Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಜಗವ ನಡುಗಿಸಿದ ಆ ಹತ್ತು ದಿನ

ಜಗವ ನಡುಗಿಸಿದ ಆ ಹತ್ತು ದಿನ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ7 Dec 2017 12:13 AM IST
share
ಜಗವ ನಡುಗಿಸಿದ ಆ ಹತ್ತು ದಿನ

ಸೋವಿಯತ್ ರಶ್ಯಾದಲ್ಲಿ ನಡೆದ ಐತಿಹಾಸಿಕ ಜಗತ್ಪ್ರಸಿದ್ಧ ಅಕ್ಟೋಬರ್ ಕ್ರಾಂತಿಗೆ ಈಗ ನೂರರ ಸಂಭ್ರಮ. ಝಾರ್ ಚಕ್ರವರ್ತಿಯ ದಬ್ಬಾಳಿಕೆಯಿಂದ ರೋಸಿ ಹೋದ ಜನತೆ ಬೋಲ್ಶೆವಿಕ್ ನಾಯಕ ಲೆನಿನ್ ನೇತೃತ್ವದಲ್ಲಿ ಒಗ್ಗೂಡಿ ಹೋರಾಟದ ಮಾರ್ಗ ಹಿಡಿದು ಸಶಸ್ತ್ರ ದಂಗೆಯ ಮೂಲಕ ಹೊಸತೊಂದು ಆಡಳಿತವನ್ನು ಸೋವಿಯತ್‌ಗೆ ನೀಡಿದ ದಿನ. ಬಂಡವಾಳಶಾಹಿ ವ್ಯವಸ್ಥೆ ನಡುಗಿ ನಿಂತ ಸಂದರ್ಭ ಅದು. ಆ ಹೋರಾಟದ ಹಿನ್ನೆಲೆ ಮತ್ತು ಕೊನೆಯ ಹತ್ತು ದಿನಗಳ ಘಟನಾವಳಿಗಳನ್ನು ‘ಜಗವ ನಡುಗಿಸಿದ ಆ ಹತ್ತು ದಿನ’ ಕೃತಿಯಲ್ಲಿ ನೀಡಲಾಗಿದೆ. ಜಾನ್ ರೀಡ್ ಬರೆದಿರುವ ಕೃತಿಯನ್ನು ಡಾ. ಬಿ. ಆರ್. ಮಂಜುನಾಥ್ ಅವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಜಾನ್ ರೀಡ್ ಎಂಬ ಅಮೆರಿಕನ್ ಪತ್ರಕರ್ತ ಅಲ್ಲಿ ನಡೆದ ವಿದ್ಯಮಾನಗಳನ್ನು ಕಣ್ಣಾರೆ ಕಂಡು ತನ್ನ ‘ಟೆನ್ ಡೇಸ್ ದಟ್ ಶುಕ್ ದ ವರ್ಲ್ಡ್’ ಕೃತಿಯಲ್ಲಿ ಅಕ್ಷರ ರೂಪಕ್ಕಿಳಿಸಿದ್ದಾರೆ. ಅದರ ಸಂಕ್ಷಿಪ್ತ ರೂಪಾಂತರ ಈ ಕೃತಿ. ಒಬ್ಬ ವರದಿಗಾರ ಆಳದಲ್ಲಿ ಆ್ಯಕ್ಟಿವಿಸ್ಟ್ ಆಗಿದ್ದಾಗ ಜಾನ್ ರೀಡ್‌ನಂತಹ ಬರಹಗಾರ ಹುಟ್ಟಿಕೊಳ್ಳುತ್ತಾನೆ. ಆ ಬದ್ಧತೆಯೇ ಅವನಿಂದ ಈ ಕೃತಿಯನ್ನು ಬರೆಸಿದೆ. ಅಂದಿನ ದಿನಗಳ ವರದಿಯನ್ನು ಆತ ಯಾವುದೋ ಹೊಟೇಲ್ ಕೋಣೆಯಲ್ಲಿ ಕೂತು ಮಾಡಲಿಲ್ಲ. ಅವನು ರಸ್ತೆಯಲ್ಲಿ, ಯುದ್ಧಭೂಮಿಯಲ್ಲಿ, ಕಂದರಗಳಲ್ಲಿ ಇಳಿದು ವರದಿಯನ್ನು ಮಾಡಿದ. ನಾಲ್ಕು ಬಾರಿ ಮೃತ್ಯುವಿನ ಬಾಯಿಂದ ತಪ್ಪಿಸಿಕೊಂಡು ಬಂದ. ರಶ್ಯನ್ ಭಾಷೆಯೇ ಸರಿಯಾಗಿ ಬರದಿದ್ದ ರೀಡ್ ಬರೆದ ಕೃತಿಯನ್ನು ಸ್ವತಃ ಲೆನಿನ್ ಕೂಡ ಶ್ಲಾಘಿಸಿದ್ದಾರೆ. ಇದು ಕ್ರಾಂತಿಯ ಸಮಗ್ರ ಕಥನವನ್ನು ತೆರೆದಿಡುವುದಿಲ್ಲ. ಕೆಲವು ನಿರ್ದಿಷ್ಟ ಘಟನೆಗಳ ಸಂಗ್ರಹ ರೂಪಗಳನ್ನು ಪತ್ರಕರ್ತನಾಗಿ ರೀಡ್ ಕಟ್ಟಿಕೊಡುತ್ತಾನೆ. ಆದರೆ ಆ ಘಟನೆಗಳು ಒಟ್ಟು ಕ್ರಾಂತಿಯ ಸ್ವರೂಪವನ್ನು ನಮ್ಮಾಳಗೆ ತೆರೆದಿಡಲು ಯಶಸ್ವಿಯಾಗುತ್ತವೆ. ಈ ಕೃತಿಯಲ್ಲಿ ಒಟ್ಟು 12 ಅಧ್ಯಾಯಗಳಿವೆ. ಕ್ರಾಂತಿಗೆ ಮುಂಚಿನ ದಿನ, ಹಂಗಾಮಿ ಸರಕಾರದ ಪತನ, ವಿಮೋಚನಾ ಸಮಿತಿಯ ಕಾರ್ಯವೈಖರಿ, ಪ್ರತಿಕ್ರಾಂತಿ ಹೀಗೆ ಕ್ರಾಂತಿಯ ಹಂತಗಳನ್ನು ವಿವರಿಸುತ್ತಾ ವಿಜಯದ ಕ್ಷಣಗಳನ್ನು, ಹುತಾತ್ಮರಾದ ಕ್ರಾಂತಿಕಾರರನ್ನು ಭಾವುಕವಾಗಿ ಕಟ್ಟಿಕೊಡುತ್ತಾರೆ. ರಶ್ಯನ್ ಕ್ರಾಂತಿಯ ಉತ್ಕರ್ಷವನ್ನು ಮಾತ್ರ ಇದು ತೆರೆದಿಡುವುದರಿಂದ ಮತ್ತು ಅನಂತರ ವೈಫಲ್ಯಗಳನ್ನು ಮುಟ್ಟುವುದಿಲ್ಲವಾದುದರಿಂದ ಇದು ಕ್ರಾಂತಿಯ ಸಮಗ್ರ ದರ್ಶನವನ್ನು ಓದುಗರಿಗೆ ಮಾಡಿಸಲಾರದು ಎನ್ನುವುದು ಕೃತಿಯ ಕೊರತೆಯಾಗಿದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 232. ಮುಖಬೆಲೆ 180 ರೂಪಾಯಿ.

share
-ಕಾರುಣ್ಯಾ
-ಕಾರುಣ್ಯಾ
Next Story
X