Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಟಿಪ್ಪು ಸುಲ್ತಾನನ ರಾಜನೀತಿ

ಟಿಪ್ಪು ಸುಲ್ತಾನನ ರಾಜನೀತಿ

ಇತಿಹಾಸ-ವರ್ತಮಾನ

ಡಾ|| ಲಕ್ಷ್ಮೀಪತಿ.ಸಿ.ಜಿಡಾ|| ಲಕ್ಷ್ಮೀಪತಿ.ಸಿ.ಜಿ25 Nov 2017 11:39 PM IST
share
ಟಿಪ್ಪು ಸುಲ್ತಾನನ ರಾಜನೀತಿ

ಟಿಪ್ಪು ಸುಲ್ತಾನನ ರಾಜನೀತಿಯಲ್ಲಿ ಬಹಳ ಪ್ರಮುಖ ವಾದುದು ಮತ್ತು ಗಮನ ಸೆಳೆಯುವುದು ತಂಬಾಕು ಮತ್ತು ಮದ್ಯ ನಿಷೇಧದ ಬಗ್ಗೆ ಆತನಿಗಿದ್ದ ಕಾಳಜಿ. ಆದೇಶ 19ರಲ್ಲಿ ಭಂಗಿ ಬೆಳೆಯುವುದನ್ನು ಟಿಪ್ಪು ನಿಷೇಧಿಸು ತ್ತಾನೆ. ಭಂಗಿ ಸೇದುವವರಿಗೆ ದಂಡ ವಿಧಿಸಬೇಕೆಂತಲೂ ಆದೇಶಿ ಸುತ್ತಾನೆ. ಹಿಂದಿನ ವರ್ಷದ ಕೃಷಿಯಿಂದ ಗಾಂಜಾ ಉಳಿದಿದ್ದರೆ ಅಥವಾ ಹೊರಗಿನಿಂದ ಆಮದು ಮಾಡಿ ಮಾರಿದರೆ ಅದರ ಮೇಲೆ ಕಳೆದ ವರ್ಷಕ್ಕಿಂತ ದುಪ್ಪಟ್ಟು ತೆರಿಗೆ ವಿಧಿಸಲಾಗುತ್ತದೆ. ಆದೇಶ 121ರಲ್ಲಿ ತಂಬಾಕು ಸೇದುವುದರಿಂದ ಆಗುವ ದುಷ್ಪರಿಣಾಮಗಳನ್ನು ಹೀಗೆ ವಿವರಿಸುತ್ತಾನೆ. ತಂಬಾಕು ಸೇದು ವುದರಿಂದ ಮೊದಲು ಹೃದಯ ಕಪ್ಪಗಾಗುತ್ತದೆ, ಆಮೇಲೆ ತುಟಿ ನಂತರ ನಾಲಗೆ ಕಪ್ಪಗಾಗುತ್ತದೆ. ಬಾಯಿ ಹುಣ್ಣಾಗುತ್ತದೆ. ಹಸಿವುಕಣ್ಮರೆಯಾಗಿ ಆರೋಗ್ಯ ಹದಗೆಡುತ್ತದೆ. ಆದ್ದರಿಂದ ತಂಬಾಕು ಸೇದುವುದು ಮತ್ತು ಜಗಿಯುವುದನ್ನು ನಿಷೇಧಿಸಲಾಗಿದೆ.

ಆದೇಶ 82ರಲ್ಲಿ ಎಲ್ಲಾ ಮದ್ಯ ವ್ಯಾಪಾರಿಗಳು ವ್ಯಾಪಾರ ವನ್ನು ಬಂದ್ ಮಾಡಿ ಪರ್ಯಾಯ ಉದ್ಯೋಗ ಹುಡುಕಿಕೊಳ್ಳ ಬೇಕು. ಇದನ್ನು ಯಾರಾದರೂ ವಿರೋಧಿಸಿದರೆ ಅವನ ಕೈಗಳನ್ನು ಕತ್ತರಿಸಿ ಮದ್ಯ ವ್ಯಾಪಾರ ಶಾಶ್ವತವಾಗಿ ಇಲ್ಲದಂತೆ ಮಾಡಬೇಕು ಎನ್ನುತ್ತಾನೆ.

