Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಬೊಗಸೆಯಲ್ಲಿ ಬೆಳದಿಂಗಳು

ಬೊಗಸೆಯಲ್ಲಿ ಬೆಳದಿಂಗಳು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯ-ಕಾರುಣ್ಯ20 Nov 2017 12:13 AM IST
share
ಬೊಗಸೆಯಲ್ಲಿ ಬೆಳದಿಂಗಳು

ವ್ಯಕ್ತಿ ಚಿತ್ರವೆಂದರೆ ವ್ಯಕ್ತಿಯ ಪರಿಚಯವೆಂಬ ಚೌಕಟ್ಟಿಗೆ ಸೀಮಿತಗೊಳಿಸಿ ಆ ಪ್ರಾಕಾರವನ್ನು ಕಿರಿದುಗೊಳಿಸಲಾಗಿದೆ. ಇವುಗಳ ನಡುವೆಯೂ ಈ ಪ್ರಾಕಾರವನ್ನು ತಮ್ಮ ಕೈಚಳಕದಿಂದ ಹಿಗ್ಗಿಸಿದವರಿದ್ದಾರೆ. ಜಿ. ಎನ್. ರಂಗನಾಥ ರಾವ್ ಅವರ ‘ಬೆಳದಿಂಗಳು-ಸಾಹಿತ್ಯ ಸಲ್ಲಾಪ’ ಓದುವಾಗ ಈ ಅನುಭವ ನಮ್ಮದಾಗುತ್ತದೆ. ವ್ಯಕ್ತಿ ಪರಿಚಯವೆನ್ನುವುದು ವ್ಯಕ್ತಿಯ ಒಳಗಿನ ವ್ಯಕ್ತಿತ್ವವನ್ನು ತೆರೆದಿಡುವುದು ಎನ್ನುವುದು ಇಲ್ಲಿರುವ ಪ್ರತೀ ಬರಹಗಳಿಂದ ನಮ್ಮ ಅರಿವಿಗೆ ತಂದುಕೊಳ್ಳಬಹುದು. ಸುಮಾರು 47 ವ್ಯಕ್ತಿಗಳ ಕುರಿತಂತೆ ಇಲ್ಲಿ ಪರಿಚಯವಿದೆ. ಇದು ಕೇವಲ ಹಿರಿಯರಿಗಷ್ಟೇ ಸಂಬಂಧಿಸಿದ್ದಲ್ಲ. ಸಾಧನೆಗೆ ಹಿರಿಕಿರಿಯ ಭೇದವಿಲ್ಲ ಎನ್ನುವಂತೆ ವಿವಿಧ ತಲೆಮಾರುಗಳ ಸಾಧಕರು ಈ ಕೃತಿಯಲ್ಲಿ ಒಂದು ಗೂಡಿದ್ದಾರೆ.

ವ್ಯಕ್ತಿಯನ್ನು ದೂರದಿಂದ ನೋಡಿ, ಆತನ ಬದುಕನ್ನು ಅಧ್ಯಯನ ಮಾಡಿ ಪರಿಚಯ ಕಟ್ಟಿಕೊಡುವುದು ಒಂದು ಬಗೆ. ಇಲ್ಲಿ ಜಿ. ಎನ್. ರಂಗನಾಥ ರಾವ್ ಅವರು ಹಲವು ವ್ಯಕ್ತಿಗಳೊಂದಿಗೆ, ಸಾಧಕರೊಂದಿಗೆ ಒಡನಾಡಿದವರು. ಅವರೊಂದಿಗೆ ಕೂಡಿ ಬೆರೆದವರು. ಆದುದರಿಂದ, ಪರಿಚಯ ಒಳಗಿನದಾಗಿ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಅವರ ಜೊತೆಗಿನ ಒಡನಾಟ, ವಿಶೇಷ ಅನುಭವಗಳು ಇವನ್ನೆಲ್ಲ ಇಟ್ಟುಕೊಂಡು ವ್ಯಕ್ತಿಯನ್ನು ಕಡೆದುನಿಲ್ಲಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಒಂದು ರೀತಿ, ಕಿರಿದರಲ್ಲಿ ದೊಡ್ಡದನ್ನು ಹೇಳುವ ಪ್ರಯತ್ನ ಇದು. ಕೆಲವು ಘಟನೆಗಳ ಮೂಲಕವೇ ಒಬ್ಬ ಸಾಧಕನ ವ್ಯಕ್ತಿತ್ವ ನಮ್ಮಿಳಗೆ ವಿಶಾಲವಾಗಿ ಹರಡುತ್ತಾ ಹೋಗುತ್ತದೆ. ಬಿಡಿ ಬಿಡಿ ಚಿತ್ರಣಗಳು ಕೊಡುವ ಒಳನೋಟಗಳು ಅವರ ಕುರಿತಂತೆ ಇನ್ನಷ್ಟು ಓದುವ ಆಸೆಯನ್ನು ಬಿತ್ತುತ್ತದೆ. ಕಥಾ ಪ್ರಶಸ್ತಿಯ ನೆಪದಲ್ಲಿ ಅನಂತಮೂರ್ತಿ, ಜಯಂತರನ್ನು ಕಟ್ಟಿಕೊಟ್ಟರೆ, ಅರವತ್ತರ ಹಿನ್ನೆಲೆಯಲ್ಲಿ ಸುಮತೀಂದ್ರ ನಾಡಿಗರನ್ನು ಕುತೂಹಲಕರವಾಗಿ ನಿರೂಪಿಸುತ್ತಾರೆ. ವಿಮರ್ಶೆಯ ಹಾದಿಯಲ್ಲಿ ಪರಿಮಳದ ಲಹರಿಯನ್ನು ಹರಡಿದ ನರಹಳ್ಳಿ, ಕವಿ ನಿಸಾರ್ ಅಹಮದ್ ಅವರ ಬದುಕು ಕಾವ್ಯವೂ ಲವಲವಿಕೆಯಿಂದ ಓದಿಸಿಕೊಂಡು ಹೋಗುತ್ತದೆ. ಎಚ್ಚೆಸ್ಕೆ, ಶೇಷಗಿರಿ ರಾವ್, ಚಂದ್ರಶೇಖರ ಪಾಟೀಲ, ಹಂಪನಾಗರಾಜ್, ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ, ಶಾಂತರಸ, ಜಿ. ವೆಂಕಟಸುಬ್ಬಯ್ಯ, ಶಾಂತರಸ, ಎಸ್. ದಿವಾಕರ್, ಗಿರಡ್ಡಿ ಗೋವಿಂದರಾಜ್, ಶಿವಮೊಗ್ಗ ಸುಬ್ಬಣ್ಣ, ಲಂಕೇಶ್, ಆರ್. ಕೆ. ನಾರಾಯಣ್, ಶಾಂತವೇರಿ, ಪ್ರೊ. ಯು. ಆರ್. ರಾವ್....ಪುಟ ತೆರೆದಂತೆಯೇ ಬೆರಳ ತುದಿಗೆ ಸಾಧಕರ ಬದುಕು ಭಾವ ಅಂಟಿಕೊಳ್ಳುತ್ತದೆೆ. ಲವಲವಿಕೆಯ ನಿರೂಪಣೆ ಎಲ್ಲ ವ್ಯಕ್ತಿ ಚಿತ್ರಣಗಳ ಹೆಗ್ಗಳಿಕೆಯಾಗಿದೆ.

ಸಪ್ನ ಬುಕ್ ಹೌಸ್ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 300. ಮುಖಬೆಲೆ 220.

share
-ಕಾರುಣ್ಯ
-ಕಾರುಣ್ಯ
Next Story
X