಿಯಾಗಿದೆ. ಶೆಲ್ ಕಂಪೆನಿಗಳ ಮೂಲಕವೇ ಅತೀಹೆಚ್ಚು ವಂಚನೆಗಳು ನಡೆದಿವೆ ಎಂದು ತಿಳಿಸಿರುವ ವರದಿಯು ಅವುಗಳ ಮೂಲಕ ಯಾವ ರೀತಿ ಕಪ್ಪುಹಣವನ್ನು ಬಿಳಿ ಮಾಡಲಾಗುತ್ತಿತ್ತು ಎಂಬುದರ ಬಗ್ಗೆ ಸಂಪೂರ್ಣ ವಿವರ ನೀಡಿದೆ. ಇಂತಹ ಬಹುತೇಕ ಕಂಪೆನಿಗಳ ನಿರ್ದೇಶಕರು ನಕಲಿಯಾಗಿದ್ದು ಅದನ್ನು ನಡೆಸುವವರ ಆದೇಶದಂತೆ ಬ್ಯಾಲೆನ್ಸ್ ಶೀಟ್‌ಗಳಿಗೆ ಮತ್ತು ಇತರ ದಾಖಲೆಗಳಿಗೆ ಸಹಿ ಹಾಕುತ್ತಾರೆ. ಇಂಥಾ ಕಂಪೆನಿಗಳ ವಿಳಾಸ ನಕಲಿಯಾಗಿರುತ್ತದೆ ಅಥವಾ ಒಂದು ಕೋಣೆಯಲ್ಲಿ ಕಾರ್ಯಾಚರಿಸುತ್ತವೆ ಎಂದು ವರದಿ ತಿಳಿಸುತ್ತದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X