Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬೇಕರಿ ಕಾರ್ಮಿಕನ ಪುತ್ರಿಯ ಕನಸು ನನಸಿಗೆ...

ಬೇಕರಿ ಕಾರ್ಮಿಕನ ಪುತ್ರಿಯ ಕನಸು ನನಸಿಗೆ ಅಡ್ಡಿಯಾಗದ ಹಿಜಾಬ್

ಪೈಲಟ್ ಪರವಾನಿಗೆ ಪಡೆದ ಭಾರತದ 4ನೆ ಮುಸ್ಲಿಂ ಮಹಿಳೆ ಸಲ್ವಾ ಫಾತಿಮಾ

ವಾರ್ತಾಭಾರತಿವಾರ್ತಾಭಾರತಿ20 Nov 2017 6:32 PM IST
share
ಬೇಕರಿ ಕಾರ್ಮಿಕನ ಪುತ್ರಿಯ ಕನಸು ನನಸಿಗೆ ಅಡ್ಡಿಯಾಗದ ಹಿಜಾಬ್

ಹೈದರಾಬಾದ್,ನ.20: ಆ ಯುವತಿ ದಶಕದ ಹಿಂದೆ ಕಾರ್ಯಕ್ರಮವೊಂದರಲ್ಲಿ ‘ಮುಂದೇನಾಗಬಯಸುತ್ತೀಯಾ’ ಎಂಬ ಪ್ರಶ್ನೆಗೆ ‘ಪೈಲಟ್’ಎಂದು ಉತ್ತರಿಸಿದ್ದಳು. ಅಂದಿನಿಂದಲೇ ಆ ಬಡ ಬೇಕರಿ ಕಾರ್ಮಿಕನ ಪುತ್ರಿಯ ಕನಸಿಗೆ ರೆಕ್ಕೆಗಳು ಮೂಡತೊಡಗಿದ್ದವು. ಹಿಜಾಬ್ ಧಾರಿ ಸೈದಾ ಸಲ್ವಾ ಫಾತಿಮಾ ಈಗ ವಿಮಾನಯಾನ ಸಂಸ್ಥೆಯೊಂದನ್ನು ಸೇರಲು ಸಜ್ಜಾಗಿದ್ದಾರೆ ಮತ್ತು ವಾಣಿಜ್ಯಿಕ ವಿಮಾನ ಚಾಲನೆ ಪರವಾನಿಗೆ(ಸಿಪಿಎಲ್) ಹೊಂದಿರುವ ಭಾರತದ ನಾಲ್ವರು ಮುಸ್ಲಿಂ ಮಹಿಳೆಯರಲ್ಲಿ ಓರ್ವರಾಗಿದ್ದಾರೆ.

 ಇತ್ತೀಚಿಗಷ್ಟೇ ನ್ಯೂಝಿಲಂಡ್‌ನಲ್ಲಿ ಬಹು ಇಂಜಿನ್ ವಿಮಾನ ಹಾರಾಟದ ತರಬೇತಿಯೊಂದಿಗೆ ಬೆಹರಿನ್‌ನಲ್ಲಿ ಟೈಪ್ ರೇಟಿಂಗ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿರುವ ಸಲ್ವಾ ಈಗ ಏರ್‌ಬಸ್ ಎ320 ವಿಮಾನವನ್ನು ಹಾರಿಸಲು ನಾಗರಿಕ ವಾಯುಯಾನ ಮಹಾ ನಿರ್ದೇಶಕರಿಂದ ಅನುಮತಿಗಾಗಿ ಕಾಯುತ್ತಿದ್ದಾರೆ.

ಆದರೆ ತನ್ನ ಜೀವನದ ಮಹತ್ವಾಕಾಂಕ್ಷೆಯನ್ನು ಸಾಧಿಸುವುದು ಹೈದರಾಬಾದ್‌ನ ಹಳೆಯ ನಗರದ ಸುಲ್ತಾನ್ ಶಾಹಿ ಪ್ರದೇಶದ ಬಡ ಕುಟುಂಬದಿಂದ ಬಂದಿರುವ ಸಲ್ವಾ ಪಾಲಿಗೆ ಸುಲಭವಾಗಿರಲಿಲ್ಲ, ಅಡಿಗಡಿಗೂ ತೊಡಕುಗಳನ್ನು ಎದುರಿಸುತ್ತಲೇ ಆಕೆ ಗೆಲುವು ಸಾಧಿಸಿದ್ದಾರೆ.

