Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಪ್ರವಾದಿ ಮುಹಮ್ಮದ್ ಕೋಮುಸೌಹಾರ್ದತೆಯ...

ಪ್ರವಾದಿ ಮುಹಮ್ಮದ್ ಕೋಮುಸೌಹಾರ್ದತೆಯ ಪ್ರತೀಕ: ಜ್ಞಾನಪ್ರಕಾಶ ಸ್ವಾಮಿ

ವಾರ್ತಾಭಾರತಿವಾರ್ತಾಭಾರತಿ2 Dec 2017 10:43 PM IST
share
ಪ್ರವಾದಿ ಮುಹಮ್ಮದ್ ಕೋಮುಸೌಹಾರ್ದತೆಯ ಪ್ರತೀಕ: ಜ್ಞಾನಪ್ರಕಾಶ ಸ್ವಾಮಿ

ಬೆಂಗಳೂರು, ಡಿ.2: ಪ್ರವಾದಿ ಮುಹಮ್ಮದ್(ಸ) ತಮ್ಮ ನೆರೆಮನೆಯವರ ಹಸಿವಿನ ಬಗ್ಗೆಯೂ ಗಮನ ಹರಿಸುವಂತೆ ಮುಸ್ಲಿಮರಿಗೆ ನೀಡಿದ್ದ ಮಾರ್ಗದರ್ಶನವು ಇಡೀ ವಿಶ್ವಕ್ಕೆ ಅವರೊಬ್ಬ ಕೋಮುಸೌಹಾರ್ದತೆಯ ಪ್ರತೀಕ ಎಂಬುದನ್ನು ಸಾರಿ ಹೇಳುತ್ತದೆ ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮಿ ಅಭಿಪ್ರಾಯಪಟ್ಟರು.

ಶನಿವಾರ ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಈದ್ಗಾ ಬಿಲಾಲ್‌ನಲ್ಲಿ ಜಮೀಯತ್ ಉಲಮಾ ಕರ್ನಾಟಕ ಸಂಘಟನೆಯು ಮೀಲಾದ್ದುನ್ನಬಿ ಅಂಗವಾಗಿ ಆಯೋಜಿಸಿದ್ದ ‘ಪ್ರವಾದಿ ಮುಹಮ್ಮದ್(ಸ) ದೃಷ್ಟಿಯಲ್ಲಿ ಕೋಮುಸೌಹಾರ್ದತೆ’ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

