Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದಕ್ಷಿಣ ಕರ್ನಾಟಕದ ಸಾಂಪ್ರದಾಯಿಕ ಆಟಿಕೆಗಳ...

ದಕ್ಷಿಣ ಕರ್ನಾಟಕದ ಸಾಂಪ್ರದಾಯಿಕ ಆಟಿಕೆಗಳ ಅದ್ಭುತ ಪ್ರಪಂಚ

ಪ್ರಾಚೀನ ಆಟಿಕೆಗಳ ಮಕ್ಕಳ ವಿಶಿಷ್ಟ ವಸ್ತುಸಂಗ್ರಹಾಲಯ

ನಝೀರ್ ಪೊಲ್ಯನಝೀರ್ ಪೊಲ್ಯ14 Nov 2017 9:31 PM IST
share
ದಕ್ಷಿಣ ಕರ್ನಾಟಕದ ಸಾಂಪ್ರದಾಯಿಕ ಆಟಿಕೆಗಳ ಅದ್ಭುತ ಪ್ರಪಂಚ

ಮಣಿಪಾಲ, ನ.14: ಪ್ಲಾಸ್ಟಿಕ್ ಯುಗಕ್ಕೆ ಮೊದಲಿನ ಲೋಹದ ಆಟಿಕೆಗಳು, ನೇಪಥ್ಯಕ್ಕೆ ಸೇರಿದ ಸಾಂಪ್ರದಾಯಿಕ ಆಟಿಕೆ ವಸ್ತುಗಳು, ಕೌಶಲ್ಯ ಬೆಳವಣಿಗೆಯ ವಿವಿಧ ರೀತಿಯ ಮಕ್ಕಳ ಆಟಗಳು ಸೇರಿದಂತೆ ವಿವಿಧ ರೀತಿಯ ಮಕ್ಕಳ ಆಟಿಕೆಗಳ ಸಂಗ್ರಹಗಳನ್ನೊಳಗೊಂಡ ವಿಶಿಷ್ಟ ವಸ್ತು ಸಂಗ್ರಹಾಲಯವೊಂದು ಇದೀಗ ಮಕ್ಕಳಿಗಾಗಿ ಮಣಿಪಾಲ ಅನಂತನಗರದಲ್ಲಿರುವ ಹಸ್ತಶಿಲ್ಪ ಸಂಸ್ಕೃತಿಯ ಮನೆ ಯಲ್ಲಿ ತೆರೆದುಕೊಂಡಿವೆ.

ಮಣಿಪಾಲದ ಹಸ್ತಶಿಲ್ಪ ಸಂಸ್ಕೃತಿ ಗ್ರಾಮದ ಸಂಸ್ಥಾಪಕ ಕಾರ್ಯದರ್ಶಿ ವಿಜಯನಾಥ ಶೆಣೈ ಅವರ ಪ್ರಮುಖ ಯೋಜನೆಯಾದ ಹಸ್ತಶಿಲ್ಪ ಸಂಸ್ಕೃತಿ ಮನೆಯಲ್ಲಿ ಈ ವಸ್ತು ಸಂಗ್ರಹಾಲಯವನ್ನು ಆರಂಭಿಸಲಾಗಿದ್ದು, ಸುಮಾರು 15 ವರ್ಷಗಳ ಕಾಲ ಮುಚ್ಚಿದ್ದ ಈ ಮನೆಯನ್ನು ಮಕ್ಕಳ ಆಕರ್ಷಣೀಯ ಕೇಂದ್ರ ವಾಗಿ ಪುನರ್ ನವೀಕರಿಸಲಾಗಿದೆ.

