Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಹ್ಯಾದ್ರಿಯಲ್ಲಿ 'ಎ.ಕೆ. ಕಾರ್ಪೊರೇಟ್...

ಸಹ್ಯಾದ್ರಿಯಲ್ಲಿ 'ಎ.ಕೆ. ಕಾರ್ಪೊರೇಟ್ ಕ್ರಿಕೆಟ್ ಬ್ಯಾಶ್' ಗೆ ಚಾಲನೆ

ವಾರ್ತಾಭಾರತಿವಾರ್ತಾಭಾರತಿ23 Nov 2017 10:58 PM IST
share
ಸಹ್ಯಾದ್ರಿಯಲ್ಲಿ ಎ.ಕೆ. ಕಾರ್ಪೊರೇಟ್ ಕ್ರಿಕೆಟ್ ಬ್ಯಾಶ್ ಗೆ ಚಾಲನೆ

ಮಂಗಳೂರು,ನ.23:ಕಳೆದ ಎರಡು ವರ್ಷಗಳಲ್ಲಿ ಮಂಗಳೂರಿನಲ್ಲಿ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಅದ್ದೂರಿಯಾಗಿ ನೆರೆವೇರಿಸಿ, ಈ ವರ್ಷದ ಆರಂಭದಲ್ಲಿ ತುಳು ಚಿತ್ರರಂಗದ ಕೋಸ್ಟಲ್‍ವುಡ್ ಪ್ರೀಮಿಯರ್ ಲೀಗ್ ಪಂದ್ಯಾಟವನ್ನು ಯಶಸ್ವಿಯಾಗಿ ನಡೆಸಿದ ಮಂಗಳೂರಿನ ಬ್ರ್ಯಾಂಡ್ ವಿಷನ್ ಸಂಸ್ಥೆಯು ಸಹ್ಯಾದ್ರಿ ಸಂಸ್ಥೆಯ ಸಹಕಾರದೊಂದಿಗೆ ಕರಾವಳಿ ಕರ್ನಾಟಕ ಭಾಗದ ಪ್ರಪ್ರಥಮ ಎಕೆ ಕಾರ್ಪೋರೇಟ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

ಎಕೆ ಸಮೂಹ ಸಂಸ್ಥೆಯು ಪಂದ್ಯಕೂಟದ ಟೈಟಲ್ ಸ್ಪೋನ್ಸರ್ ಸಂಸ್ಥೆಯಾಗಿರುತ್ತದೆ. ಎ ಕೆ ಸಮೂಹ ಸಂಸ್ಥೆಯ ನಿರ್ದೇಶಕ ನಿಸಾರ್ ಅಹ್ಮದ್, ಸಹ್ಯಾದ್ರಿ ಸಂಸ್ಥೆಯ ಶ್ರೀ ಮಂಜುನಾಥ ಭಂಡಾರಿಯವರು ಪಂದ್ಯಕೂಟ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.

ಸಹ್ಯಾದ್ರಿ ಕಾಲೇಜಿನ ಪಕ್ಕದಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಯ ತಟದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹುಲ್ಲುಹಾಸಿನ ಮೈದಾನ ಮತ್ತು ಹುಲ್ಲು ಹಾಸಿನ ಪಿಚ್‍ನಲ್ಲಿ ಈ ಪಂದ್ಯಕೂಟವು ನಡೆಯಲಿದೆ.   ಪಂದ್ಯಾಟವು ಪ್ರಥಮ ಎರಡು ದಿನಗಳಲ್ಲಿ ಹಗಲಿನಲ್ಲಿ ಮತ್ತು ಕೊನೆಯ ಎರಡು ದಿನಗಳಲ್ಲಿ ಹೊನಲು ಬೆಳಕಿನಡಿಯಲ್ಲಿ ಆಟವು ಜರಗಲಿರುವುದು. 

ವಿಜೇತ ಮತ್ತು ದ್ವಿತೀಯ ಸ್ಥಾನವನ್ನು ಗೆಲ್ಲುವ ತಂಡಗಳು ಆಕರ್ಷಕ ಟ್ರೋಫಿಯೊಂದಿಗೆ ಲಕ್ಷಾಂತರ ಮೊತ್ತದ ನಗದು ಬಹುಮಾನವನ್ನು ಪಡೆಯಲಿವೆಯಲ್ಲದೆ ಇತರ ಹಲವಾರು ವೈಯಕ್ತಿಕ ಬಹುಮಾನಗಳಿವೆ. 