ನೆರೆ ಮನೆಯವರು ಹಸಿವಿನಿಂದ ಬಳಲುತ್ತಿದ್ದರೆ ಮೊದಲು ಅವರಿಗೆ ಊಟ ನೀಡಬೇಕು. ಆನಂತರ, ನೀವು ಊಟ ಮಾಡಬೇಕು ಎಂಬ ಸಂದೇಶವನ್ನು ಇಸ್ಲಾಮ್ ಧರ್ಮದಲ್ಲಿ ನೀಡಲಾಗಿದೆ. ನೆರೆ ಮನೆಯವರು ಯಾವುದೆ ಧರ್ಮಕ್ಕೆ ಸೇರಿರಲಿ ಅವರ ಯೋಗಕ್ಷೇಮ ವಿಚಾರಿಸುವ ಸಂದೇಶವು ಅತ್ಯಮೂಲ್ಯವಾದದ್ದು ಎಂದು ಅವರು ಹೇಳಿದರು.
ಕೋಮುಸೌಹಾರ್ದತೆಯ ಸಂದೇಶ ಸಾರುವ ಇಸ್ಲಾಮ್ ಧರ್ಮವು, ಯಾವುದೆ ಕಾರಣಕ್ಕೂ ಹಿಂಸೆಯನ್ನು ಪ್ರಚೋದಿಸುವ ಭಯೋತ್ಪಾದನೆಯ ಸಂದೇಶ ನೀಡುವುದಿಲ್ಲ. ಇವತ್ತು ಜಗತ್ತಿನೆಲ್ಲೆಡೆ ಮೀಲಾದ್ದುನ್ನಬಿ ಆಚರಣೆ ಮಾಡಲಾಗುತ್ತಿದೆ. ಪ್ರವಾದಿ ಮುಹಮ್ಮದ್ ಬೋಧಿಸಿದ ಕೋಮುಸೌಹಾರ್ದತೆಯ ಸಂದೇಶವನ್ನು ಪ್ರಧಾನಿ ನರೇಂದ್ರಮೋದಿ ಹಾಗೂ ಅವರ ಸಂಗಡಿಗರು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ದೇಶದ ಸ್ವಾತಂತ್ರ ಹೋರಾಟದಲ್ಲಿ ಮುಸ್ಲಿಮರು ಮುಂಚೂಣಿಯಲ್ಲಿದ್ದು ಹೋರಾಟ ಮಾಡಿ ತಮ್ಮ ರಕ್ತ ಹರಿಸಿದ್ದಾರೆ. ಆದರೆ, ದುರಾದೃಷ್ಟವಶಾತ್ ಈಗ ದೇಶದಲ್ಲಿ ದನಗಳ ಪೂಜೆ ನಡೆಯುತ್ತಿದೆಯೋ ಹೊರತು ಜನಗಳ ಪೂಜೆಯಲ್ಲ. ಮಾಂಸಾಹಾರದ ಹೆಸರಿನಲ್ಲಿ ಗಲಭೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಉತ್ತರಪ್ರದೇಶದಲ್ಲಿ ಮುಗ್ಧ ಅಖ್ಲಾಕ್‌ರನ್ನು ಹತ್ಯೆ ಮಾಡಿ, ಕೋಮುಸೌರ್ಹಾದತೆಯ ಮಾತುಗಳನ್ನು ಆಡಲಾಗುತ್ತಿದೆ. 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎನ್ನುವವರು ಕೇವಲ ಅಂಬಾನಿ, ಅದಾನಿಯಂತಹವರ ವಿಕಾಸ ಮಾಡುತ್ತಿದ್ದಾರೆ. ದೇಶವು ಮಾಂಸಾಹಾರ ಸೇವಿಸುವವರಿಂದ ಹಾಳಾಗಿಲ್ಲ, ತುಪ್ಪ ತಿನ್ನುವವರಿಂದ ಹಾಳಾಗಿದೆ ಎಂದು ಜ್ಞಾನಪ್ರಕಾಶ ಸ್ವಾಮಿ ತಿಳಿಸಿದರು.

ಹಿಂದೂ-ಮುಸ್ಲಿಮರ ನಡುವಿನ ಕೋಮುಸೌಹಾರ್ದತೆಯನ್ನು ಕಾಪಾಡುವಲ್ಲಿ ಶ್ರಮಿಸಿದ ಮೈಸೂರು ಹುಲಿ ಟಿಪ್ಪುಸುಲ್ತಾನ್ ‘ಅನರ್ಘ್ಯರತ್ನ’ ಎಂದು ರಾಷ್ಟ್ರಪಿತ ಮಹಾತ್ಮಗಾಂಧೀಜಿ ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಹೇಳಿದ್ದಾರೆ. ದಲಿತರಿಗೆ ಭೂಮಿ ಹಂಚಿ, ಅವರಿಗೆ ಗೌರವಯುತ ಹುದ್ದೆಗಳನ್ನು ನೀಡಿದ ದೇಶದ ಮೊದಲ ರಾಜ ಟಿಪ್ಪುಸುಲ್ತಾನ್ ಎಂದು ಜ್ಞಾನಪ್ರಕಾಶ ಸ್ವಾಮಿ ತಿಳಿಸಿದರು.