ಸಂಸ್ಕೃತಿ ಮನೆ ಇತಿಹಾಸ: ವಿಜಯನಾಥ ಶೆಣೈ ತನ್ನ ಕುಟುಂಬದೊಂದಿಗೆ ವಾಸಿಸಲು ಈ ಹಸ್ತಶಿಲ್ಪ ಸಂಸ್ಕೃತಿಯ ಮನೆಯನ್ನು 1985-90ರಲ್ಲಿ ನಿರ್ಮಿಸಿ ದ್ದರು. ಅವಿಭಜಿತ ದ.ಕ. ಜಿಲ್ಲೆಯ ಬೀಳುವ ಸ್ಥಿತಿಯಲ್ಲಿದ್ದ ಸುಮಾರು 60 ವಿವಿಧ ರೀತಿಯ ಮನೆಗಳ ಪಾರಂಪರಿಕ ಪರಿಕರಗಳನ್ನು ಈ ಮನೆಯಲ್ಲಿ ಜೋಡಿಸಿ ಜನಾಕರ್ಷಣೇಯ ಕೇಂದ್ರವನ್ನಾಗಿಸಿದರು. ಈ ಮನೆ ಅವರ ಮೊದಲ ಪ್ರಯೋಗ ಸ್ಥಳವಾಗಿತ್ತು. ಈ ಮನೆಯಲ್ಲಿ ಅವರು ಸಂಗ್ರಹಿಸಿದ ಪ್ರಾಚಿನ ವಸ್ತುಗಳನ್ನು ರಕ್ಷಿಸಿ ಪ್ರದರ್ಶಿಸಿದ್ದರು. ಆ ಬಳಿಕ ಅವರು ಮಣ್ಣಿಪಳ್ಳ ಪಕ್ಕದಲ್ಲಿ ‘ಹೆರಿಟೇಜ್ ವಿಲೇಜ್’ ಎಂಬ ಅದ್ಭುತ ಪ್ರಪಂಚವೊಂದನ್ನು ನಿರ್ಮಿಸಿದ್ದರು.

ಕ್ರಮೇಣ ಹಸ್ತಶಿಲ್ಪ ಎಂಬ ಈ ವಿಶಿಷ್ಟ ಮನೆಯನ್ನು ನೋಡಲು ಕುತೂಹಲ ದಿಂದ ಬರುವವರ ಸಂಖ್ಯೆ ಹೆಚ್ಚಾಯಿತು. ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಮನೆ ಹೆಸರು ಗಳಿಸಿತು. ಇದರಿಂದ ಶೆಣೈ ಮತ್ತು ಅವರ ಕುಟುಂಬದವರ ಖಾಸಗಿತನಕ್ಕೆ ತೊಂದರೆ ಉಂಟಾಯಿತು. ಅದಕ್ಕೆ ಅವರು ನಿರ್ಮಿಸಿದ ಕೆಲವೇ ದಿನಗಳಲ್ಲಿ ಆ ಮನೆಯನ್ನು ಟ್ರಸ್ಟ್‌ಗೆ ಹಸ್ತಾಂತರಿಸಿ ಬೇರೆ ಮನೆಯಲ್ಲಿ ವಾಸ ಮಾಡಿದರು.

ಕೇವಲ ಮನೆಗಳ ಅವಶೇಷಗಳನ್ನು ಸಂಗ್ರಹಿಸುವ ಬದಲು ಇಡೀ ಮನೆ ಗಳನ್ನೇ ಸ್ಥಳಾಂತರಿಸಿ ನಿರ್ಮಿಸುವ ಯೋಜನೆ ಹಾಕಿಕೊಂಡ ಶೆಣೈ, ಸರಕಾರ ದಿಂದ ಮಣಿಪಾಲದಲ್ಲಿ ಜಾಗ ಪಡೆದುಕೊಂಡು ಅಲ್ಲಿ ಹಸ್ತಶಿಲ್ಪ ಸಂಸ್ಕೃತಿ ಗ್ರಾಮ ವನ್ನು ಹುಟ್ಟು ಹಾಕಿದರು. ಅನಂತರ ಇವರು ಬಹುತೇಕ ತಮ್ಮ ಶ್ರಮವನ್ನು ಈ ಗ್ರಾಮ ನಿರ್ಮಿಸಲು ವ್ಯಯಿಸಿದರು. ಇದರಿಂದ ಹಸ್ತಶಿಲ್ಪ ಸಂಸ್ಕೃತಿ ಮನೆಯು ಸುಮಾರು 15-18 ವರ್ಷಗಳ ಕಾಲ ಮುಚ್ಚಲ್ಪಟ್ಟಿತ್ತು.

ಇದೀಗ ಮತ್ತೆ ಈ ಮನೆಯನ್ನು ಪುನರ್ ನವೀಕರಿಸಿ, ಹಸ್ತಶಿಲ್ಪ ಸಂಸ್ಕೃತಿ ಗ್ರಾಮದಲ್ಲಿದ್ದ ಮಕ್ಕಳಿಗೆ ಸಂಬಂಧಿಸಿದ ಆಟಿಕೆ ವಸ್ತುಗಳ ಸಂಗ್ರಹವನ್ನು ಇಲ್ಲಿಗೆ ವರ್ಗಾಯಿಸಿ ವಸ್ತುಸಂಗ್ರಹಾಲಯದ ಪರಿಕಲ್ಪನೆಯನ್ನು ಸಾಕಾರಗೊಳಿಸಲಾಯಿತು ಎನ್ನುತ್ತಾರೆ ಹಸ್ತಶಿಲ್ಪ ಟ್ರಸ್ಟ್‌ನ ಟ್ರಸ್ಟಿ ಹರೀಶ್ ಪೈ.

