Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. 'ತುಳುನಾಡೋಚ್ಚಯ -2017' :...

'ತುಳುನಾಡೋಚ್ಚಯ -2017' : ಪುತ್ತೂರಿನಲ್ಲಿ ಸಹಿ ಸಂಗ್ರಹ ಅಭಿಯಾನ

'ತುಳು' ಭಾಷೆ ನಾಡಿನ ಅಭಿಮಾನದ ಭಾಷೆ: ಸುಧಾಕರ ಶೆಟ್ಟಿ

ವಾರ್ತಾಭಾರತಿವಾರ್ತಾಭಾರತಿ6 Dec 2017 7:10 PM IST
share
ತುಳುನಾಡೋಚ್ಚಯ -2017 : ಪುತ್ತೂರಿನಲ್ಲಿ ಸಹಿ ಸಂಗ್ರಹ ಅಭಿಯಾನ

ಪುತ್ತೂರು,ಡಿ.6: ತುಳು ಭಾಷೆಗೆ ತನ್ನದೇ ಆದ ಮಾನ್ಯತೆಯಿದೆ.ಎಲ್ಲರಲ್ಲೂ ಹುದುಗಿಕೊಳ್ಳುವ ಮನಸ್ಸು ಆ ಭಾಷೆಗಿರುವುದರಂದ ತುಳುನಾಡಿನ ಅಭಿಮಾನದ ಭಾಷೆಯಾಗಿದೆ. ಇದನ್ನು ಬೆಳೆಸುವ ನಿಟ್ಟಿನಲ್ಲಿ ತುಳುನಾಡೋಚ್ಚಯ ಹಬ್ಬ ಪೂರಕವಾಗಿದೆ ಎಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಹೇಳಿದರು.

ವಿಶ್ವತುಳುವೆರೆ ಆಯನೊ ಕೂಟ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಹಾಗೂ ಮುದ್ರಾಡಿ ನಾಟ್ಕದೂರು  ಮತ್ತು ನಮ ತುಳುವೆರ್ ಕಲಾಸಂಘಟನೆ ನೇತೃತ್ವದಲ್ಲಿ ತುಳುನಾಡ ರಕ್ಷಣಾ ವೇದಿಕೆ, ಸುಮನಸಾ ಕೊಡವೂರು, ಉಡುಪಿ ಹಾಗೂ ವಿವಿಧ ಕೂಟಗಳ ಸಹಕಾರದಿಂದ ಪಿಲಿಕುಳ ತುಳು ಸಂಸ್ಕøತಿ ಗ್ರಾಮದಲ್ಲಿ ಡಿ. 23,24ರಂದು ನಡೆಯುವ "ತುಳುನಾಡೋಚ್ಚಯ -2017" ಸಮಾರಂಭಕ್ಕೆ ಪೂರ್ವಭಾವಿಯಾಗಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಎದುರು ಗದ್ದೆಯಲ್ಲಿ ಬುಧವಾರ ನಡೆದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ತುಳು ಮೃದುತ್ವಕ್ಕೆ ಹೆಸರಾದ ಭಾಷೆಯಾಗಿದ್ದು, ತುಳು ಜನರು ಮಾನವೀಯ ಮೌಲ್ಯಗಳ ಹರಿಕಾರರು. ಈ ಹಿನ್ನಲೆಯಲ್ಲಿ ವಿವೇಕಯುತ ತುಳು ಭಾಷೆಗೆ ಪ್ರಾಧಾನ್ಯತೆ ದೊರಕಬೇಕು. ತುಳುನಾಡೋಚ್ಚಯ ಹಬ್ಬದ ಮುಖಾಂತರ ತುಳು ಎಲ್ಲೆಡೆ ಪಸರಿಸಲಿ. ತುಳು ಕೇವಲ ಭಾಷೆಯಲ್ಲ. ಅದೊಂದು ಸಂಸ್ಕøತಿ ಬಿನ್ನಾಣದ ಮೆರುಗಾಗಿದೆ ಎಂದರು. 