ಸಲ್ವಾ ಕೆಳ ಮಧ್ಯಮ ವರ್ಗಕ್ಕೆ ಸೇರಿದವಳಾಗಿದ್ದಾರೆ ಮತ್ತು ಭಾರತದಲ್ಲಿ ಹಾಗೂ ವಿದೇಶದಲ್ಲಿ ತನ್ನ ತರಬೇತಿಯುದ್ದಕ್ಕೂ ಹಿಜಾಬ್ ಧರಿಸಿಕೊಂಡೇ ಇದ್ದರು ಎನ್ನುವುದು ಅವರ ಕಥೆಯನ್ನು ಭಿನ್ನವಾಗಿಸಿದೆ.

"ನಾನು ಸದಾ ಕಾಲ ಹಿಜಾಬ್ ಧರಿಸಿಕೊಂಡೇ ಇರುತ್ತಿದ್ದೆ, ಸಮವಸ್ತ್ರ ಧರಿಸಿದಾಗಲೂ ಅದನ್ನು ತೊರೆದಿರಲಿಲ್ಲ. ಹಿಜಾಬ್‌ನಿಂದಾಗಿ ನನಗೆಂದೂ ಸಮಸ್ಯೆಯಾಗಿರಲಿಲ್ಲ" ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಲ್ವಾ ತಿಳಿಸಿದರು.

ಹಿಜಾಬ್ ಧರಿಸಿದ್ದಕ್ಕಾಗಿ ಬೆಹರಿನ್‌ನ ಗಲ್ಫ್ ಏವಿಯೇಷನ್ ಅಕಾಡೆಮಿಯಲ್ಲಿ ಆಕೆ ಪ್ರಶಂಸೆಗೆ ಪಾತ್ರಳಾಗಿದ್ದು, ಸಂಸ್ಥೆಯ ಮ್ಯಾಗಝಿನ್‌ನಲ್ಲಿ ಹಿಜಾಬ್ ಧರಿಸಿದ್ದ ಆಕೆಯ ಚಿತ್ರಗಳೂ ಪ್ರಕಟವಾಗಿದ್ದವು.

ಮನಸ್ಸಿದ್ದಲ್ಲಿ ಮಾರ್ಗವಿದೆ ಎನ್ನುವ ಸಲ್ವಾ, ವಿಮಾನ ಚಾಲನೆಯಂತಹ ವೃತ್ತಿಗಳನ್ನು ಅರಸಲು ಹಿಜಾಬ್ ಅಡಚಣೆಯಾಗಿದೆ ಎಂಬ ತಪ್ಪುಗ್ರಹಿಕೆ ನಿವಾರಣೆಯಾಗಬೇಕೆಂದು ಪ್ರತಿಪಾದಿಸಿದ್ದಾರೆ.

ಪೈಲಟ್ ಅಥವಾ ಇನ್ಯಾವುದೇ ವೃತ್ತಿಯಾಗಿರಲಿ, ನಮ್ಮ ಶಿಕ್ಷಣ ಮತ್ತು ಸಾಮರ್ಥ್ಯ ಮಾತ್ರ ನೆರವಾಗುತ್ತದೆಯೇ ಹೊರತು ಬೇರೆ ಯಾವುದೇ ವಿಷಯ ಮುಖ್ಯವಲ್ಲ. ನೀವು ಏನನ್ನು ಮಾಡಬೇಕೆಂದು ನಿರೀಕ್ಷಿಸಲಾಗಿದೆಯೋ ಅದನ್ನು ಮಾಡಲು ನೀವು ಸಮರ್ಥರಿದ್ದೀರಿ ಎನ್ನುವುದನ್ನು ಸಾಬೀತು ಮಾಡಬೇಕಾಗುತ್ತದೆ ಎಂದು ಸಲ್ವಾ ಹೇಳಿದರು.

 ಸಲ್ವಾ ತನ್ನ ಶಾಲಾದಿನಗಳಿಂದಲೂ ವೈಮಾನಿಕ ಉದ್ಯಮದ ಕುರಿತ ಲೇಖನಗಳು ಮತ್ತು ವಿಮಾನಗಳ ಚಿತ್ರಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದರು. ಆದರೆ ಆಕೆಯ ಕನಸನ್ನು ಜನರು ಗೇಲಿ ಮಾಡುತ್ತಿದ್ದರು. 12ನೇ ತರಗತಿಯಲ್ಲಿ ತೇರ್ಗಡೆಗೊಂಡ ಬಳಿಕ ಆಕೆ ತನ್ನ ಹೆತ್ತವರ ಸಲಹೆಯಂತೆ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ತರಬೇತಿಗಾಗಿ ಉರ್ದು ದೈನಿಕ ‘ಸಿಯಾಸತ್’ ನಡೆಸುತ್ತಿದ್ದ ಕೋಚಿಂಗ್ ಸೆಂಟರ್‌ಗೆ ಸೇರಿಕೊಂಡಿದ್ದರು.