ಭಾರತದಲ್ಲಿ ಮುಸ್ಲಿಮ್ ಅರಸರು 850 ವರ್ಷಗಳ ಕಾಲ ಆಡಳಿತ ನಡೆಸಿದರು. ಆದರೆ, ದೇಶದ ಸ್ವಾತಂತ್ರಕ್ಕಾಗಿ 200 ವರ್ಷಗಳ ಕಾಲ ಆಡಳಿತ ನಡೆಸಿದ ಬ್ರಿಟಿಷರ ವಿರುದ್ಧ ಮಾತ್ರ ಹೋರಾಟ ನಡೆಯಿತು. ಇದರ ಅರ್ಥ ಮುಸ್ಲಿಂ ಅರಸು ಶಾಂತಿ ಪ್ರಿಯರಾಗಿ, ದೇಶದ ಅಭಿವೃದ್ಧಿಗಾಗಿ ಆಡಳಿತ ನಡೆಸಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಎನ್‌ಐಎಯಿಂದ ಬಂಧಿಸಲ್ಪಟ್ಟು ಇತ್ತೀಚೆಗಷ್ಟೇ ನಿರಪರಾಧಿಯಾಗಿ ಬಿಡುಗಡೆಯಾಗಿ ಇದೇ ಮೊದಲ ಬಾರಿಗೆ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಮೌಲಾನ ಅನ್ಝರ್ ಶಾ ಖಾಸ್ಮಿ, ಜೈಲಿನ ಜೀವನವು ಸ್ನೇಹಿತರು ಹಾಗೂ ಶತ್ರುಗಳ ಪರಿಚಯವನ್ನು ಮಾಡಿಸುತ್ತದೆ. ನನ್ನ ಬಂಧನವಾಗುತ್ತಿದ್ದಂತೆ ಅನೇಕ ಸ್ನೇಹಿತರು ನನ್ನ ಮೊಬೈಲ್ ಸಂಖ್ಯೆಯನ್ನೆ ಅಳಿಸಿ ಹಾಕಿದರು ಎಂದರು.

ನಾನು ಇಮಾಂ ಆಗಿದ್ದ ಮಸ್ಜಿದ್‌ಗೆ ನಮಾಝ್ ಮಾಡಲು ಹೋಗಲು ನನ್ನ ಪರಿಚಯದವರು ಹೆದರುತ್ತಿದ್ದರು. ಆದರೆ, ಜಮೀಯತ್ ಉಲಮಾ ಹಿಂದ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಅರ್ಶದ್ ಮದನಿ ಹಾಗೂ ಅವರ ಸಂಘಟನೆಯು ನನ್ನಂತಹ ಅನೇಕ ನಿರಪರಾಧಿಗಳನ್ನು ಜೈಲಿನ ಕರಾಳ ಬದುಕಿನಿಂದ ಹೊರತರುವ ಪ್ರಯತ್ನ ಮಾಡುತ್ತಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಭಯೋತ್ಪಾದನೆಯ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟವರ ಪರವಾಗಿ ವಾದ ಮಂಡಿಸಲು ವಕೀಲರು ಸಿಗುವುದಿಲ್ಲ. ಲಕ್ಷಾಂತರ ರೂ.ಗಳ ಶುಲ್ಕವನ್ನು ನ್ಯಾಯವಾದಿಗಳು ಕೇಳುತ್ತಾರೆ. ಬಂಧನಕ್ಕೊಳಗಾದ ವ್ಯಕ್ತಿಯ ಇಡೀ ಕುಟುಂಬದ ಬದುಕು ಅಂಧಾಕಾರದಲ್ಲಿ ಮುಳುಗುತ್ತದೆ. ಆ ಪರಿಸ್ಥಿತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ನೊಂದು ನುಡಿದರು.

ಸಮಾವೇಶದ ಅಧ್ಯಕ್ಷತೆಯನ್ನು ಜಮೀಯತ್ ಉಲಮಾ ಹಿಂದ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಅರ್ಶದ್ ಮದನಿ ವಹಿಸಿದ್ದರು. ರಾಜ್ಯಾಧ್ಯಕ್ಷ ಮೌಲಾನ ಅಬ್ದುಲ್ ರಹೀಮ್, ಮುಫ್ತಿ ಶುಐಬುಲ್ಲಾಖಾನ್, ಮೌಲಾನ ಮುಫ್ತಿ ಸೈಯ್ಯದ್ ಮಾಸೂಮ್ ಸಾಖಿಬ್, ಮುಖಂಡರಾದ ಶಫೀವುಲ್ಲಾ, ಮುಹಮ್ಮದ್ ನಝೀರ್‌ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X