ಅದ್ಭುತ ಮಕ್ಕಳ ಪ್ರಪಂಚ: ಇಲ್ಲಿರುವ ಬಹುತೇಕ ಆಟಿಕೆ ವಸ್ತುಗಳು ದಕ್ಷಿಣ ಕರ್ನಾಟಕದ ವಿವಿಧ ಭಾಗಗಳಲ್ಲಿ ಬಳಕೆಯಾಗುತ್ತಿದ್ದ ಸಾಂಪ್ರದಾಯಿಕ ಆಟಿಕೆ ಗಳಾಗಿವೆ. ಪ್ರಾಣಿ, ಪಕ್ಷಿಗಳ ಸಣ್ಣ ಗ್ರಾತದ ತಾಮ್ರದ ಆಟಿಕೆಗಳು, ಮಕ್ಕಳ ಮನೆಯಾಟದ ಅಡುಗೆ ಪಾತ್ರೆಯ ತಾಮ್ರದ ಪರಿಕರಗಳು, ಕೈಪಂಪ್, ಗಿಳಿಪಂಜರ, ಫ್ಯಾನು, ಪಾರಂಪರಿಕ ಮಕ್ಕಳ ಬಟ್ಟೆ ಬರೆಗಳ ಸಂಗ್ರಹವು ಅತ್ಯಾಕರ್ಷಣೆಯಾಗಿದೆ.

ಇಲ್ಲಿರುವ ಆಟಿಕೆಗಳು ಕೆಲವು ಮಕ್ಕಳ ಕೌಶಲ್ಯದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಮೋಟಾರು, ನರವೈಜ್ಞಾನಿಕ ಮತ್ತು ಅರಿವಿನ ಕೌಶಲ್ಯವನ್ನು ಬೆಳೆಸುವ ಆಟಿಕೆಗಳು ಅದ್ಭುತವಾಗಿವೆ. ದಕ್ಷಿಣ ಕರ್ನಾಟಕದಲ್ಲಿ ಕಂಡು ಬರುವ ವಿವಿಧ ಅಪರೂಪದ ಆಟಗಳಾದ ಪಂಚ ಕೆಳಿಯ, ಚದುರಂಗ, ಹಾವು ಏಣಿ ಆಟ, ಹುಲಿಯನ್ನು ಹಿಡಿಯುವ ಹುಲಿ ಕಟ್ಟು ಆಟ, ಹಸು ಚಿರತೆ ಆಟ, ಅನ್ಯ ಕಟ್ಟು, ದಶಗುಟ್ಟ ಆಟ, ಸಾಂಪ್ರಾದಾಯಿಕ ಮಣೆಯಾಟಗಳ ಸಂಗ್ರಹವೇ ಇಲ್ಲಿದೆ.

ಅಲ್ಲದೆ ಮಕ್ಕಳ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಪಂಚದ ಬೇರೆ ಬೇರೆ ಭಾಗಗಳ ಆಕರ್ಷಕ ಆಟಿಕೆಗಳು ಕೂಡ ಇಲ್ಲಿ ಇಡಲಾಗಿದೆ. ಚೆನ್ನಪಟ್ಟಣದ ಮರದ ಆಟಿಕೆಗಳು ಗಮನ ಸೆಳೆಯುತ್ತವೆ. ಇಲ್ಲಿರುವ ಬಹುತೇಕ ಆಟಿಕೆಗಳು ಇಂದಿನ ಆಧುನಿಕ ಯುಗದಲ್ಲಿ ನೇಪಥ್ಯಕ್ಕೆ ಸೇರಿವೆ. 30ವರ್ಷಗಳ ಹಿಂದೆ ಮಕ್ಕಳ ಚಿತ್ರಕಲೆ ಸ್ಪರ್ಧೆಯಲ್ಲಿ ಬಿಡಿಸಿದ ಗಣೇಶನ ಕಲಾಕೃತಿಗಳನ್ನು ಈವರೆಗೆ ಸಂಗ್ರಹಿಸಿ ಇಡಲಾಗಿದೆ. ಅದೇ ರೀತಿ ಇಲ್ಲಿ ಹಳೆ ವಸ್ತುಗಳನ್ನು ಜೋಡಿಸಿ ಅಡುಗೆ ಮನೆಯ ಕಲ್ಪನೆಯನ್ನು ನಿರ್ಮಿಸಲಾಗಿದೆ.

