Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ13 Nov 2017 12:30 AM IST
share
ಓ ಮೆಣಸೇ..

ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಬಹುಶಃ ಅದು 150ನೇ ಸ್ಥಾನವಾಗುವ ಸಾಧ್ಯತೆಯಿದೆ.

---------------------
ಬಿಜೆಪಿಯಲ್ಲಿ ಕೆಜೆಪಿಯಿಂದ ಬಂದವರಿಗೆ ಮಾತ್ರ ಮಾನ್ಯತೆ ನೀಡಲಾಗುತ್ತಿದೆ - ಸೊಗಡು ಶಿವಣ್ಣ , ಮಾಜಿ ಸಚಿವ

ಯಡಿಯೂರಪ್ಪ ಅವರು ಕೆಜೆಪಿಯಿಂದಲೇ ಬಂದವರಲ್ಲವೇ?

---------------------
ಪಾಪಗಳ ಪ್ರಾಯಶ್ಚಿತಕ್ಕೆ ಬಿಜೆಪಿ ರ್ಯಾಲಿ - ಸಿದ್ದರಾಮಯ್ಯ, ಮುಖ್ಯಮಂತ್ರಿ

ಮಾಡಿದ ಪಾಪಗಳಿಗೆ ಪ್ರಾಯಶ್ಚಿತ ಮಾಡದೇ ಇರುವವರಿಗಿಂತ ವಾಸಿ.

---------------------
ಒಬ್ಬ ಬಡ ತಂದೆಯ ಮಗ (ಮೋದಿ) ಈ ದಿನ ನಿಮ್ಮ ಮುಂದೆ ನಿಂತಿದ್ದಾನೆ ಎಂದರೆ ಅದು ಪ್ರಜಾಪ್ರಭ್ವುತದ ಶಕ್ತಿ - ನರೇಂದ್ರ ಮೋದಿ, ಪ್ರಧಾನಿ

ಆ ಶಕ್ತಿಯನ್ನು ವಿಫಲಗೊಳಿಸುವ ಸಂಚಿನ ಪಾಲುದಾರರು ನೀವು ಎನ್ನುವುದನ್ನು ಮರೆಯದಿರಿ.

---------------------
ಬಹುತೇಕ ದೇಶಗಳು ಭಾರತವೇ ಜಗತ್ತನ್ನು ಮುನ್ನಡೆಸಬೇಕೆಂದು ಬಯಸುತ್ತಿವೆ - ಮೋಹನ್ ಭಾಗವತ್,ಆರೆಸ್ಸೆಸ್ ಮುಖ್ಯಸ್ಥ

ತಾವು ಚಡ್ಡಿ ಕಳಚಿ ಪ್ಯಾಂಟು ಧರಿಸಿದ ಪರಿಣಾಮ ಇರಬಹುದೇ?
---------------------

ಬಿಜೆಪಿ ಗೆಲ್ಲುವ ಪಕ್ಷವಾದ್ದರಿಂದ ಟಿಕೆಟ್ ಆಕಾಂಕ್ಷಿಗಳು ಹೆಚ್ಚು - ಶೋಭಾ ಕರಂದ್ಲಾಜೆ, ಸಂಸದೆ

ದೋಚುವ ಪಕ್ಷವಾಗಿರುವುದರಿಂದ ಎನ್ನುವುದು ಯಡಿಯೂರಪ್ಪ ಅಭಿಮಾನಿಗಳ ಮಾತು.

---------------------
ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದ್ದು ಸ್ವಾತಂತ್ರಕ್ಕಲ್ಲ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

ಬ್ರಿಟಿಷರ ವಿರುದ್ಧ ಆರೆಸ್ಸೆಸ್ ಹೋರಾಡದೇ ಇದ್ದುದು ಯಾವುದಕ್ಕೆ ಎನ್ನುವುದನ್ನು ವಿವರಿಸಬಹುದೇ?
---------------------

ನಾನು ಕೇಂದ್ರ ಸರಕಾರದ ಏಜಂಟ್ ಅಲ್ಲ - ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ

ತಮ್ಮನ್ನು ನೋಡಿದಾಗ ಎಲ್‌ಐಸಿ ಏಜೆಂಟ್ ತರ ಕಾಣೋದಿಲ್ಲ.