ಅಲ್ಲಿಯ ಕಾರ್ಯಕ್ರಮವೊಂದರಲ್ಲಿ ಸಿಯಾಸತ್‌ನ ಸಂಪಾದಕ ಝಾಹಿದ್ ಅಲಿ ಖಾನ್ ಅವರು ‘ಮುಂದೇನಾಗಲು ಬಯಸುತ್ತೀಯಾ’ ಎಂದು ಪ್ರಶ್ನಿಸಿದ್ದರು. ಸಲ್ವಾ ‘ಪೈಲಟ್’ ಎಂದು ಚುರುಕಾಗಿ ಉತ್ತರಿಸಿದಾಗ ಖಾನ್ ಅಚ್ಚರಿಗೊಳಗಾಗಿದ್ದರು.

"ನಾನಂದು ‘ಪೈಲಟ್’ ಎಂಬ ಶಬ್ದವನ್ನು ಉಸುರದಿದ್ದರೆ ನಾನಿಂದು ಪೈಲಟ್ ಆಗುತ್ತಿರಲಿಲ್ಲ" ಎಂದು ಸಲ್ವಾ ನೆನಪಿಸಿಕೊಂಡರು.

ಖಾನ್ ತನ್ನ ಗೆಳೆಯರು ಮತ್ತು ದಾನಿಗಳೊಂದಿಗೆ ಸೇರಿಕೊಂಡು ಸಲ್ವಾರ ಕನಸಿಗೆ ರೆಕ್ಕೆಗಳನ್ನು ನೀಡಲು ನಿರ್ಧರಿಸಿದ್ದರು. ಪರಿಣಾಮವಾಗಿ ಆಕೆ 2007ರಲ್ಲಿ ಆಂಧ್ರಪ್ರದೇಶ ಏವಿಯೇಷನ್ ಅಕಾಡೆಮಿಗೆ ಸೇರಲು ಸಾಧ್ಯವಾಗಿತ್ತು.

ನೇವಿಗೇಷನ್ ಪರೀಕ್ಷೆಯಲ್ಲಿ ಸಲ್ವಾ ಮೂರು ಬಾರಿ ಅನುತ್ತೀರ್ಣಗೊಂಡಿದ್ದರು. ಪ್ರತಿ ಬಾರಿ ಅನುತ್ತೀರ್ಣಗೊಂಡಾಗಲೂ ಸಲ್ವಾ ಉತ್ಸಾಹವನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಖಾನ್ ಆಕೆಯನ್ನು ಉತ್ತೇಜಿಸುತ್ತಲೇ ಇದ್ದರು. ಸೋಲು ಗೆಲುವಿನ ಮೆಟ್ಟಿಲು ಎನ್ನುವುದನ್ನು ಅವರು ಆಕೆಗೆ ಸದಾ ನೆನಪಿಸುತ್ತಿದ್ದರು. ಐದು ವರ್ಷಗಳ ಬಳಿಕ ಸಲ್ವಾ ಸಂಸ್ಥೆಯಲ್ಲಿ ಯಶಸ್ವಿಯಾಗಿ ತರಬೇತಿ ಮುಗಿಸಿಕೊಂಡು ಹೊರಬಂದಿದ್ದರು. ಸೆಸ್ನಾ 152 ವಿಮಾನದ 200 ಗಂಟೆಗಳ ಹಾರಾಟದೊಡನೆ,123 ಗಂಟೆಗಳ ಕಾಲ ಏಕಾಂಗಿಯಾಗಿ ವಿಮಾನವನ್ನು ಹಾರಿಸಿದ್ದರು.

2013ರಲ್ಲಿ ಸಿಪಿಎಲ್ ಕೈಸೇರಿತ್ತಾದರೂ ಬೃಹತ್ ವಿಮಾನಗಳನ್ನು ಹಾರಿಸಲು ಅಗತ್ಯವಾದ ಬಹು ಇಂಜಿನ್ ತರಬೇತಿ ಪಡೆಯಲು, ಟೈಪ್ ರೇಟಿಂಗ್ ಮಾಡಲು ಲಕ್ಷಾಂತರ ರೂ.ಗಳು ಬೇಕಾಗಿದ್ದವು.

