‘ತುಳು ನಾಡೋಚ್ಚಯ ಒಪ್ಪು ಸೇರಾವುನ’ ಸಾರೋಟಕ್ಕೆ ಹೆಬ್ರಿಯಲ್ಲಿ ಸ್ವಾಗತ

ಹೆಬ್ರಿ, ನ.27: ಹೆಬ್ರಿ ತುಳು ಮತ್ತು ಕನ್ನಡ ಭಾಷೆ ಗಡಿನಾಡು. ಹೆಬ್ರಿಯಲ್ಲಿ ಕನ್ನಡ ಮತ್ತು ತುಳು ಭಾಷೆ ಎರಡನ್ನೂ ಮಾತನಾಡುತ್ತಾರೆ. ಹೆಬ್ರಿ ಗ್ರಾಮದ ಪಕ್ಕದಿಂದ ಕನ್ನಡ ಮಾತನಾಡುವ ಗ್ರಾಮಗಳು ಆರಂಭವಾಗುತ್ತವೆ. ಹೀಗಾಗಿ ಹೆಬ್ರಿ ಕನ್ನಡ- ತುಳು ಭಾಷೆಗಳ ಗಡಿನಾಡು ಎಂದು ಕಾರ್ಕಳದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಹೇಳಿದ್ದಾರೆ.
ಸೋಮವಾರ ಹೆಬ್ರಿ ಬಸ್ ನಿಲ್ದಾಣದಲ್ಲಿ ವಿಶ್ವ ತುಳುವೆರೆ ಆಯನೊದ ತುಳುನಾಡೋಚ್ಚಯ ಒಪ್ಪು ಸೇರಾವುನ ಸಾರೋಟವನ್ನು ಹೆಬಿ್ರಗೆ ಸ್ವಾಗತಿಸಿ ಮಾತನಾಡುತಿದ್ದರು.
ಸೋಮವಾರ ಹೆಬ್ರಿ ಬಸ್ ನಿಲ್ದಾಣದಲ್ಲಿ ವಿಶ್ವ ತುಳುವೆರೆ ಆಯನೊದ ತುಳುನಾಡೋಚ್ಚಯ ಒಪ್ಪು ಸೇರಾವುನ ಸಾರೋಟವನ್ನು ಹೆಬ್ರಿಗೆ ಸ್ವಾಗತಿಸಿ ಮಾತನಾಡುತಿದ್ದರು. ತುಳು ಭಾಷೆ ಮಾತನಾಡುವವರು ವಿಶ್ವದಲ್ಲ್ಲೆಡೆ ಸಿಗುತ್ತಾರೆ. ಅವರಲ್ಲಿ ತುಳು ಮಾತನಾಡಿದಾಗ ತುಂಬಾ ಖುಷಿ ಪಡುತ್ತಾರೆ. ತುಳು ಬದುಕಿನ ಭಾಷೆ. ತುಳು ಜಾಗೃತಿಯ ಭಾಷೆ, ಜಾತಿ ಮತವನ್ನು ಒಗ್ಗೂಡಿಸಿದ ಭಾಷೆ ಎಂದರು.
ಹೆಬ್ರಿ ತಾಲೂಕು ತುಳುನಾಡೋಚ್ಚಯ ಸಮಿತಿಯ ಅಧ್ಯಕ್ಷತ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ತುಳು ಭಾಷೆ ಎಂದರೆ ಮೈ ರೋಮಾಂಚನಗೊಳ್ಳುತ್ತದೆ. ತುಳು ಭಾಷೆಗೆ ಗಟ್ಟಿಯ ತಳಪಾಯ ಹಾಕುವ ಕೆಲಸವನ್ನು ವಿಶ್ವ ತುಳುವೆರೆ ಆಯೊನೊದ ಮೂಲಕ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ ಮಾಡುತ್ತಿರುವುದು ಮೆಚ್ಚುವ ಕೆಲಸ ಎಂದರು.
ಸಾರೋಟಕ್ಕೆ ಬಸ್ ನಿಲ್ದಾಣದಲ್ಲಿ ಮಲ್ಲಿಗೆ ಹೂ ಸಮರ್ಪಿಸುವ ಮೂಲಕ ಶಾಸಕ ಎಚ್. ಗೋಪಾಲ ಭಂಡಾರಿ ಸ್ವಾಗತಿಸಿದರು. ಭಾಸ್ಕರ ಜೋಯಿಸ್ ಮತ್ತು ಧರ್ಮಯೋಗಿ ಮೋಹನ್ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ತುಳು ಭಾಷೆಗೆ ಮಾನ್ಯತೆ ದೊರಕಿಸಲು ಸರಕಾರದ ಮೇಲೆ ಒತ್ತಡ ಹೇರುವ ಸಹಿ ಸಂಗ್ರಹ ಅಭಿಯಾನಕ್ಕೆ ಹೆಬ್ರಿಯಲ್ಲಿ ಭಂಡಾರಿ ಸಹಿ ಮಾಡಿ ಚಾಲನೆ ನೀಡಿದರು.
ಹೆಬ್ರಿ ತಾಲೂಕು ತುಳುನಾಡೋಚ್ಚಯ ಸಮಿತಿಯ ಗೌರವಾಧ್ಯಕ್ಷ ಎಚ್. ಭಾಸ್ಕರ ಜೋಯಿಸ್, ಧರ್ಮಯೋಗಿ ಮೋಹನ್, ಪ್ರಮುಖರಾದ ಸುಕುಮಾರ್ ಮೋಹನ್, ಟಿ.ಜಿ.ಆಚಾರ್ಯ, ಎಚ್. ಜನಾರ್ಧನ್, ಸುಜಾತ ಲಕ್ಷ್ಮಣ್, ಗಾಯತ್ರಿ ಆಚಾರ್, ಸೀತಾನದಿ ವಿಠ್ಠಲ ಶೆಟ್ಟಿ, ಕಬ್ಬಿನಾಲೆ ಸೀತಾರಾಮ ಹೆಬ್ಬಾರ್, ಬಾಲಚಂದ್ರ ಮುದ್ರಾಡಿ, ಭುಜಂಗ ಶೆಟ್ಟಿ, ಭೂತುಗುಂಡಿ ಕರುಣಾಕರ ಶೆಟ್ಟಿ, ಆನಂದ ಹೆಗ್ಡೆ, ಕೃಷ್ಣಮೂರ್ತಿ ರಾವ್, ಚಾರ ಗ್ರಾಪಂ ಅಧ್ಯಕ್ಷ ಸಂದೋಪ್, ಸುರೇಶ ಭಂಡಾರಿ, ಶಂಕರ ಶೇರಿಗಾರ್, ಬೇಳಂಜೆ ಹರೀಶ ಪೂಜಾರಿ, ಸುಂದರ ಪೂಜಾರಿ, ಹೆಚ್.ಕೆ.ನಾರಾಯಣ ನಾಯ್ಕಾ, ಗುಳಿಬೆಟ್ಟು ಸುರೇಶ ಶೆಟ್ಟಿ, ಹೆಬ್ರಿ ಉದಯಕುಮಾರ ಶೆಟ್ಟಿ, ಸುಮಲತಾ ಹೆಬ್ಬಾರ್ ಉಪಸ್ಥಿತರಿದ್ದರು.