---------------------
ಉತ್ತಮ ಆಡಳಿತ ನೀಡುತ್ತೇನೆಂದು ರಕ್ತದಲ್ಲಿ ಬರೆದುಕೊಡುವೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಅಮಾಯಕ ಜನರ ರಕ್ತದಲ್ಲೇ?
---------------------
 ತನ್ನನ್ನು ಮತ್ತು ತನ್ನ ಮಿತ್ರದೇಶಗಳನ್ನು ರಕ್ಷಿಸಿಕೊಳ್ಳಲು ತನ್ನ ಸೇನೆ ಸಂಪೂರ್ಣ ಸಿದ್ಧವಾಗಿದೆ - ಡೊನಾಲ್ಡ್ ಟ್ರಂಪ್,ಅಮೆರಿಕ ಅಧ್ಯಕ್ಷ

 ಉಳಿದವರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಮಾತ್ರ ಭಯೋತ್ಪಾದನೆಯಾಗುತ್ತದೆ ಅಲ್ಲವೇ?
---------------------
ನೋಟು ನಿಷೇಧದಿಂದಾಗಿ ದೇಶದಲ್ಲಿ ನಕ್ಸಲ್ ಹಾಗೂ ಭಯೋತ್ಪಾದನೆ ಚಟುವಟಿಕೆ ಕಡಿಮೆಯಾಗಿದೆ - ರಾಜನಾಥ್‌ಸಿಂಗ್, ಕೇಂದ್ರ ಸಚಿವ

ಯಾವ ದೇಶದಲ್ಲಿ?

---------------------

ಶ್ರೀಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಕಟ್ಟುಕಥೆಯಲ್ಲ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

ಕನಕದಾಸರಿಗೆ ದೇವರ ದರ್ಶನಕ್ಕೆ ಪ್ರವೇಶ ನಿರಾಕರಿಸಿದ್ದು ಕೂಡ.

---------------------

ನೋಟು ಅಮಾನ್ಯದಿಂದ ನಾನೂ ಕಷ್ಟದಲ್ಲಿದ್ದೇನೆ - ಪ್ರಮೋದ್ ಮಧ್ವರಾಜ್, ಸಚಿವ

ನೋಟು ಅಮಾನ್ಯ ಮಾಡಿರುವುದು ಟಿಪ್ಪುಸುಲ್ತಾನ್ ಎಂದು ಭಾವಿಸಿ ಟಿಪ್ಪು ಜಯಂತಿಯನ್ನು ಬಹಿಷ್ಕರಿಸಿದಿರಾ?

---------------------

ನನಗೆ ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ಬಿದ್ದಿಲ್ಲ - ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ

ಅಂತಹ ಕನಸು ಬಿದ್ದರೆ ಅದನ್ನು ಭಗ್ನಗೊಳಿಸಲು ಬಿಜೆಪಿಯೊಳಗೆ ಕಾಯುತ್ತಿದ್ದಾರೆ.

---------------------

ಕರ್ನಾಟಕ ಪ್ರಾಕೃತ ಭಾಷೆಯ ತವರು - ವೀರಪ್ಪ ಮೊಯ್ಲಿ, ಸಂಸದ

ಪ್ರಾಕೃತ ಭಾಷೆಯಲ್ಲಿ ಮಹಾಕಾವ್ಯ ಬರೆಯುವ ಬೆದರಿಕೆಯೇ?

  ---------------------

ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ನಿಮ್ಮ ಮಾತು ಕೇಳಿ ರೈತರು ಸಾಲ ಮಾಡಲು ಬ್ಯಾಂಕ್ ಕಡೆಗೆ ಧಾವಿಸಿದ್ದಾರೆ.

