Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಂದು ಬಾಬರಿ ಮಸೀದಿ ಕೆಡವಿದ್ದವರಿಗೆ ಇಂದು...

ಅಂದು ಬಾಬರಿ ಮಸೀದಿ ಕೆಡವಿದ್ದವರಿಗೆ ಇಂದು ಮಸೀದಿ ಕಟ್ಟುವ ಗುರಿ

ಪಶ್ಚಾತ್ತಾಪದೊಂದಿಗೆ ಇಸ್ಲಾಂ ಧರ್ಮ ಸ್ವೀಕರಿಸಿದ ಕರಸೇವಕರು

ವಾರ್ತಾಭಾರತಿವಾರ್ತಾಭಾರತಿ8 Dec 2017 10:10 PM IST
share
ಅಂದು ಬಾಬರಿ ಮಸೀದಿ ಕೆಡವಿದ್ದವರಿಗೆ ಇಂದು ಮಸೀದಿ ಕಟ್ಟುವ ಗುರಿ

ಅಯೋಧ್ಯೆ, ಡಿ.8: 1992ರ ಡಿಸೆಂಬರ್ 6ರಂದು ಪಾನಿಪತ್‍ನ ಶಿವಸೇನೆ ನಾಯಕರಾಗಿದ್ದ ಬಲ್‍ಬೀರ್ ಸಿಂಗ್ ಅತ್ಯುತ್ಸಾಹದಲ್ಲಿದ್ದರು. ಬಾಬರಿ ಮಸೀದಿಯ ಮೇಲೆ ಹತ್ತಿ ಕೇಕೆ ಹಾಕಿದ್ದರು. ಆದರೆ 25 ವರ್ಷಗಳ ನಂತರ ಅವರು ಸಂಪೂರ್ಣ ಬದಲಾಗಿದ್ದಾರೆ. ಈ ಕೃತ್ಯ ಎಸಗಿದ ನಂತರ ಪಾಪಪ್ರಜ್ಞೆ ಅವರನ್ನು ಬೆಂಬಿಡದೆ ಕಾಡುತ್ತಿತ್ತು. ತಾನು ಮಾಡಿದ ಪಾಪದ ಪ್ರಾಯಶ್ಚಿತ ಮಾಡುವ ಸಲುವಾಗಿ 100 ಮಸೀದಿಗಳನ್ನು ನಿರ್ಮಿಸುವ ನಿರ್ಧಾರ ಮಾಡಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ.

ಬಲ್‍ಬೀರ್ ಸಿಂಗ್ ಇದೀಗ ಮುಹಮ್ಮದ್ ಮೀರ್ ಆಗಿದ್ದು, ಅವರ ಸಂಗಡಿಗ ಕರಸೇವಕನಾಗಿದ್ದ ಯೋಗೇಂದ್ರಪಾಲ್ ಕೂಡ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದು, ಈಗ ಮುಹಮ್ಮದ್ ಉಮರ್ ಆಗಿದ್ದಾರೆ.

ಬಲ್‍ಬೀರ್ ಸಿಂಗ್ ಈವರೆಗೆ 40 ಮಸೀದಿಗಳನ್ನು  ಕಟ್ಟುವುದರಲ್ಲಿ ಸಹಕರಿಸಿದ್ದಾರೆ. 1992 ಡಿಸೆಂಬರ್ 6ರಂದು ಬಾಬರಿ ಮಸೀದಿಯ ಗೊಮ್ಮಟವನ್ನು ಕೆಡವಲು ಓಡಿ ಹತ್ತಿದವರಲ್ಲಿ ಬಲ್‍ಬೀರ್ ಸಿಂಗ್ ಕೂಡಾ ಇದ್ದರು. ಮಸೀದಿ ಕೆಡವಿದ ಬಳಿಕ ಪಾನಿಪತ್‍ಗೆ ಮರಳಿದಾಗ ಬಲಬೀರ್ ಸಿಂಗ್‍ರಿಗೆ ವೀರೋಚಿತ  ಸ್ವಾಗತ ಸಿಕ್ಕಿತ್ತು. ಅಂದು ತಂದಿದ್ದ ಮಸೀದಿಯ ಎರಡು ಇಟ್ಟಿಗೆಗಳು ಶಿವಸೇನೆಯ ಕಚೇರಿಯಲ್ಲಿ ಈಗಲೂ ಇವೆ.