ಪುತ್ತೂರು ತುಳು ಕೂಟದ ಅಧ್ಯಕ್ಷರಾದ ಪೂವರಿ ತುಳು ಮಾಸ ಪತ್ರಿಕೆ ಸಂಪಾದಕ ವಿಜಯ ಕುಮಾರ್ ಹೆಬ್ಬಾರಬೈಲು ಮಾತನಾಡಿ ತುಳು ಭಾಷೆ ಉಳಿಯಬೇಕಾದರೆ ತಳಮಟ್ಟದಿಂದಲೇ ಅದರ ಅಭಿಯಾನ ಆರಂಭವಾಗಬೇಕು. ತುಳು ನಾಡಿನ ಮೂಲ ತುಳು ಲಿಪಿ, ತುಳು ಮಾಧ್ಯಮ, ತುಳು ಶಿಕ್ಷಣದ ಮೂಲಕ ತುಳು ಭಾಷೆಯನ್ನು ಉಳಿಸುವ ಕಾರ್ಯವಾಗುತ್ತಿದೆ. ಆದರೆ ತುಳು ನಾಡಿನ ಪರಂಪರೆ ಉಳಿಯುವುದರೊಂದಿಗೆ ತುಳು ಅಭಿಮಾನವು ಹೆಚ್ಚಾಗಬೇಕು. ಇದಕ್ಕೆ ತುಳುನಾಡಚ್ಚಯ-2017 ಪ್ರಮುಖ ದಾರಿಯಾಗಲಿದೆ. ತುಳು ಭಾಷೆ ಸಂವಿಧಾನ ಪರಿಚ್ಚೇದ 8 ಕ್ಕೆ ಸೇರ್ಪಡೆಯಾಗಬೇಕೆಂದು ಹಲವು ವರ್ಷದ ಬೇಡಿಕೆಯಾಗಿದೆ. ಈ ಬೇಡಿಕೆ ಈಡೇರಬೇಕು. ಮನೆಯಿಂದಲೇ ತುಳು ಅಭಿಯಾನ ಆರಂಭವಾದರೆ ಪೂರ್ಣ ಮಟ್ಟದ ಅಭಿವೃದ್ಧಿ ಖಂಡಿತ. ತುಳು ವಿಸ್ತಾರವಾಗಿ ಜನರೊಂದಿಗೆ ಬೆರೆತಾಗ ಮಾತ್ರ ಆ ಭಾಷೆಗೆ ಮಾನ್ಯತೆ ದೊರೆಯುತ್ತದೆ. ಇದು ತುಳುನಾಡಚ್ಚಯ ಸಂಕಲ್ಪವಾಗಿದೆ ಎಂದರು. 

ತುಳುನಾಡೋಚ್ಚಯದ ಸಂಚಾಲಕರಾದ ನಮ್ಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ ಮೋಹನ ಮುದ್ರಾಡಿ ಮಾತನಾಡಿ ತುಳುನಾಡೋಚ್ಚಯ 2017 ಮೂಲಕ ತುಳು ಅಭಿಮಾನಿಗಳು ಒಂದುಗೂಡಿ ಸಹಿ ಸಂಗ್ರಹಣೆಯ ಮೂಲಕ ತುಳು ಭಾಷೆಗೆ ಜೀವ ತುಂಬಿಸುವ ಕೆಲಸ ಮಾಡುವುದರೊಂದಿಗೆ ತುಳುಭಾಷೆಯನ್ನು ಉಳಿಸುವ ಕಾರ್ಯ ಮಾಡಲಾಗುತ್ತಿದೆ. ಉಡುಪಿ ಪೇಜಾವರ ಮಠಾಧೀಶರಾದ ವಿಶ್ವೇಶ್ವತೀರ್ಥ ಶ್ರೀ ಪಾದರು ಪ್ರಥಮವಾಗಿ ಸಹಿ ಹಾಕುವ ಮುಖಾಂತರ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ತುಳುಭಾಷೆಯು ಸಂಸ್ಕೃತಿ ಹಾಗೂ ಸಾಹಿತ್ಯದಿಂದ ಹೊರತಾದ ವ್ಯಕ್ತಿ ಬದುಕಿನ ಅನಾವರಣವಾಗಿದೆ. ತುಳುನಾಡ ಅಭಿವೃದ್ದಿ ಪ್ರಾಧಿಕಾರದ ಸ್ಥಾಪನೆ, ಮಂಗಳೂರು ಉಚ್ಚನ್ಯಾಯಾಲಯ ಪೀಠ ಆರಂಭ, ಕಾಸರಗೋಡು-ಕರ್ನಾಟಕಕ್ಕೆ ಸೇರಬೇಕೆಂಬ ಒತ್ತಾಯಗಳನ್ನು ಮುಂದಿಟ್ಟಕೊಂಡು ತುಳುನಾಡೋಚ್ಚಯ ಮುಂದೆ ಸಾಗಲಿದೆ ಎಂದರು. 

ತುಳುಕೂಟ ಮಾಜಿ ಅಧ್ಯಕ್ಷ ಐ.ಕೆ ಬೊಳುವಾರು, ಕರ್ನಾಟಕ ತುಳು ಅಕಾಡೆಮಿ ಸದಸ್ಯ ನಿರಂಜನ ರೈ ಮಠಂತಬೆಟ್ಟು, ಹಿಂದೂ ಜಾಗರಣಾ ವೇದಿಕೆಯ ಪುತ್ತೂರು ಘಟಕ ಅಧ್ಯಕ್ಷ ಕೃಷ್ಣಪ್ರಸಾದ್ ಶೆಟ್ಟಿ, ತುಳು ರಕ್ಷಣಾ ವೇದಿಕೆ ಯುವ ಘಟಕ ಅಧ್ಯಕ್ಷ ಸಂತೋಷ್ ರೈ ಬೈಲುಗುತ್ತು ಶುಭಹಾರೈಸಿದರು. ಬಳಿಕ ಪುತ್ತೂರು ನಗರದಲ್ಲಿ ಸಹಿ ಸಂಗ್ರಹಣಾ ಅಭಿಯಾನ ನಡೆಯಿತು.  

share
ವಾರ್ತಾಭಾರತಿ
ವಾರ್ತಾಭಾರತಿ
Next Story
X