ಆಟೋ ಢಿಕ್ಕಿ : ಪಾದಚಾರಿ ಸಾವು
ಮದ್ದೂರು, ನ.26: ಆಟೋರಿಕ್ಷಾ ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಯರಗನಹಳ್ಳಿಯಲ್ಲಿ ಶನಿವಾರ ತಡರಾತ್ರಿ ಜರುಗಿದೆ.
ಗ್ರಾಮದ ಕುಂಟೇಗೌಡರ ಪುತ್ರ ತಮ್ಮಯ್ಯ(70) ಸಾವನ್ನಪ್ಪಿದವರು. ಇವರು ರಸ್ತೆಬದಿ ನಡೆದು ಹೋಗುತ್ತಿದ್ದಾಗ ಕೆಸ್ತೂರು ಕಡೆಯಿಂದ ಬಂದ ಆಟೋರಿಕ್ಷಾ ಡಿಕ್ಕಿಹೊಡೆದಿದೆ.ಕೆಸ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





