ಡಿ. 1: ಕೆಸಿಎಫ್ ಕುವೈತ್ ವತಿಯಿಂದ 'ಮೆಹ್ಪಿಲೇ ಮುಸ್ತಫಾ 2017' ಮೀಲಾದ್ ಸಮಾವೇಶ
ಕುವೈತ್, ನ. 27: ಲೋಕ ಪ್ರವಾದಿ ಮುಹಮ್ಮದ್ (ಸ ಅ) ರವರ ಜನ್ಮ ದಿನಾಚರಣೆಯ ಅಂಗವಾಗಿ ಅನಿವಾಸಿ ಕನ್ನಡಿಗರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಕುವೈತ್ ಇದರ ವತಿಯಿಂದ 'ಸಹಿಷ್ಣುತೆಯ ಸಂದೇಶ ವಾಹಕ' ಎಂಬ ಶೀರ್ಷಿಕೆಯಡಿ 'ಮೆಹ್ಪಿಲೇ ಮುಸ್ತಫಾ' ಮೀಲಾದ್ ಸಮಾವೇಶ ಡಿ.1ರ ಸಂಜೆ 5ಕ್ಕೆ ಇಂಡಿಯನ್ ಮಾಡೆಲ್ ಸ್ಕೂಲ್ ಸಲ್ಮಿಯಾ ಕುವೈತ್ ನಲ್ಲಿ ನಡೆಯಲಿದೆ.
ಅಬ್ಬಾಸ್ ಬಳೆಂಜ ಅಧ್ಯಕ್ಷತೆ ವಹಿಸುವ ಈ ಕಾರ್ಯಕ್ರಮದಲ್ಲಿ ಅಸ್ಸೈಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ದುಆ ಆಶೀರ್ವಚನ ನಡೆಸಲಿದ್ದಾರೆ.
ಕೆ ಸಿ ಎಫ್ ಸೌದಿ ಅರೇಬಿಯಾ ಅಧ್ಯಕ್ಷ ಡಿ ಪಿ ಯೂಸುಫ್ ಸಖಾಫಿ ಬೈತಾರ್ ಮುಖ್ಯ ಪ್ರಭಾಷಣ ಮಾಡಲಿದ್ದು ಹಾಗೂ ಮಾಸ್ಟರ್ ಶಿಯಾನ್ ಉಳ್ಳಾಲ ನೇತೃತ್ವದಲ್ಲಿ ಬೃಹತ್ ನಅತೇ ಶರೀಫ್ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕರ್ಮದಲ್ಲಿ ಸದಾತುಗಳು, ಸಾಮಾಜಿಕ, ಧಾರ್ಮಿಕ ಉಲಮಾ ಉಮಾರಾ ನೇತಾರರು, ಕೆ ಸಿ ಎಫ್ ಐ ಏನ್ ಸಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಚಾರ ಸಮಿತಿಯ ಚೆರ್ಮ್ಯಾನ್ ಮುಸ್ತಫಾ ಉಳ್ಳಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.