 ಆಗ 24 ವರ್ಷ ವಯಸ್ಸಾಗಿದ್ದ ಸಲ್ವಾ ಮದುವೆ ಮಾಡಿಕೊಳ್ಳುವಂತೆ ಹೆತ್ತವರ ಸಲಹೆಯನ್ನು ಒಪ್ಪಿಕೊಂಡಿದ್ದರು. "ನನಗೆ ಬೇರೆ ಆಯ್ಕೆಯೇ ಇರಲಿಲ್ಲ. ಮುಂದಿನ ತರಬೇತಿಗೆ ಹಣ ಎಲ್ಲಿಂದ ಬರುತ್ತದೆ ಎನ್ನುವುದು ನನಗೆ ಗೊತ್ತಿರಲಿಲ್ಲ" ಎಂದು ಸಲ್ವಾ ಹೇಳಿದರು.

ಕಾರ್ ಶೋರೂಮ್ ಉದ್ಯೋಗಿಯ ಕೈ ಹಿಡಿದ ಸಲ್ವಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ ತೆಲಂಗಾಣ ಸರಕಾರವು ಆಕೆಗೆ ಅಗತ್ಯವಿದ್ದ 36 ಲಕ್ಷ ರೂ.ಗಳ ಆರ್ಥಿಕ ನೆರವನ್ನು ಪ್ರಕಟಿಸಿತ್ತು.

ಹೆಣ್ಣುಮಗುವಿಗೆ ಜನನ ನೀಡಿದ ಬಳಿಕ ಪೈಲಟ್ ವೃತ್ತಿಯನ್ನು ಸೇರುವ ಬಗ್ಗೆ ಪ್ರಯತ್ನಿಸುವುದಿಲ್ಲವೇ ಎಂದು ಜನರು ಆಕೆಯನ್ನು ಕೇಳುತ್ತಲೇ ಇದ್ದರು ಮತ್ತು ತಾನು ವೃತ್ತಿಪರ ಪೈಲಟ್ ಆಗಲೇಬೇಕೆಂದು ಸಲ್ವಾ ನಿರ್ಧರಿಸಿದ್ದರು.

ಒಂದು ವರ್ಷದ ಬಳಿಕ ಬಹು ಇಂಜಿನ್ ತರಬೇತಿಗಾಗಿ ಆಕೆ ತೆಲಂಗಾಣ ಏವಿಯೇಷನ್ ಅಕಾಡೆಮಿಯನ್ನು ಸೇರಿದ್ದರಾದರೂ ಅಗತ್ಯ ವಿಮಾನ ಅಲ್ಲಿರಲಿಲ್ಲ. ಸರಕಾರವು ಆಕೆಯ ತರಬೇತಿಯನ್ನು ಜಿಎಂಆರ್ ಏವಿಯೇಷನ್ ಅಕಾಡೆಮಿಗೆ ವರ್ಗಾಯಿಸಿತ್ತಾದರೂ ಆಕೆ ಇನ್ನೇನು ತರಬೇತಿ ಪ್ರಾರಂಭಿಸಬೇಕು ಎಂದಿದ್ದಾಗ ವಿಮಾನ ಅಪಘಾತದಿಂದಾಗಿ ನೆಲವನ್ನು ಕಚ್ಚಿಕೊಂಡಿತ್ತು. ಆದರೆ ಇದರಿಂದ ಹತಾಶರಾಗದ ಸಲ್ವಾ ತರಬೇತಿಗಾಗಿ ತನ್ನನ್ನು ವಿದೇಶಕ್ಕೆ ಕಳುಹಿಸುವಂತೆ ಸರಕಾರವನ್ನು ಕೋರಿಕೊಂಡಿದ್ದರು ಮತ್ತು ಅದು ಅಸ್ತು ಎಂದಿತ್ತು.

ಇದೀಗ ನ್ಯೂಝಿಲಂಡ್‌ನಲ್ಲಿ ಮತ್ತು ಬೆಹರಿನ್‌ನಲ್ಲಿ ತರಬೇತಿ ಮುಗಿಸಿಕೊಂಡು ಬಂದಿರುವ ಸಲ್ವಾ ವೃತ್ತಿಪರ ಪೈಲಟ್ ಆಗಲು ಸಜ್ಜಾಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X