ನಂತರ ಬಲಬೀರ್ ಸಿಂಗ್‍ರ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳಾಯಿತು. ದೇವ್‍ಬಂದ್‍ನ ವಿದ್ವಾಂಸ ಮೌಲಾನ ಕಲೀಂ ಸಿದ್ದೀಕ್‍ರನ್ನು ಕೊಲ್ಲುವ ಹೊಣೆ ಬಲಬೀರ್‍ ಸಿಂಗ್‍ರಿಗೆ ಸಿಕ್ಕಿತ್ತು. ಇದು ಅವರ ಜೀವನವನ್ನೇ ಬದಲಾಯಿಸಿತ್ತು. ಕಲೀಂ ಸಿದ್ದೀಕ್‍ರನ್ನು ಕೊಲ್ಲಲು ಬಂದ ಬಲ್ ಬೀರ್ ಮೌಲಾನರ ಭಾಷಣ ಆಲಿಸಿದ್ದರು. ಅದರೊಂದಿಗೆ ಅವರ ಜೀವನದಲ್ಲಿ ಭಾರೀ ಬದಲಾವಣೆಯಾಯಿತು. ನಂತರ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಆದರೆ ಊರಿಗೆ ಮರಳಲು ಸಾಧ್ಯವಾಗದೆ ಹೈದರಾಬಾದ್‍ಗೆ ತಮ್ಮ ವಾಸ್ತವ್ಯ ಬದಲಾಯಿಸಿದ್ದಾರೆ.

ಯೋಗೇಂದ್ರಪಾಲ್ ಈಗ ಮುಹಮ್ಮದ್ ಉಮರ್ ಎಂದು ಹೆಸರು ಬದಲಾಯಿಸಿದ್ದಾರೆ. ಇಷ್ಟೇ ಅಲ್ಲದೆ ಸಿಬಿಐ ಆರೋಪಪಟ್ಟಿಯಲ್ಲಿರುವ ಆರೋಪಿಗಳಾದ ಪ್ರವೀಣ್ ಶರ್ಮ, ಸಂತೋಷ್ ದುಬೆ, ರಾಮ್‍ಜಿ ಗುಪ್ತ, ವಿಜಯ್ ತಿವಾರಿ ಮುಂತಾದವರನ್ನು ಪಾಪಪ್ರಜ್ಞೆ ಕಾಡುತ್ತಿದೆ. ಒಂದು ಸಂದರ್ಶನದಲ್ಲಿ ಅವರು ಅದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. 4,000 ಮಂದಿ ಕರಸೇವಕರಿಗೆ ತರಬೇತಿ ನೀಡಿದ ಅಯೋಧ್ಯೆಯ ಬಜರಂಗದಳ ಯುವ ನಾಯಕ ಶಿವ ಪ್ರಸಾದ್‍ಗೆ ಒಂದು ವರ್ಷದ ನಂತರ ಖಿನ್ನತೆಗೆ ಒಳಗಾಗಿದ್ದರು. ಹಲವು ವೈದ್ಯರು, ಪಂಡಿತರನ್ನು ಭೇಟಿಯಾಗಿದ್ದರೂ ಯಾವುದೇ ಪರಿಹಾರ ಲಭಿಸಿರಲಿಲ್ಲ. ಕೊನೆಗೆ ಕೆಲಸ ಹುಡುಕಿ ಶಾರ್ಜಾಕ್ಕೆ ತೆರಳಿದ ಅವರು 1999ರಲ್ಲಿ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿ ಮುಹಮ್ಮದ್ ಮುಸ್ತಫಾ ಆದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X