---------------------

ನಾನು ಕೆಲ ಕಂಪೆನಿಗಳ ವಸ್ತುಗಳನ್ನು ಬಳಸುವುದಿಲ್ಲ - ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡದ ನಾಯಕ

ಬಹುಶಃ ನೀವು ಯಾವೆಲ್ಲ ಜಾಹೀರಾತುಗಳಲ್ಲಿ ಭಾಗವಹಿಸಿದ್ದೀರೋ ಆ ಕಂಪೆನಿಗಳ ವಸ್ತುಗಳಿರಬೇಕು.

---------------------

ಐಟಿ ದಾಳಿ ಮೂಲಕ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ - ಪಿ.ಚಿದಂಬರಂ, ಕೇಂದ್ರದ ಮಾಜಿ ಸಚಿವ

ಕನಿಷ್ಠ ಐಟಿ ದಾಳಿಯ ಕಾರಣದಿಂದಲಾದರೂ ಬಾಯಿ ತೆರೆದಿರಲ್ಲ, ಸಂತೋಷ.

---------------------

ಯಡಿಯೂರಪ್ಪ ಜೊತೆ ಕೆಲ ದಲಿತ ನಾಯಕರು ಇರುವುದು ದುರ್ದೈವ - ಆರ್.ಬಿ.ತಿಮ್ಮಾಪುರ, ಸಚಿವ

ಅದು ಯಡಿಯೂರಪ್ಪರ ದುರ್ದೈವ.

---------------------

ನನಗೆ ಪಕ್ಷಕ್ಕಿಂತ ಜನ ಮುಖ್ಯ - ಆನಂದ್ ಸಿಂಗ್, ಬಿಜೆಪಿ ಶಾಸಕ

ಜನರಿಗೆ ನಿಮ್ಮ ಪಕ್ಷಕ್ಕಿಂತ ಅವರ ನೆಮ್ಮದಿ ಮುಖ್ಯ.

---------------------

ದೇವೇಗೌಡರ ನಂತರದಲ್ಲಿ ನನ್ನ ಜೀವ ಇರುವವರೆಗೂ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವುದಿಲ್ಲ  - ಎಚ್.ಡಿ.ರೇವಣ್ಣ , ಶಾಸಕ

ಜೆಡಿಎಸ್‌ನೊಳಗಿದ್ದೇ ಕಾಂಗ್ರೆಸ್ ಪರ ಕೆಲಸ ಮಾಡುತ್ತೀರಿ ಎಂದಾಯಿತು.
---------------------

ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದುಗೊಳಿಸಲಾಗುವುದು - ಶ್ರೀರಾಮುಲು, ಸಂಸದ

ಜಯಂತಿಯ ಜೊತೆಗೆ ಟಿಪ್ಪು ಇರುವುದರಿಂದ ಇದು ಲವ್ ಜಿಹಾದ್ ಎಂದು ತಪ್ಪು ತಿಳಿದುಕೊಂಡಿದ್ದಾರೆ.
---------------------

ಕೆ.ಸಿ.ವೇಣುಗೋಪಾಲ್ ಹಾಗೂ ವಿಶ್ವನಾಥನ್‌ರಂತಹ ಅತ್ಯಾಚಾರಿಗಳು ಕರ್ನಾಟಕಕ್ಕೆ ಬರುವುದು ಬೇಡ - ಅರವಿಂದ ಲಿಂಬಾವಳಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ

ತಮ್ಮ ಪಕ್ಷದಲ್ಲಿರುವ ಅತ್ಯಾಚಾರಿಗಳೇ ಕರ್ನಾಟಕಕ್ಕೆ ಸಾಕಷ್ಟಾಯಿತು.

---------------------

ಶೇ.99 ರಾಜಕಾರಣಿಗಳು ಢೋಂಗಿಗಳು - ಬಾಬಾ ರಾಮ್‌ದೇವ್, ಯೋಗ ಗುರು

ಢೋಂಗಿ ಬಾಬಾಗಳು ಎಷ್ಟು ಶೇಕಡ ಇದ್ದಾರೆ ಎನ್ನುವ ಅಂಕಿಅಂಶವನ್ನೂ ನೀಡಬಾರದೇ?

share
ಪಿ.ಎ.ರೈ
ಪಿ.ಎ.ರೈ
Next Story
X