ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಎಸ್.ಎಂ.ರಶೀದ್ ಅವರಿಗೆ ಸನ್ಮಾನ
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ
ಮಂಗಳೂರು, ನ. 20: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಬ್ಯಾರೀಸ್ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್ ಅವರಿಗೆ ಮೂಡಾ ಅಧ್ಯಕ್ಷ ಸುರೇಶ್ ಬಳ್ಳಾಲ್ ಅವರು ಇತ್ತೀಚೆಗೆ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಮಾಸಿಕ ಸಭೆಯಲ್ಲಿ ಸನ್ಮಾನಿಸಿದರು.
ಈ ಸಂದರ್ಭ ಮನ್ಸೂರ್ ಅಹ್ಮದ್ ಆಝಾದ್, ಬಿ.ಎಂ.ಮಮ್ತಾಝ್ ಅಲಿ, ಶೌಕತ್ ಶೋರಿ, ಮುಹಮ್ಮದ್ ಹಾರಿಸ್, ಅಬ್ದುಲ್ ಬಶೀರ್ ಜೋಕಟ್ಟೆ, ಎಚ್.ಕೆ.ಖಾಸಿಂ, ನಿಸಾರ್ ಫಕೀರ್ ಮುಹಮ್ಮದ್, ಇಮ್ತಿಯಾಝ್, ಅಸ್ಗರ್ ಅಲಿ, ಆಸಿಫ್ ಸೂಫಿಕಾನ್, ದಾವುದ್ಸಲೈನ್, ಅಬ್ದುಲ್ ನಾಸಿರ್, ಸಲೀಮ್ ಮತ್ತು ಖಾಲಿದ್ ತಣ್ಣೀರು ಬಾವಿ ಮೊದಲಾದವರು ಉಪಸ್ಥತರಿದ್ದರು.
Next Story