ಪಂದ್ಯಾಟವು ಲೀಗ್ ಮತ್ತು ನಾಕೌಟ್ ಆಧಾರದಲ್ಲಿ ತಲಾ ಹತ್ತು ಓವರುಗಳ ಇನ್ನಿಂಗ್ಸ್ ಗಳನ್ನೊಳಗೊಂಡಿದೆ. ಪಂದ್ಯಾಟದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಕಂಪನಿ, ಬ್ಯಾಂಕ್ ಮತ್ತು ವಿಶ್ವವಿದ್ಯಾಲಯಗಳ 24 ತಂಡಗಳು ಭಾಗವಹಿಸಲಿವೆ. ಎಂಸಿಎಫ್, ಮಣಿಪಾಲ ವಿಶ್ವವಿದ್ಯಾಲಯವನ್ನೊಳಗೊಂಡ ಟೀಂ ಮಣಿಪಾಲ, ಉದಯವಾಣಿ ಬಳಗವನ್ನೊಳಗೊಂಡ  ಮಣಿಪಾಲ ಟೆಕ್ನಾಲಜಿ ಲಿಮಿಟೆಡ್, ಕಾಪೋರೇಷನ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಎಂಇಝೆಡ್, ಫೋರಂ ಮಾಲ್, ಎಕೆ ಗ್ರೂಪ್, ದಿಯಾ ಸಿಸ್ಟಮ್ಸ್, ರೋಬೋಸಾಫ್ಟ್, ಕಾಡೋಲೈಟ್, ಸುಜ್ಲಾನ್, ಆರ್‍ಪಿಜಿ, ಯುಬಿ, ಎನ್ವೋಯಿ , ಮರಿಯನ್ ಪ್ರೊಜೆಕ್ಟ್ಸ್, ಕ್ಲಬ್ ಮಂತ್ರ, ವೆಸ್ಟರ್ನ್ ಬಿಲ್ಡರ್ಸ್, ಇನವೇಂಜರ್, ಎಸ್‍ಜಿಎಸ್‍ಎ, ಮೈಟ್ ಮೂಡಬಿದ್ರೆ, ಪ್ರಸನ್ನಾ ಟೆಕ್ನಾಲಜಿ, ಪರ್‍ಫೋಮ್ ಗ್ರೂಪ್, ಗಣೇಶ್ ಶಿಪ್ಪಿಂಗ್ ಕಂಪನಿಯ ತಂಡಗಳು ಭಾಗವಹಿವೆ. 

24 ತಂಡಗಳನ್ನು 8 ವಿಭಾಗಗಳನ್ನಾಗಿ ವಿಭಜಿಸಲಾಗಿದ್ದು ಲೀಗ್ ಹಂತದ ಪಂದ್ಯಗಳ ಬಳಿಕ ಪ್ರತಿಯೊಂದು ಗುಂಪಿನಿಂದ ಪ್ರಥಮ ಸ್ಥಾನವನ್ನು ಪಡೆಯುವ ಒಂದೊಂದು ತಂಡವು ನಾಕೌಟ್ ಹಂತವನ್ನು ಪ್ರವೇಶಿಸಲಿವೆ.  ವಿಜೇತ ತಂಡಗಳಿಗೆ ರಾಜ್ಯ ರಾಷ್ಟ್ರ ಮಟ್ಟದ ಕಾರ್ಪೋರೇಟ್ ಪಂದ್ಯಕೂಟಗಳಲ್ಲಿ ಭಾಗವಹಿಸುವ ಅವಕಾಶವು ಲಭ್ಯವಾಗಲಿದೆ.

ಹಾರ್ಡ್‍ಟೆನಿಸ್‍ಬಾಲ್‍ನ ಉಪಯೋಗದೊಂದಿಗೆ ಟರ್ಫ್ ಪಿಚ್‍ನಲ್ಲಿ  ಜರಗಲಿರುವ ಈ ಪಂದ್ಕಕೂಟವು ಆಟಗಾರರಿಗೆ ಹೊಸ ಅನುಭವವನ್ನು ತಂದುಕೊಡಲಿದೆ. ಈ ಪಂದ್ಯಕೂಟವು www.tenniscricket.in ನಲ್ಲಿ ನೇರಪ್ರಸಾರವನ್ನು ಮತ್ತು  www.famecrick.com ನಲ್ಲಿ ನೇರ ಸ್ಕೋರಿಂಗ್ ಬಿತ್ತರವಾಗಲಿದೆ.

ಪ್ರಥಮ ಪಂದ್ಯವು ನ23ರಂದು ಬೆಳಗ್ಗೆ ಗಂಟೆ 8.00ಕ್ಕೆ ಆರಂಭವಾಗಿದ್ದು ಪ್ರಥಮ ಪಂದ್ಯ ಮುಗಿದೊಡನೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಟ್ರೋಫಿ ಬಿಡುಗಡೆಯೂ ನೆರವೇರಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X