ಪೆಟ್ರೋಲ್ ಬಾಂಬ್ಗಳು ಮುಸ್ಲಿಂ ಮತಾಂಧರ ವ್ಯವಸ್ಥಿತ ಸಂಚನ್ನು ಬಯಲುಗೊಳಿಸಿದೆ: ರಘು
ಚಿಕ್ಕಮಗಳೂರು, ಡಿ.7: ದತ್ತಜಯಂತಿ ದಿನ ನಗರದ ತಮಿಳು ಕಾಲೋನಿಯಲ್ಲಿ ದೊರೆತ ಜೀವಂತ ಪೆಟ್ರೋಲ್ಬಾಂಬ್ಗಳು ಮುಸ್ಲಿಂ ಮತಾಂಧರ ವ್ಯವಸ್ಥಿತ ಸಂಚನ್ನು ಬಯಲುಗೊಳಿಸಿದೆ ಎಂದು ಬಜರಂಗದಳದ ರಾಜ್ಯ ಸಹಸಂಚಾಲಕ ರಘು ಸಕಲೇಶಪುರ ಹೇಳಿದ್ದಾರೆ.
ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮತನಾಡಿ, ಕೇರಳ ಮಾದರಿಯಲ್ಲಿ ದಾಳಿ ನಡೆಸಲು ರೂಪಿಸಿದ್ದ ಷಡ್ಯಂತರವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಕುರಿತಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಒತ್ತಡಕ್ಕೆ ಮಣಿಯದೆ ದೇಶದ ಆಂತರಿಕ ಭದ್ರತೆ ವಿಚಾರವಾಗಿರುವುದ ರಿಂದ ಸೂಕ್ತ ತನಿಖೆಯ ಅಗತ್ಯವಿದ್ದು ಎಸ್ಪಿ ಅಣ್ಣಾಮಲೈ ಅವರ ಬಗ್ಗೆ ತಮ್ಮ ಸಂಘಟನೆಗೆ ಅಪಾರ ಗೌರವವಿದ್ದು ಅವರು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆವಹಿಸಬೇಕೆಂದು ಒತ್ತಾಯಪಡಿಸುವುದಾಗಿ ಹೇಳಿದರು.
ದತ್ತಜಯಂತಿ ಯಶಸ್ವಿಯಾಗಿ ನಡೆಸಲು ತಮ್ಮ ಸಂಘಟನೆಗೆ ಸಹಕರಿಸಿದ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ ಅವರು ದತ್ತಜಯಂತಿ ಪೂರ್ವಭಾವಿಯಾಗಿ ನಡೆದ ಅನು ಸೂಯ ಜಯಂತಿ, ಶೋಭಾಯಾತ್ರೆ ಮತ್ತು ದತ್ತ ಜಯಂತಿಗೆ ಆಗಮಿಸಿದ ದತ್ತಮಾಲಾಧಾರಿಗಳ ಅಪಾರ ಸಂಖ್ಯೆಯನ್ನು ಸಹಿಸದ ಕೆಲವು ಮುಸ್ಲಿಂ ಮತಾಂಧರು ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ, ಬೈಕ್, ಬಸ್ಸುಗಳು ಇತರ ವಾಹನಗಳನ್ನು ಜಖಂಗೊಳಿಸಿರುವುದು ಹೇಯ ಕೃತ್ಯವಾಗಿದೆ ಎಂದು ಅವರು ಹೇಳಿದರು.
ಶಾಂತಿಪ್ರಿಯವಾದ ಈ ಜಿಲ್ಲೆಯನ್ನು ಬಾಂಬ್ ಸಂಸ್ಕøತಿಯ ಚಟುವಟಿಕೆಯ ಕೇಂದ್ರವಾಗಿಸಲು ಹೊರಟಿರುವ ಸಂಘಟನೆಗಳ ಶಕ್ತಿಯನ್ನು ಬಜರಂಗದಳ ಸಹಿಸುವುದಿಲ್ಲ. ಕೇರಳದಿಂದ ಬಂದ ಹದಿನೈದಕ್ಕೂ ಹೆಚ್ಚು ಎಸ್ಡಿಪಿಐ ಮತ್ತು ಡಿಎಫ್ಐ ಕಾರ್ಯಕರ್ತರು ವಿಧ್ವಂಸಕ ಕೃತ್ಯಕ್ಕೆ ತಯಾರಿ ಮೂಲಕ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಚಾರ್ಮಾಡಿ ಬಳಿ ಪಿಎಫ್ಐ ಮತ್ತು ಎಸ್ಡಿಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕೆಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಗಿರಿಯಲ್ಲಿ ಅಂದು ಭಗವಾಧ್ವಜ ಹಾರಿಸಿದ ಜಾಗ ನಿರ್ಬಂಧಿತ ಪ್ರದೇಶವಲ್ಲ. ಜೊತೆಗೆ ಅಲ್ಲಿನ ಎರಡು ಗೋರಿಗಳನ್ನು ರಕ್ಷಿಸಿದರೆಂದು ಈರ್ವರು ಪೊಲೀಸರಿಗೆ ಎಸ್ಪಿ ಬಹುಮಾನ ಘೋಷಿಸಿರುವುದು ಗೋರಿ ನಾಶವಾಗಿಲ್ಲ ಎಂಬುದನ್ನು ಸಾಕ್ಷೀಕರಿಸುತ್ತದೆ ಎಂದ ಅವರು ಅಲ್ಲಿರುವುದು ನಕಲಿ ಗೋರಿಗಳೆಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಘಟನೆಯ ಬಳಿ ಇದ್ದ ಪತ್ರಕರ್ತರನ್ನು ಮಾಲಾಧಾರಿಗಳು ನಿಂಧಿಸಿದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು ನಿಂಧಿಸಿದವರು ತಮ್ಮ ಕಾರ್ಯಕರ್ತರಲ್ಲ. ಕಿಡಿಗೇಡಿಗಳು ಜೊತೆ ಸೇರಿಕೊಂಡು ಅಂತಹ ಕೃತ್ಯ ಮಾಡಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಯೋಗೀಶ್ರಾಜ್ ಅರಸ್, ಪ್ರೇಂಕಿರಣ್, ಮುರಳೀಧರ್ ಕಿಣಿ, ಕೃಷ್ಣ ಪಾಲ್ಗೊಂಡಿದ್ದರು.