ಆದೇಶ ಸಂಖ್ಯೆ 100ರಲ್ಲಿ ಟಿಪ್ಪು ವಿಶ್ರಾಂತಿ ಗೃಹಗಳಲ್ಲಿರುವ ಸಾಧುಗಳು ಭಂಗಿಯನ್ನು ಉಪಚಾರದ ಭಾಗವಾಗಿ ಬರುವ ಅತಿಥಿಗಳಿಗೆ ನೀಡುತ್ತಾರೆ. ಈ ಸಾಧುಗಳ ಸಂಗದಲ್ಲಿ ಅತಿಥಿಗಳು ತಂಬಾಕು ಮತ್ತು ಮದ್ಯ ಸೇವನೆಯಿಂದ ಹಾಳಾಗುತ್ತಿದ್ದಾರೆ. ವಿಶ್ರಾಂತಿ ಗೃಹದ ಮಾಲಕ ಈ ವಿಷಯವನ್ನು ಲಘುವಾಗಿ ಪರಿಗಣಿಸಬಾರದು. ಈ ಸಾಧುಗಳಿಗೆ ಎಚ್ಚರಿಕೆ ನೀಡಿ, ಅವರು ಮಾನ್ಯ ಮಾಡದಿದ್ದರೆ ರಾಜ್ಯದಿಂದ ಗಡಿಪಾರು ಮಾಡಿ ಎನ್ನುತ್ತಾನೆ.

ಟಿಪ್ಪು ಸುಲ್ತಾನನ ಈ ಆದೇಶದಿಂದ ಬೊಕ್ಕಸಕ್ಕೆ ಭಾರೀ ನಷ್ಟವಾ ಗುತ್ತದೆ ಎಂದು ಅವನ ಹಣಕಾಸು ಮಂತ್ರಿಯಾಗಿದ್ದ ಮೀರ್ ಸಾದಿಕ್ ಸುಲ್ತಾನನ ಗಮನಕ್ಕೆ ತರುತ್ತಾನೆ. ಆಗ ಟಿಪ್ಪು ಅವನಿ ಗೊಂದು ಪತ್ರವನ್ನು ಹೀಗೆ ಬರೆಯುತ್ತಾನೆ:

‘‘ಹಣಕಾಸಿನ ನಷ್ಟಕ್ಕೆ ಹೆದರಿ ನಾವು ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬಾರದು. ಸಂಪೂರ್ಣ ನಿಷೇಧ ನನ್ನ ಹೃದಯಕ್ಕೆ ಹತ್ತಿರವಾದುದು. ಇದು ಕೇವಲ ಧರ್ಮದ ವಿಷಯ ಮಾತ್ರವಲ್ಲ.ನಾವು ನಮ್ಮ ಪ್ರಜೆಗಳ ಆರ್ಥಿಕ ಮತ್ತು ನೈತಿಕ ಕ್ಷಮತೆಯನ್ನು ಕಾಪಾಡಬೇಕು, ನಮ್ಮ ಯುವಕರ ನಡತೆಯನ್ನು ರೂಪಿಸಬೇಕು. ಬೊಕ್ಕಸಕ್ಕೆ ನಷ್ಟವಾಗುತ್ತದೆ ಎನ್ನುವ ನಿಮ್ಮ ಕಾಳಜಿಯನ್ನು ಮೆಚ್ಚು ತ್ತೇನೆ ಆದರೆ ನಾವು ಮುಂದಾಲೋಚನೆ ಮಾಡಬೇಕಲ್ಲವೇ? ನಮ್ಮ ಬೊಕ್ಕಸಕ್ಕೆ ಬರುವ ಲಾಭವು ನಮ್ಮ ಜನರ ಆರೋಗ್ಯ ಮತ್ತು ನೈತಿಕತೆಗಿಂತ ದೊಡ್ಡದೆಂದು ಭಾವಿಸಬೇಕೇ?’’

share
ಡಾ|| ಲಕ್ಷ್ಮೀಪತಿ.ಸಿ.ಜಿ
ಡಾ|| ಲಕ್ಷ್ಮೀಪತಿ.ಸಿ.ಜಿ
Next Story
X