ಚಿತ್ತಾಕರ್ಷಕವಾಗಿ ಕೆತ್ತಲ್ಪಟ್ಟ ಮರದ ಸುಂದರ ತೊಟ್ಟಿಲು ಕೂಡ ಇಲ್ಲಿವೆ. ಈ ಅಭೂತಪೂರ್ವ ಮಕ್ಕಳ ಆಟಿಕೆ ವಸ್ತುಗಳ ಸಂಗ್ರಹಾಲಯವು ಭಾರತದಲ್ಲೇ ಮೊದಲ ಪ್ರಯತ್ನವಾಗಿದೆ ಎಂದು ವಿಜಯನಾಥ್ ಶೆಣೈ ಅವರ ಮಗಳು ಅನುರೂಪಾ ಶೆಣೈ ಮಾಹಿತಿ ನೀಡಿದರು.

ವಾರದಲ್ಲಿ ಮೂರು ದಿನ ವೀಕ್ಷಣೆ

ಮಕ್ಕಳ ಆಟಿಕೆಗಳ ವಸ್ತು ಸಂಗ್ರಹಾಲಯವು ವಿಶೇಷವಾಗಿ ಶಾಲಾ ಮಕ್ಕಳಿಗೆ ಮೀಸಲಿರಿಸಿದ್ದು, ಈ ತಿಂಗಳನಿಂದ ಫೆಬ್ರವರಿ ತಿಂಗಳ ಕೊನೆಯವರೆಗೆ ವಾರದಲ್ಲಿ ಮಂಗಳವಾರ, ಗುರುವಾರ ಹಾಗೂ ಶನಿವಾರ ಇದು ತೆರೆದಿರುತ್ತದೆ.

ಪ್ರತಿಯೊಬ್ಬರಿಗೆ 50ರೂ. ಪ್ರವೇಶ ಶುಲ್ಕವನ್ನು ವಿಧಿಸಲು ತೀರ್ಮಾನಿಸಲಾಗಿದೆ. ಸರಕಾರಿ ಶಾಲೆಯ ಮಕ್ಕಳಿಗೆ ರಿಯಾಯಿತಿ ನೀಡಲಾಗುವುದು. ಇದರ ಉಸ್ತುವಾರಿಯನ್ನು ವಿಜಯನಾಥ್ ಶೆಣೈ ಅವರ ಮಗಳು ಅನುರೂಪಾ ಶೆಣೈ ವಹಿಸಿಕೊಳ್ಳಲಿದ್ದಾರೆ. ಮೊಬೈಲ್ ಸಂಖ್ಯೆ- 9483634576ಗೆ ಕರೆ ಮಾಡಿ ಮುಂಗಡ ಕಾಯ್ದಿರಿಸುವಿಕೆಗೆ ಅವಕಾಶ ನೀಡಲಾಗಿದೆ.

ಇತಿಹಾಸ ಹೇಳುವ ಸಂಗ್ರಹಾಲಯ: ಡಿಸಿ
 ಮಕ್ಕಳ ದಿನಾಚರಣೆ ದಿನವಾದ ಇಂದು ಈ ವಸ್ತುಸಂಗ್ರಹಾಲಯವನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉದ್ಘಾಟಿಸಿ, ಈ ಸಂಗ್ರಹಾಲಯದ ಕಲ್ಪನೆ ಅದ್ಭುತವಾಗಿದೆ. ಇಲ್ಲಿರುವ ಪ್ರತಿಯೊಂದು ಕೆತ್ತನೆ ಕೂಡ ಇತಿಹಾಸವನ್ನು ಹೇಳುತ್ತದೆ. ಇದರಿಂದ ಮಕ್ಕಳು ಇತಿಹಾಸವನ್ನು ಅರಿತುಕೊಂಡು ತಮ್ಮ ಜ್ಞಾನ ವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಇಂದು ಮೊಬೈಲ್, ವಿಡಿಯೋ ಗೇಮ್‌ಗಳಲ್ಲಿ ಮುಳುಗಿರುವ ಮಕ್ಕಳಿಗೆ ಇಲ್ಲಿರುವ ವಿವಿಧ ಸಂಪ್ರದಾಯಿಕ ಆಟಗಳ ಪರಿಚಯ ವಾಗುತ್ತದೆ ಎಂದು ತಿಳಿಸಿದರು.

share
ನಝೀರ್ ಪೊಲ್ಯ
ನಝೀರ್ ಪೊಲ್ಯ
Next Story
X